ವನ ರಕ್ಷಕರ ಬದುಕು ಅಭದ್ರ : ವನ್ಯಧಾಮ ಹೊರಗುತ್ತಿಗೆ ದಿನಗೂಲಿಗಳ ಅರಣ್ಯರೋದನ


Team Udayavani, Apr 19, 2021, 7:15 AM IST

ವನ ರಕ್ಷಕರ ಬದುಕು ಅಭದ್ರ : ವನ್ಯಧಾಮ ಹೊರಗುತ್ತಿಗೆ ದಿನಗೂಲಿಗಳ ಅರಣ್ಯರೋದನ

ಕಾರ್ಕಳ : “ಮನೆಯಲ್ಲಿ ನಮ್ಮನ್ನೇ ನಂಬಿ ಸಂಸಾರವಿದೆ. ನಾವು ಹಗಲು -ರಾತ್ರಿ ಕಾಡಿನಲ್ಲಿರುತ್ತೇವೆ. ನಮಗೂ  ಮನೆಯಲ್ಲಿರುವರಿಗೂ ರಕ್ಷಣೆಯಿಲ್ಲ…’

ಹೀಗೆ ಅಳಲು ತೋಡಿಕೊಂಡವರು ರಾಜ್ಯ ವನ್ಯಜೀವಿ ವಿಭಾಗದ ಹೊರಗುತ್ತಿಗೆ ನೌಕರರು. ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ಇವರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಬಂಡೀಪುರ, ಚಾಮರಾಜನಗರ, ನಾಗರಹೊಳೆ, ಭದ್ರಾ, ದಾಂಡೇಲಿ, ಬನ್ನೇರುಘಟ್ಟ, ಕೊಡಗು, ಕುದುರೆಮುಖ ವನ್ಯಧಾಮಗಳಲ್ಲಿ 1,500ಕ್ಕೂ ಅಧಿಕ ಹೊರ ಗುತ್ತಿಗೆ ನೌಕರರಿದ್ದಾರೆ. ಕಳ್ಳಬೇಟೆ, ಮರ ಕಳವು, ಕಾಳ್ಗಿಚ್ಚು ತಡೆ, ಒತ್ತುವರಿ ತಡೆ, ಶಿಬಿರ ಕೇಂದ್ರ ಉಸ್ತುವಾರಿ, ಗಸ್ತು ಇತ್ಯಾದಿ ನಿರ್ವಹಿಸುವ ಇವರ ಶ್ರಮಕ್ಕೆ ತಕ್ಕ ಫ‌ಲ ಸಿಗುತ್ತಿಲ್ಲ.

ಅಲ್ಪ ವೇತನ
ನಿಯಮಾನುಸಾರ ದಿನಕ್ಕೆ 8 ತಾಸುಗಳ ದುಡಿಮೆಯ ಅವಧಿ ಇವರದು. ಆದರೆ ದಿನದ 24 ತಾಸು ದುಡಿಸಿಕೊಳ್ಳಲಾಗುತ್ತಿದೆ. 14,885 ರೂ. ವೇತನ ಕೈಸೇರಬೇಕಿದ್ದರೂ ಗುತ್ತಿಗೆದಾರರು 11,200 ರೂ. ಮಾತ್ರ ನೀಡು ತ್ತಿದ್ದಾರೆ. ಹೆಚ್ಚುವರಿ ದುಡಿಮೆಗೆ ಚಿಕ್ಕಾಸಿಲ್ಲ. ಪಿಎಫ್, ಇಎಸ್‌ಐ ಇದ್ದರೂ ಖಾತೆಗೆ ಹಣ ಜಮೆ ಆಗುವ ಖಾತರಿಯಿಲ್ಲ.

ಅರಣ್ಯ ಗಸ್ತು ಸಂದರ್ಭ ಭದ್ರತೆಯಿಲ್ಲ. ಪೆಟ್ರೋಲ್‌ ವೆಚ್ಚ ಕೈಯಿಂದಲೇ ಭರಿಸಬೇಕು. ದಿನವಿಡೀ ದುಡಿದರೂ 8 ತಾಸುಗಳ ದುಡಿಮೆಗೆ ಮಾತ್ರ ಸಂಬಳ ನೀಡುತ್ತಾರೆ ಎಂದು ನೌಕರರು ಬೇಸರ ವ್ಯಕ್ತಪಡಿಸುತ್ತಾರೆ.

