ಹೆಣ್ಮಕ್ಕಳಿಗೆ ಸಿಗುತ್ತಿಲ್ಲ “ಶುಚಿ ಯೋಜನೆ’ಯ ನ್ಯಾಪ್ಕಿನ್
ಟೆಂಡರ್ ಅಂತಿಮವಾಗದೇ ಒಂದೂವರೆ ವರ್ಷಗಳಿಂದ ಯೋಜನೆ ಸಂಪೂರ್ಣ ಸ್ಥಗಿತ
Team Udayavani, Dec 12, 2022, 7:20 AM IST
Suchi Yojana,ಶುಚಿ ಯೋಜನೆ,ನ್ಯಾಪ್ಕಿನ್
ಬೆಂಗಳೂರು: ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲಾ- ಕಾಲೇಜುಗಳ ಹದಿಹರೆಯದ ವಿದ್ಯಾರ್ಥಿನಿಯರಿಗೆ “ಶುಚಿ ಯೋಜನೆ’ ಯಡಿ ನೀಡಲಾಗುತ್ತಿರುವ ಸ್ಯಾನಿಟರಿ ನ್ಯಾಪ್ಕಿನ್ (ಪ್ಯಾಡ್) 1.5 ವರ್ಷದಿಂದ ಸಿಗುತ್ತಿಲ್ಲ. ಟೆಂಡರ್ ಅಂತಿಮ ವಾಗದಿರುವುದು ಇದಕ್ಕೆ ಕಾರಣ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತವು (ಕೆಎಸ್ಎಂಸ್ಸಿಎಲ್) ಶುಚಿ ಯೋಜನೆಯಡಿ ನ್ಯಾಪ್ಕಿನ್ ಖರೀದಿಸಿ ವಿತರಿಸುವ ಜವಾಬ್ದಾರಿ ಹೊತ್ತಿತ್ತು.
ಟೆಂಡರ್ನಲ್ಲಿ ಕಳ್ಳಾಟ?
ನಿಗಮದ ಅಧಿಕಾರಿಗಳು ಪದೇಪದೆ ಟೆಂಡರ್ ಕರೆದು “ಸೂಕ್ತ ಬೆಲೆಗೆ ಸಿಕ್ಕಿಲ್ಲ’ ಎಂಬ ನೆಪವೊಡ್ಡಿ ಟೆಂಡರ್ ರದ್ದು ಮಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯೋಜನೆಯಡಿ ನ್ಯಾಪ್ಕಿನ್ ಖರೀದಿಸುವ ಪ್ರಕ್ರಿಯೆಯೇ ನಡೆಯುತ್ತಿಲ್ಲ. ಈ ಹಿಂದೆ ಸರಕಾರಿ ಸ್ವಾಮ್ಯದ ಹಿಂದುಸ್ಥಾನ್ ಲೈಫ್ ಕೇರ್ ಲಿ. ಸಂಸ್ಥೆಯು 5 ವರ್ಷಗಳಿಂದ ಟೆಂಡರ್ ಪಡೆದು ಪ್ಯಾಡ್ ವಿತರಿಸುತ್ತಿತ್ತು. ಈಗ ಖಾಸಗಿ ಕಂಪೆನಿಗಳಿಗೆ ಟೆಂಡರ್ ಕೊಡಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ .
