ಪಾರ್ಸೇಕರ್, ಪರ್ರಿಕರ್ ನಿರ್ಣಯದಿಂದ ಗೋವಾ ಬಿಜೆಪಿಗೆ ಪರಿಣಾಮವಿಲ್ಲ: ತಾನಾವಡೆ
Team Udayavani, Jan 23, 2022, 4:25 PM IST
ಪಣಜಿ: ಲಕ್ಷ್ಮೀಕಾಂತ ಪಾರ್ಸೇಕರ್ ಮತ್ತು ಉತ್ಪಲ್ ಪರ್ರಿಕರ್ ಅವರು ತೆಗೆದುಕೊಂಡ ನಿರ್ಣಯ ದುಃಖಕರ ಸಂಗತಿಯಾಗಿದೆ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂದ್ರೆಮ್ ಕ್ಷೇತ್ರದಲ್ಲಿ ಜಯಗಳಿಸುವ ಸಾಮರ್ಥ್ಯವನ್ನು ಪರಿಗಣಿಸಿ ಬಿಜೆಪಿಯು ದಯಾನಂದ ಸೋಪ್ಟೆ ರವರಿಗೆ ಟಿಕೆಟ್ ನೀಡಿದೆ. ಆದರೆ ಈ ಕುರಿತು ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೇಕರ್ ರವರು ತೆಗೆದುಕೊಂಡಿರುವ ನಿರ್ಣಯ ದುರ್ದೈವದ ಸಂಗತಿ.ಉತ್ಪಲ್ ಪರ್ರಿಕರ್ ತೆಗೆದುಕೊಂಡಿರುವ ನಿರ್ಣಯವು ದುಃಖಕರ ಸಂಗತಿಯಾಗಿದೆ. ಆದರೆ ಅವರ ನಿರ್ಣಯದಿಂದ ಪಕ್ಷದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದಿದ್ದಾರೆ.
ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇತ್ತೀಚೆಗಷ್ಟೆ ಬಿಡುಗಡೆಗೊಳಿಸಲಾಗಿದ್ದು, 40 ಕ್ಷೇತ್ರಗಳ ಪೈಕಿ 34 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಲಾಗಿದೆ. ಪಕ್ಷದ ಹಲವು ಮುಖಂಡರು ಚುನಾವಣೆಯಲ್ಲಿ ಸ್ಫರ್ಧಿಸಲು ಉತ್ಸುಕರಾಗಿದ್ದರು. ಆದರೆ ಕೆಲವರಿಗೆ ಟಿಕೆಟ್ ಲಭಿಸದ ಕಾರಣ ನಿರಾಸೆಯುಂಟಾಗುವಂತಾಗಿದ್ದು ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಮಾಂದ್ರೆಮ್ ಕ್ಷೇತ್ರದಿಂದ ಟಿಕೆಟ್ ಲಭಿಸಲಿಲ್ಲ ಎಂದು ಆಕ್ರೋಶಗೊಂಡ ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೇಕರ್ ಬಿಜೆಪಿಗೆ ವಿದಾಯ ಹೇಳಿದ್ದರು.
ಮೈಕಲ್ ಲೋಬೊ ವಾಗ್ದಾಳಿ
‘ದಿ. ಮನೋಹರ್ ಪರ್ರಿಕರ್ ರವರು ಬಿಜೆಪಿಗೆ ಶಕ್ತಿ ನೀಡಿದ್ದರೂ ಅವರ ಪುತ್ರ ಟಿಕೆಟ್ಗಾಗಿ ಅಂಗಳಕ್ಕೆ ಓಡುತ್ತಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಶೂ ಪಾಲಿಶ್ ಮಾಡುವಲ್ಲಿ ನಿರತವಾಗಿರುವ ಬಿಜೆಪಿಯನ್ನು ಮನೆಗೆ ಕಳುಹಿಸಲಾಗುವುದು’ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಮೈಕಲ್ ಲೋಬೊ ವಾಗ್ದಾಳಿ ನಡೆಸಿದ್ದಾರೆ.
ಕಲಂಗುಟ್ನಲ್ಲಿ ಮೈಕಲ್ ಲೋಬೊ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಕ್ತ ಚುನಾವಣೆಯಲ್ಲಿ ಉತ್ಪಲ್ ಪರ್ರಿಕರ್ ಪಣಜಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಫರ್ಧಿಸುವ ಇಚ್ಛೆ ಹೊಂದಿದ್ದರು. ಆದರೆ ಉತ್ಪಲ್ ರವರು ಸ್ಫರ್ಧಿಸಿದರೆ ಗೆಲುವಿನ ಸಾಧ್ಯತೆ ಕಡಿಮೆ ಎಂದು ಪಕ್ಷವು ಅವರಿಗೆ ಟಿಕೆಟ್ ನೀಡಿಲ್ಲ ಎಂಬ ಸುದ್ಧಿಯೂ ರಾಜ್ಯದಲ್ಲಿ ಹರಿದಾಡುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರೀ ಮಳೆಗೆ ಸಿಲುಕಿದ ರೈಲು; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಪಡೆ!
ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ವಿಜಯೇಂದ್ರ ಹೆಸರು; ವರಿಷ್ಠರತ್ತ ಎಲ್ಲರ ಚಿತ್ತ
ಜನರ ಕಡೆ ಕಾಂಗ್ರೆಸ್ ನಡಿಗೆ; ನವ ಸಂಕಲ್ಪಗಳೊಂದಿಗೆ ಜನಸಂಪರ್ಕಕ್ಕೆ ಕಾಂಗ್ರೆಸ್ ಸಿದ್ಧ
ದೇಸಿ ಮಕ್ಕಳ ಮೊಬೈಲ್ ಪ್ರೌಢಿಮೆ; ವಿಶ್ವದಲ್ಲಿ ಭಾರತವೇ ಮೊದಲೆಂದ ಮ್ಯಾಕೆಫೀ ವರದಿ
18ನೇ ಶತಮಾನದ ಭಾರತೀಯ ದೇವಸಹಾಯಂಗೆ ಸಂತ ಪದವಿ