ಏಮ್ಸ್ ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕನಿಗೆ ದೇಶದ ಮೊಟ್ಟ ಮೊದಲ ಲಸಿಕೆ!
Team Udayavani, Jan 16, 2021, 8:35 PM IST
ನವದೆಹಲಿ: ದೇಶದ ಮೊಟ್ಟ ಮೊದಲ ಲಸಿಕೆ ಪಡೆಯುವ ಭಾಗ್ಯ ಲಭಿಸಿದ್ದು, 33 ವರ್ಷದ ಮನೀಶ್ ಕುಮಾರ್ಗೆ. ನವದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಮಿಕನಾಗಿರುವ ಮನೀಶ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸಮ್ಮುಖದಲ್ಲಿ ಲಸಿಕೆ ನೀಡಲಾಯಿತು.
ಬಳಿಕ ಮಾತನಾಡಿದ ಮನೀಶ್, “ಇದೊಂದು ಬಹಳ ಸುಂದರ ಅನುಭವ. ಲಸಿಕೆ ಪಡೆಯುವಾಗ ನಾನು ಹಿಂಜರಿಯಲಿಲ್ಲ. ಜನರಿಗೂ ಈ ಬಗ್ಗೆ ಯಾವುದೇ ಆತಂಕ ಬೇಡ. ಲಸಿಕೆ ಕುರಿತಾಗಿ ನನ್ನೊಳಗೆ ಈಗ ಯಾವ ಗೊಂದಲಗಳೂ ಇಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಿ’ ಎಂದು “ಎಎನ್ಐ’ಗೆ ಹೇಳಿದ್ದಾರೆ.
“ಹಲವು ಮಂದಿ ಲಸಿಕೆ ಪಡೆಯಲು ಅಂಜುತ್ತಿದ್ದಾಗ, ನಾನು ಸ್ವಪ್ರೇರಣೆಯಿಂದ ಮುಂದೆ ಬಂದೆ. ನನಗೇ ಮೊದಲು ಲಸಿಕೆ ಚುಚ್ಚಿ ಎಂದು ಅಧಿಕಾರಿಗಳನ್ನು ಕೇಳಿಕೊಂಡೆ. ನನಗೆ ಇಲ್ಲಿಯತನಕ ಯಾವುದೇ ಅಡ್ಡಪರಿಣಾಮಗಳಾಗಿಲ್ಲ’ ಎಂದು ತಿಳಿಸಿದರು.
ಮನೀಶ್ ಕಳೆದ 8 ವರ್ಷಗಳಿಂದ ಏಮ್ಸ್ನಲ್ಲಿ ಸ್ವಚ್ಛತಾ ಕಾರ್ಮಿಕ. ಸೋಂಕಿತರು ವಾರ್ಡ್ಗಳಲ್ಲಿ ತುಂಬಿ ತುಳುಕುತ್ತಿದ್ದಾಗ, ಜೀವ ಪಣಕ್ಕಿಟ್ಟು ಸ್ವತ್ಛತೆ ನಡೆಸಿದ್ದ ದಿಟ್ಟ ಸೇವಕ.
ಇದನ್ನೂ ಓದಿ:ಗೋವಾ ಚಿತ್ರೋತ್ಸವಕ್ಕೆ ಸುದೀಪ್ ಚಾಲನೆ : ಕನ್ನಡದಲ್ಲೇ ಮಾತು ಆರಂಭಿಸಿದ ಕಿಚ್ಚ
ಅಂದಹಾಗೆ, ದೇಶದ 2ನೇ ಲಸಿಕೆ ಪಡೆದಿದ್ದು ಹೆಲ್ತ್ಕೇರ್ ಸಿಬ್ಬಂದಿ ಧವಳ್ ದ್ವಿವೇದಿ ಎಂಬುವವರು.
ಇದೊಂದು ಬಹಳ ಸುಂದರ ಅನುಭವ. ಲಸಿಕೆ ಪಡೆಯುವಾಗ ನಾನು ಹಿಂಜರಿಯಲಿಲ್ಲ. ಜನರಿಗೂ ಈ ಬಗ್ಗೆ ಯಾವುದೇ ಆತಂಕ ಬೇಡ. ಲಸಿಕೆ ಕುರಿತಾಗಿ ನನ್ನೊಳಗೆ ಈಗ ಯಾವ ಗೊಂದಲಗಳೂ ಇಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಿ. ಹಲವು ಮಂದಿ ಲಸಿಕೆ ಪಡೆಯಲು ಅಂಜುತ್ತಿದ್ದಾಗ, ನಾನು ಸ್ವಪ್ರೇರಣೆಯಿಂದ ಮುಂದೆ ಬಂದೆ. ನನಗೇ ಮೊದಲು ಲಸಿಕೆ ಚುಚ್ಚಿ ಎಂದು ಅಧಿಕಾರಿಗಳನ್ನು ಕೇಳಿಕೊಂಡೆ. ನನಗೆ ಇಲ್ಲಿಯತನಕ ಯಾವುದೇ ಅಡ್ಡಪರಿಣಾಮಗಳಾಗಿಲ್ಲ.
– ಮನೀಶ್, ಸ್ವಚ್ಛತಾ ಕಾರ್ಮಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