ಬೇರೆ ರಾಜ್ಯಕ್ಕಿಂತ ಹೆಚ್ಚಿನ ದರ
ಮಹಾರಾಷ್ಟ್ರ ಸರಕಾರ ಪ್ರತಿ ಯೂನಿಟ್ಗೆ (10 ಪ್ಯಾಡ್) 18.9 ರೂ., ಮಧ್ಯಪ್ರದೇಶದ ಸರಕಾರ ಪ್ರತಿ ಯೂನಿಟ್ಗೆ 20.82 ರೂ. ನೀಡಿ ಪ್ಯಾಡ್ ಖರೀದಿಸುತ್ತಿದೆ. ಮಹಾರಾಷ್ಟ್ರದಲ್ಲಿ ಶ್ರೀರಾಧೆ ಹೈಜೀನ್ ಪ್ರಾಡಕ್ಟ್ ಸಂಸ್ಥೆಯು ಪ್ಯಾಡ್ ಸರಬರಾಜು ಮಾಡಿದೆ. ಆದರೆ ಕೆಎಸ್ಎಂಎಸ್ಸಿಎಲ್ನಲ್ಲಿ ಇದೇ ಪ್ಯಾಡ್ಗೆ ಬೆಂಗಳೂರು ವಿಭಾಗದಲ್ಲಿ 28.70 ರೂ., ಮೈಸೂರು ಮತ್ತು ಕಲಬುರಗಿ ವಿಭಾಗಕ್ಕೆ ತಲಾ 25.50 ರೂ.ದರ ನಮೂದಿಸಿ ಟೆಂಡರ್ ಪಡೆಯಲು ಈ ಸಂಸ್ಥೆಯು ಸಿದ್ಧತೆ ನಡೆಸಿತ್ತು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ದುಬಾರಿಯಾಗಿದ್ದು, ಸರಕಾರಕ್ಕೆ 10 ಕೋಟಿ ರೂ.ನಷ್ಟ ಉಂಟಾಗಲಿದೆ.
ಈಗಾಗಲೇ 2 ಟೆಂಡರ್ಗಳನ್ನು ರದ್ದು ಮಾಡಲಾಗಿದೆ. 3ನೇ ಟೆಂಡರ್ನಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗವೆಂದು ವಿಂಗಡಿಸಿ ಪ್ರತ್ಯೇಕ ದರಕ್ಕೆ ಟೆಂಡರ್ ನೀಡಲು ಚಿಂತಿಸಿರುವುದು ಅನುಮಾನ ಮೂಡಿಸಿದೆ.
ನಿಗದಿತ ಬೆಲೆಗೆ ಟೆಂಡರ್ ಪಡೆದಿಲ್ಲ
2018-19 ಹಾಗೂ 2020-21ರ ಟೆಂಡರ್ ಪ್ರಕ್ರಿಯೆಗಳು ಮುಗಿದಿವೆ. ಈಗ 2021-22ನೇ ಸಾಲಿನಲ್ಲಿ ಹಲವು ಬಾರಿ ಟೆಂಡರ್ ಪ್ರಕ್ರಿಯೆಗಳು ನಡೆದರೂ ನಾವು ನಿಗದಿಪಡಿಸಿರುವ ದರಕ್ಕೆ ಬಿಡ್ ಮಾಡಲಿಲ್ಲ. ಹೀಗಾಗಿ 1 ವರ್ಷಗಳಿಂದ ಪ್ಯಾಡ್ ವಿತರಣೆಯಲ್ಲಿ ಅಡಚಣೆ ಉಂಟಾಗಿದೆ. ಈ ಹಿಂದೆ ಟೆಂಡರ್ನಲ್ಲಿ ಯೂನಿಟ್ ಪ್ಯಾಡ್ಗೆ 23 ರೂ. ನಿಗದಿಪಡಿಸಲಾಗಿತ್ತು. ಆದರೆ 2021-22ರಲ್ಲಿ 26 ರೂ.ಗೆ ಏರಿಸಲಾಗಿದೆ. ಈ ಮೊತ್ತಕ್ಕೆ ಟೆಂಡರ್ ಪಡೆಯಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಈಗ ಅಂತಿಮವಾಗಿ 25 ರೂ. ನಿಗದಿಪಡಿಸಲಾಗಿದೆ ಎಂದು ಕೆಎಸ್ಎಂಎಸ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
2021-22ನೇ ಸಾಲಿನ ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಪ್ಯಾಡ್ ವಿತರಣೆ ಮುಂದುವರಿಯಲಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳುತ್ತೇವೆ.
-ಪಿ.ರಾಜೇಂದ್ರ ಚೋಳನ್,
ಎಂಡಿ, ಕೆಎಸ್ಎಂಎಸ್ಸಿಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!