ರಕ್ಷಣೆಯಿಲ್ಲದ ಬದುಕು
ಒಂದೊಂದು ವಲಯಗಳಲ್ಲಿ ಒಟ್ಟು 4 ಕಳ್ಳಬೇಟೆ ತಡೆ ಶಿಬಿರಗಳಿವೆ. ಒಟ್ಟು 4 ದಿನಗೂಲಿ ನೌಕರರು ಹಗಲು-ರಾತ್ರಿ ಅಲ್ಲೇ ಇರಬೇಕು. ಕುದುರೆಮುಖ ವನ್ಯಜೀವಿ ವಿಭಾಗದ ಬೆಳ್ತಂಗಡಿ, ಕೆರೆಕಟ್ಟೆ, ಕುದುರೆಮುಖ, ಕಾರ್ಕಳ, ಹೆಬ್ರಿ, ಸಿದ್ದಾಪುರ, ಕೊಲ್ಲೂರು, ಅಮಾಸೆಬೈಲು ಈ ಎಂಟು ವಲಯಗಳಲ್ಲಿ 120ಕ್ಕೂ ಹೆಚ್ಚು ದಿನಗೂಲಿ ನೌಕರರಿದ್ದಾರೆ.

ಬದಲಾಯಿತು ಚಿತ್ರಣ
2017ಕ್ಕೂ ಪೂರ್ವದಲ್ಲಿ ಇವರು ಅರಣ್ಯ ಇಲಾಖೆಯ ದಿನಗೂಲಿ ನೌಕರರೇ ಆಗಿದ್ದರು. ಖಾಯಂ ಆಗ ಬಹುದೆಂಬ ಆಶಾಭಾವನೆಯಿಂದ 20ರಿಂದ 25 ವರ್ಷಗಳಿಂದ ಕೆಲಸ ನಿರ್ವಹಿಸುತ್ತ ಬಂದಿದ್ದರು. 2017ರಲ್ಲಿ ಏಕಾಏಕಿ ಇಲಾಖೆಯು ಇವರನ್ನು ಹೊರಗುತ್ತಿಗೆ ನಿಯಮದಡಿ ತಂದಿತು.

ಆಗಸ್ಟ್‌ನಲ್ಲಿ ಪ್ರತಿಭಟನೆ
ಅನ್ಯಾಯ, ತಾರತಮ್ಯ ವಿರೋಧಿಸಿ ಮುಂದಿನ ಆಗಸ್ಟ್‌ ನಲ್ಲಿ ವನ್ಯಜೀವಿ ವಿಭಾಗಗಳ ರಕ್ಷಣ ಶಿಬಿರಗಳನ್ನು ಬಂದ್‌ ಮಾಡಿ ಪ್ರತಿಭಟಿಸಲು ವಾಚರ್‌ಗಳ ಸಂಘಟನೆ ನಿರ್ಧರಿಸಿದೆ.

ಗುತ್ತಿಗೆ ನೌಕರರಿಗೆ ಅನ್ಯಾಯ ಕುರಿತು ದೂರು ಬಂದಿಲ್ಲ. ವಂಚನೆಯಾಗುತ್ತಿದ್ದಲ್ಲಿ ಆಯಾ ಡಿಎಫ್ಒಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.
- ಪ್ರಕಾಶ್‌ ನಾಟಲ್ಕರ್‌, ಸಿಸಿಎಫ್, ಮಂಗಳೂರು ವೃತ್ತ ವನ್ಯಜೀವಿ ವಿಭಾಗ

ಸಂಬಳ, ಸವಲತ್ತು, ಪರಿಹಾರ ಎಲ್ಲದರಲ್ಲೂ ತಾರತಮ್ಯವಿದೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ.
– ನಾಗರಾಜ್‌, ಅರಣ್ಯ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.