ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸಿದರೂ ಗೇಜ್ ಹೆಚ್ಚಳವಿಲ್ಲ: ಆತಂಕದಲ್ಲಿ ರೈತರು


Team Udayavani, Jul 28, 2020, 8:16 PM IST

ಎಡದಂಡೆ ಕಾಲುವೆಗೆ ನೀರು ಹರಿಸಿದರೂ ಗೇಜ್ ಹೆಚ್ಚಳವಿಲ್ಲ: ರೈತರು ಕಂಗಾಲು

ಗಂಗಾವತಿ: ತುಂಗಭದ್ರಾ ಎಡದಂಡೆಕಾಲುವೆಗೆ ಜು.25 ರಂದು ನೀರು ಹರಿಸಲಾಗಿದ್ದು ತಾಂತ್ರಿಕ ತೊಂದರೆ ನೆಪದಲ್ಲಿ ನೀರಿನ ಗೇಜ್ ಹೆಚ್ಚಳಕ್ಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ಇನ್ನೂ ಸಹ ಸಾಣಾಪೂರ ಕೆರೆ ವರೆಗೆ ನೀರು ತಲುಪಿಲ್ಲ. ಮುಂಗಾರು ಹಂಗಾಮಿನ ನೀರನ್ನು ಈ ಭಾರಿ ಜುಲೈ ಅಂತ್ಯದ ವೇಳೆಗೆ ಹರಿಸುವಂತೆ ರೈತರ ಒತ್ತಡದ ಮಧ್ಯೆಯೂ ಎಡದಂಡೆ ಲೈನಿಂಗ್ ದುರಸ್ಥಿ ನೆಪದಲ್ಲಿ ಸುಮಾರು 64 ಕೋಟಿ ರೂ.ಗಳ ಟೆಂಡರ್ ಅಂತಿಮಗೊಳಿಸಿ ಸೋಮನಾಳ ಮತ್ತು ಡಂಕನಕಲ್ ಹತ್ತಿರ ಸದ್ಯ ಕಾಲುವೆ ಒಳಮೈ ಭದ್ರಪಡಿಸುವ ಲೈನಿಂಗ್ ಮಾಡಲಾಗಿದೆ.

ಅವಸರದಲ್ಲಿ ಜು.25 ರಂದು ಕಾಲುವೆ‌ನೀರು ಹರಿಸಲಾಗಿದೆ. ಈ‌ ಮಧ್ಯೆ ಡ್ಯಾಂ ಸಮೀಪದ ಮುನಿರಾಬಾದ್ ಗ್ರಾಮದ ಅನುಪಯುಕ್ತ ನೀರು ಹೋಗುವ ಸಣ್ಣಮೋರಿ ಎಡದಂಡೆ ಕಾಲುವೆ ಕೆಳಗೆ ಹೋಗಿದ್ದು ಅಪರಿಚಿತ ವಾಹನ ಮೋರಿಯ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ಎಡದಂಡೆ ಕಾಲುವೆಯಲ್ಲಿ ಜು.26 ರಂದು ಸಂಜೆ ಸ್ವಲ್ಪ ಪ್ರಮಾಣದ ನೀರು ಸೋರಿಕೆ ಕಂಡುಬಂದಿದ್ದು ಕೂಡಲೇ ಕಾಲುವೆ ನೀರು ಕಡಿಮೆಗೊಳಿಸಿ ಮೋರಿಯನ್ನು ದುರಸ್ಥಿಮಾಡಲಾಗಿದೆ. ಜು.27 ರಂದು ಬೆಳಗಿನಿಂದ 600ಕ್ಯೂಸೆಕ್ಸ್ ನೀರು ಹರಿಸಿ ಗೇಜ್ ಹೆಚ್ಚಳ ಮಾಡಲಾಗಿದೆ.

ಮಂಗಳವಾರ ಸಂಜೆ ಶಿವಪೂರ ಕೆರೆ (ಬೋರಿಕಾ‌ಪವರ್ ಹೌಸ್)ಗೆ ನೀರು ತಲುಪಿದ್ದು ಗುರುವಾರದ ವೇಳೆಗೆ ರಾಯಚೂರು ಗಡಿ ತಲುಪಲಿವೆ ಎನ್ನಲಾಗಿದೆ.

ಆತಂಕದಲ್ಲಿ ರೈತರು: ಭತ್ತದ ಸಸಿ ಮಾಡಿ ಕೈಗೆ ಬಂದಿದ್ದು ನೀರು ಬರುವುದು ತಡವಾದರೆ ಸಸಿ ಬಲಿತು ನಾಟಿ ಮಾಡಲು ಆಗುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.ಕೂಡಲೇ ಗೇಜ್ ಹೆಚ್ಚು ಮಾಡಿ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.

ಗೇಜ್ ಹೆಚ್ಚಳ: ಜು.25 ರಂದು ಕಾಲುವೆಗೆ ನೀರು ಹರಿಸಲಾಗಿದೆ. ಅಲ್ಪ ಪ್ರಮಾಣದ ದುರಸ್ಥಿಕಾರ್ಯ ಮುನಿರಾಬಾದ್ ಹತ್ತಿರ ಮಾಡಲಾಗಿದ್ದು‌ ಮಂಗಳವಾರ ಸಂಜೆ 2500 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಪೂರ್ಣಪ್ರಮಾಣದ ನೀರು‌ಹರಿಸಲಾಗುವುದೆಂದು ತುಂಗಭದ್ರಾ ಯೋಜನೆ ಮುಖ್ಯ ಅಭಿಯಂತರ ಮಂಜಪ್ಪ ಉದಯವಾಣಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.