ಕೋಳಿ ಸಾರು ಸವಿಯಲು ಬಂದ ಸ್ನೇಹಿತರು ಬಡಿಗೆಯಲ್ಲಿ ಹೊಡೆದಾಡಿಕೊಂಡರು!
Team Udayavani, Aug 5, 2022, 5:35 PM IST
ಹೊಳೆಹೊನ್ನೂರು: ಸಮೀಪದ ಚಂದನಕೆರೆಯಲ್ಲಿ ಕೋಳಿ ಸಾರು ಸವಿಯಲೆಂದು ಸ್ನೇಹಿತರ ಮನೆಗೆ ಬಂದು, ಬಡಿಗೆಯಲ್ಲಿ ಹೊಡೆದಾಡಿದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಆ. 2ರರಂದು ಚಂದನಕೆರೆ ಗ್ರಾಮದ ಯಶವಂತ್ ರಾವ್ ಎಂಬವರು ಊರಿಗೆ ಬಂದಿದ್ದ ತಮ್ಮ ಸ್ನೇಹಿತನಿಗಾಗಿ ದೇವೇಂದ್ರಪ್ಪ ಎಂಬವರ ಮನೆಯಲ್ಲಿ ಕೋಳಿ ಸಾರು ಅಡುಗೆ ಮಾಡಿಸಿದ್ದರು. ರಾತ್ರಿ ಸ್ನೇಹಿತನ ಜೊತೆ ದೇವೇಂದ್ರಪ್ಪರ ಮನೆಯಲ್ಲಿ ಊಟ ಮಾಡುತ್ತಿದ್ದಾಗ, ಅಲ್ಲಿಗೆ ರಾಕೇಶ್ ಹಾಗೂ ಸಂತೋಷ್ ಎಂಬವರು ಬಂದಿದ್ದಾರೆ. ಇವರಿಗೂ ಊಟಕ್ಕೆ ಆಹ್ವಾನಿಸಿದ್ದಾರೆ. ಅವರು ಸಹ ಊಟ ಮಾಡಿದ್ದಾರೆ. ಈ ಮಧ್ಯೆ ರಾಕೇಶ್ ಎಂಬಾತ ಊಟಕ್ಕೆ ಕೂರದೇ ಯಶವಂತ್ ಜೊತೆ ಜಗಳ ಮಾಡಿ, ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ.
ಅಲ್ಲಿ ದೇವೇಂದ್ರಪ್ಪ ಹಾಗೂ ಸ್ನೇಹಿತರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದರೆ ದಾರಿ ಮಧ್ಯೆ ಮತ್ತೆ ದೂರುದಾರರನ್ನು ಅಡ್ಡಹಾಕಿದ ಸಂತೋಷ್ ಹಾಗೂ ರಾಕೇಶ್ ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಸೈಜ್ಕಲ್ಲೊಂದನ್ನ ಎತ್ತಿಹಾಕಿ ಗಾಯಗೊಳಿಸಿದ್ದಾರೆ. ಜತೆಯಲ್ಲಿ ದೂರುದಾರರ ಹೆಂಡತಿ ಮೇಲೂ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ:ಬಲೂಚಿಸ್ತಾನ್: ಗ್ರೆನೇಡ್ ಸ್ಫೋಟ: 1 ಸಾವು, 14 ಮಂದಿ ಗಾಯ
ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