ಅಣ್ಣಿಗೇರಿಯ ಪಾರ್ಶ್ವನಾಥ ಬಸದಿಯಲ್ಲಿ ಪಾದಪೀಠ ಶಾಸನ ಪತ್ತೆ


Team Udayavani, Nov 25, 2021, 6:31 PM IST

1-fdf

ಧಾರವಾಡ: ಅಣ್ಣಿಗೇರಿಯಲ್ಲಿ ಪ್ರಾಚೀನ ಪಾರ್ಶ್ವನಾಥ ಬಸದಿಯು ಮಳೆಗಾಲದಲ್ಲಿ ಸೋರುವ ಕಾರಣ, ಛತ್ತಿನ ಜೀರ್ಣೋದ್ದಾರ ಮಾಡುವ ಸಮಯದಲ್ಲಿ ಮೇಲ್ಛಾವಣಿಯಲ್ಲಿ ಪಾದಪೀಠ ಶಾಸನವೊಂದು ದೊರೆತಿದೆ.

ಕೇವಲ ಪಾದಗಳೆರಡು ಇರುವ ಮೂರ್ತಿಯ ಪಾದದ ಕೆಳಗೆ, ಒಂದೂವರೆ ಅಡಿ ಅಗಲ 3 ಇಂಚು ಎತ್ತರದ ಭಾಗದಲ್ಲಿ 3 ಸಾಲುಗಳಲ್ಲಿ ಸುಮಾರು 12 ನೆಯ ಶತಮಾನದ ಆಳವಾಗಿ ಕೆತ್ತಿದ ಸುಂದರ ಅಕ್ಷರಗಳಿರುವ ಶಾಸನ ಇದಾಗಿದೆ. ಮೇಲಿನ ತೀರ್ಥಂಕರ ಮೂರ್ತಿಯ ಕುರುಹುಗಳು, ಲಾಂಛನಗಳು ದೊರೆಯದೇ ಇರುವುದರಿಂದ ಯಾವ ತೀರ್ಥಂಕರನ ವಿಗ್ರಹವೆಂದು ಹೇಳಲು ಸಾಧ್ಯವಾಗುವುದಿಲ್ಲ. ಬಳಗಾರ ಗಣಕ್ಕೆ ಸೇರಿದ ಗುರು ಚಂದ್ರಕೀರ್ತಿ ಭಟ್ಟಾರಕರ ಶ್ರಾವಕ ಶಿಷ್ಯನಾದ ಬಿಂಜರ ಸೇನಬೋವ ಮೂಡಿಮೋಜನ ಮಗ ಬಾಚಣ ಮಾಡಿಸಿದ (ಪ್ರತಿಮೆ) ಎಂದು ಶಾಸನದಿಂದ ತಿಳಿಯುತ್ತದೆ.

ಜೈನಧರ್ಮದ ಪರಿಭಾಷೆಯ ಅನ್ವಯ 3 ಕ್ಕಿಂತ ಹೆಚ್ಚು ಜನ ಮುನಿಗಳು ಒಂದೆಡೆ ಇದ್ದರೆ ಅದಕ್ಕೆ ಗಣವೆಂದು, ೩ಕ್ಕಿಂತ ಹೆಚ್ಚು ಜನ ಒಟ್ಟಾಗಿ ಧರ್ಮ ಪ್ರಭಾವನೆಗಾಗಿ ಊರೂರುಗಳಲ್ಲಿ ಚಲಿಸಿದರೆ ಗಚ್ಛವೆಂದು ಕರೆಯುತ್ತಾರೆ. ಪ್ರಖ್ಯಾತ ಗುರುವೊಬ್ಬನ ಗುರು ಪರಂಪರೆಯಲ್ಲಿ ಈ ಮುನಿಗಳು ಶಿಷ್ಯರಾಗಿ ಮುಂದುವರೆದರೆ ಅದನ್ನು ಅನ್ವಯವೆಂದು ಹೆಸರಿಸುತ್ತಾರೆ. ಆಚಾರ್ಯರ ಅನುಯಾಯಿಯು ಮುನಿಯಾದರೆ ಶಿಷ್ಯನೆಂದು, ಗೃಹಸ್ಥನಾದರೆ ಗುಡ್ಡನೆಂದು, ಗೃಹಿಣಿಯಾದರೆ ಗುಡ್ಡಿ ಎಂದು ಕರೆಯಲಾಗುತ್ತದೆ. ಈ ಶಾಸನದಲ್ಲಿರುವ ಗಣವು ಬಳಗಾರ ಗಣವಾಗಿದೆ. ಆ ಗಣಕ್ಕೆ ಸೇರಿದ ಚಂದ್ರಕೀರ್ತಿ ಭಟ್ಟಾರಕರ ಪ್ರಭಾವಕ್ಕೆ ಒಳಗಾದ ಗುಡ್ಡ (ಶ್ರಾವಕ, ಗೃಹಸ್ಥ ಶಿಷ್ಯ) ಬಿಂಜರ ಮನೆತನದ, ಸೇನಬೋವ ಅಕಾರಸ್ಥನಾದ ಮೂಡಿಮೋಜ ಎನ್ನುವವನ ಮಗನಾದ ಬಾಚಣ ಎನ್ನುವವನು ಮಾಡಿಸಿದ ವಿಗ್ರಹವಿದೆಂದು ಸೂಚಿಸುತ್ತದೆ.

