ಮನೆಯ ನೆಲಮಾಳಿಗೆಯಲ್ಲಿ ಜಿನುಗುತ್ತಿರುವ ಪ್ಲೋರೈಡ್ಯುಕ್ತ ನೀರು
Team Udayavani, Jan 17, 2022, 11:25 AM IST
ಕುಷ್ಟಗಿ: ಕುಷ್ಟಗಿಯ ಬಸವೇಶ್ವರ ವೃತ್ತದ ಬಳಿ ಇರುವ ಬಸನಗೌಡ ಎನ್ ಪಾಟೀಲ ಅವರ ನಿವಾಸದ ನೆಲ ಮಾಳಿಗೆಯ ಕೊಠಡಿಯಲ್ಲಿ ಕಳೆದ ವರ್ಷದಿಂದ ನೀರು ಜಿನಗುತ್ತಿದ್ದು, ಪ್ರತಿ ದಿನ ನೀರು ಹೊರ ಹಾಕುವುದೇ ದಿನಚರಿಯಾಗಿದೆ.
ಕಳೆದ ವರ್ಷದಿಂದ ನೆಲ ಮಾಳಿಗೆಯ ಜಿನುಗುವ ನೀರನ್ನು ಹೊರ ಹಾಕಿ ಸುಸ್ತಾಗಿರುವ ಬಸನಗೌಡ ಪಾಟೀಲರು, ನೀರು ಜಿನುಗುವುದನ್ನು ನಿಯಂತ್ರಿಸಲು ತಜ್ಞರ ಮೊರೆ ಹೋಗಿದ್ದಾರೆ. ಕೃಷ್ಣ ಭಾಗ್ಯ ಜಲ ನಿಗಮದ ಪರಿಣಿತ ತಜ್ಞರು ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನೆಲ ಮಾಳಿಗೆಯ ಸುತ್ತಲೂ ರಂಧ್ರ ಕೊರೆದು ಪರೀಕ್ಷಿಸುವ ವೇಳೆ, ರಂಧ್ರದ ಮೂಲಕ ನೀರು ಮತ್ತಷ್ಟು ಜಿನುಗಲಾರಂಭಿಸಿದೆ. ಅಲ್ಪ ಪ್ರಮಾಣದಲ್ಲಿ ಜಿನಗುತ್ತಿದ್ದ ನೀರಿನ ಪ್ರಮಾಣ ಹೆಚ್ಚಿದೆ. ಕೊರೆದ ರಂಧ್ರಗಳ ಮೂಲಕ ರಾಸಾಯನಿಕ ಬಳಸಿ ನಿಯಂತ್ರಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ವರ್ಷದಿಂದ ದಿನವೂ ಎರಡು ಹೊತ್ತು ನೀರನ್ನು 2 ಎಚ್ ಪಿ (ಅಶ್ವಶಕ್ತಿ) ಮೋಟಾರು ಮೂಲಕ ನೀರು ಚರಂಡಿಗೆ ನೀರು ಹರಿಬಿಡುತ್ತಿದ್ದಾರೆ. ಕೆಲವು ದಿನಗಳಿಂದ ಜಿನುಗುವ ನೀರಿನಿಂದ ಫ್ಲೋರೈಡ್ ಅಂಶವಿರುವ ವಿಚಿತ್ರವಾದ ಬೇರಿನಂತಹ ವಸ್ತುಗಳು ಸೃಷ್ಟಿಯಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಬಸನಗೌಡರ ಮನೆಯ ನೆಲ ಮಾಳಿಗೆಯ ನೀರು ಜಿನುಗದಂತೆ ಎಲ್ಲಾ ಪ್ರಯತ್ನ ಮಾಡಿ ವಿಫಲರಾಗಿದ್ದು, ನೀರು ಶತ್ರುವಾಗಿ ಕಾಡುತ್ತಿದೆ. ಈ ಕುರಿತು ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಮ್ಮ ನೆಲ ಮಾಳಿಗೆಯಲ್ಲಿ ಜಿನಗುವ ನೀರಿನ ಮೂಲ ಎಲ್ಲಿಯದು ತಿಳಿಯುತ್ತಿಲ್ಲ. ನೀರು ಪ್ಲೋರೈಡ್ಯುಕ್ತವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