ಮುನಿಗಳು ಮತ್ತು ಸಂಸಾರಸ್ಥರು ದೇಹಶುದ್ಧಿಗಾಗಿ ಮತ್ತು ಮನಃಶುದ್ಧಿಗಾಗಿ ಹಲವಾರು ವ್ರತಗಳನ್ನು ಆಚರಿಸುತ್ತಾರೆ. ಹೀಗೆ ತಾವು ಇಚ್ಛಿಸಿದ ವ್ರತವನ್ನು ಆಚರಿಸಿ ಸಂಪೂರ್ಣಗೊಳಿಸಿದಾಗ, ಉದ್ಯಾಪನೆಯ ಸಮಯದಲ್ಲಿ ತೀರ್ಥಂಕರ ವಿಗ್ರಹಗಳನ್ನು ಮಾಡಿಸಿ, ಊರಿನಲ್ಲಿರುವ ಬಸದಿಯಲ್ಲಿಟ್ಟು ಪೂಜಿಸಲು ಕೊಡುವ ಪರಿಪಾಠವಿದೆ. ಅದರಂತೆ ಇಲ್ಲಿ ಮೂಡಿಮೋಜನ ಮಗ ಬಾಚಣ ಎನ್ನುವವನು ವಿಗ್ರಹವನ್ನು ಮಾಡಿಸಿಕೊಟ್ಟ ಉಲ್ಲೇಖವಿದೆ. ಮೂಡಿಮೋಜ ಎನ್ನುವ ಶಾಸನದಲ್ಲಿಯ ಹೆಸರೂ ಕುತೂಹಲ ಕೆರಳಿಸುತ್ತದೆ. ಓಜರು ಎಂದರೆ ಉಪಾಧ್ಯಾಯರು, ರೂವಾರಿಗಳು (ಶಿಲ್ಪಿಗಳು) ಎಂಬ ಎರಡೂ ಅರ್ಥಗಳಿರುವುದರಿಂದ ಇಲ್ಲಿಯ ಮೂಡಿಮೋಜನು ಬಸದಿಯ ಉಪಾಧ್ಯಾಯನಾಗಿರಬಹುದು ಇಲ್ಲವೆ ಬಸದಿ ನಿರ್ಮಾಣ ಮಾಡಿರುವವನೂ ಆಗಿರುವ ಸಾಧ್ಯತೆಯಿದೆ ಎಂದು ಶಾಸನ ತಜ್ಞರಾದ ಹನುಮಾಕ್ಷಿ ಗೋಗಿ ತಿಳಿಸಿದ್ದಾರೆ.

ಅಣ್ಣಿಗೇರಿ ನಗರದಲ್ಲಿರುವ ಪ್ರಾಚೀನ ಪ್ರಖ್ಯಾತ ಬಸದಿಯೇ ಪಾರ್ಶ್ವನಾಥ ಬಸದಿ. ಈ ಬಸದಿಯನ್ನು ರಾಷ್ಟ್ರಕೂಟ ಚಕ್ರವರ್ತಿ ಮುಮ್ಮಡಿ ಅಮೋಘವರ್ಷನ ಅಳಿಯನೂ (ಮಗಳು ರೇವಕ ನಿಮ್ಮಡಿಯ ಪತಿ) ಮುಮ್ಮಡಿ ಕೃಷ್ಣನ ಭಾವ ಮೈದುನನೂ ಆದ ಗಂಗ ಅರಸ ಇಮ್ಮಡಿ ಬೂತುಗನು (ಗಂಗ ಪೆರ್ಮಾಡಿ) ೧೦ನೆಯ ಶತಮಾನದಲ್ಲಿ ಕಟ್ಟಿಸಿದನೆಂದು ಈಗಾಗಲೇ ಪ್ರಕಟಿತ ಅಣ್ಣಿಗೆರೆಯ ಬಸದಿಯಲ್ಲಿರುವ ಶಾಸನದಿಂದ ತಿಳಿದು ಬರುತ್ತದೆ. ಕಾರಣ ಇದನ್ನು ಗಂಗ ಪೆರ್ಮಾಡಿ ಬಸದಿ ಎಂದು ಕರೆಯುತ್ತಿದ್ದರು. ಆದರೆ ಇಲ್ಲಿ ಸ್ಥಾಪಿತವಾದ ಮೂಲ ತೀರ್ಥಂಕರ ವಿಗ್ರಹ ಯಾವುದಾಗಿತ್ತೆಂದು ಶಾಸನಗಳಲ್ಲಿ ಉಕ್ತವಾಗಿಲ್ಲ. ಸದ್ಯ ಪಾರ್ಶ್ವನಾಥ ವಿಗ್ರಹವನ್ನು 1940 ರ ದಶಕದಲ್ಲಿ ಸ್ಥಾಪಿಸಲಾಗಿದೆ.
-ಹನುಮಾಕ್ಷಿ ಗೋಗಿ, ಶಾಸನ ತಜ್ಞೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.