ನಾಳೆ ಬಸ್ ಇಲ್ಲ ? ಸರಕಾರದ ಮನವೊಲಿಕೆಗೆ ಬಗ್ಗದ ಸಾರಿಗೆ ನೌಕರರು
Team Udayavani, Apr 6, 2021, 7:15 AM IST
ಬೆಂಗಳೂರು: ವೇತನ ಹೆಚ್ಚಳ ಸಂಬಂಧ ಸರಕಾರ ಮಂಡಿಸಿದ “ಮಾದರಿ ನೀತಿ ಸಂಹಿತೆ’ ನೆಪ ಸಾರಿಗೆ ನೌಕರರ ಮನವೊಲಿಸುವಲ್ಲಿ ವಿಫಲವಾಗಿದ್ದು, ಎ. 7ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ನೌಕರರು ಪಟ್ಟುಹಿಡಿದಿದ್ದಾರೆ. ಈ ಮಧ್ಯೆ ಖಾಸಗಿ ಬಸ್ಗಳನ್ನು ರಸ್ತೆಗಿಳಿಸುವ ಸಿದ್ಧತೆ ನಡೆದಿದ್ದು, ಇಂತಹ ದುಸ್ಸಾಹಸಕ್ಕೆ ಕೈಹಾಕಬಾರದು ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಎಚ್ಚರಿಸಿದೆ.
“ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸದ್ಯ 6ನೇ ವೇತನ ಆಯೋಗದ ಶಿಫಾರಸು ಅನುಷ್ಠಾನ ಗೊಳಿಸುವ ಬೇಡಿಕೆ ಈಡೇರಿಕೆ ಕಷ್ಟ. ಮೇ 4ರ ವರೆಗೆ ಕಾದುನೋಡಿ. ಸಿಹಿ ಸುದ್ದಿ ಕಾದಿದೆ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವೊಲಿಕೆ ಪ್ರಯತ್ನ ನಡೆಸಿದರು. ಆದರೆ “ಬೇಡಿಕೆಗಳ ಈಡೇರಿಕೆಗೂ ನೀತಿ ಸಂಹಿತೆಗೂ ಏನೂ ಸಂಬಂಧ ಇಲ್ಲ. ಈ ಹಿಂದೆಯೇ ನೀಡಿದ್ದ ಭರವಸೆಗಳ ಈಡೇ ರಿಕೆಗೆ ಸಮಸ್ಯೆ ಏನು’ ಎಂದು ಸಾರಿಗೆ ನೌಕರರು ಪ್ರಶ್ನಿಸಿದ್ದಾರೆ. ಇದರಿಂದಾಗಿ ಮುಷ್ಕರ ಬಹುತೇಕ ಖಚಿತ ವಾಗಿದ್ದು, ಮಂಗಳವಾರ ಸಂಜೆ ಈ ಬಗ್ಗೆ ಅಂತಿಮ ಚಿತ್ರಣ ಗೊತ್ತಾಗಲಿದೆ.
ಸಂಧಾನ ಸಭೆ ವಿಫಲ
ಸೋಮವಾರ ಬೆಳಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ನೇತೃತ್ವದಲ್ಲಿ ಸಾರಿಗೆ ನೌಕರರೊಂದಿಗೆ ಸಂಧಾನ ಸಭೆ ಕರೆಯಲಾಗಿತ್ತು. ಆದರೆ ಹತ್ತು ನಿಮಿಷಗಳಲ್ಲೇ ಅದು ಬರ್ಖಾಸ್ತುಗೊಂಡಿತ್ತು. ಸಂಜೆ ಸಚಿವರು ಭರವಸೆಗೂ ನೌಕರರ ಕೂಟ ಮಣಿಯಲಿಲ್ಲ.
ಶೇ. 10ರಷ್ಟು ವೇತನ ಹೆಚ್ಚಳ?
ಸಾರಿಗೆ ಇಲಾಖೆ ನೌಕರರು 6ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ವೇತನ ಪರಿಷ್ಕರಣೆಗಾಗಿ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಸರಕಾರವು ಅವರ ಮೂಲ ವೇತನ ದಲ್ಲಿ ಶೇ. 10ರಷ್ಟು ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಇದಕ್ಕೂ ಒಪ್ಪದಿದ್ದರೆ ಇದನ್ನು ಶೇ. 15ರ ವರೆಗೂ ಹೆಚ್ಚಿಸುವ ಆಯ್ಕೆಯೂ ಇದೆ ಎನ್ನಲಾಗಿದೆ.
ಈ ಕುರಿತು ಸಾರಿಗೆ ಸಚಿವರು ಮತ್ತು ಇಲಾಖೆ ಅಧಿಕಾರಿಗಳು ಹಣಕಾಸು ಇಲಾಖೆ ಯೊಂದಿಗೆ ಚರ್ಚೆ ನಡೆಸಿದ್ದಾರೆ, ಅಧಿಕಾರಿಗಳು ಶೇ. 7ರಿಂದ ಶೇ. 8ರಷ್ಟು ವೇತನ ಹೆಚ್ಚಳ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಸಾರಿಗೆ ಸಚಿವರು ಎರಡಂಕಿಯಷ್ಟಾದರೂ ಹೆಚ್ಚಿಸುವ ಆಲೋಚನೆಯಲ್ಲಿದ್ದಾರೆ. ಕೇಂದ್ರ ಚುನಾವಣ ಆಯೋಗ ನೀತಿ ಸಂಹಿತೆಯಿಂದ ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದರೆ, ತತ್ಕ್ಷಣವೇ ವೇತನ ಹೆಚ್ಚಳದ ಘೋಷಣೆ ಮಾಡಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ತಾಂತ್ರಿಕ ಸಮಸ್ಯೆ
ಸಾರಿಗೆ ನೌಕರರ ಬೇಡಿಕೆಯಂತೆ ಆರನೇ ವೇತನ ಆಯೋಗದ ಪ್ರಕಾರ ಸಂಬಳ ಹೆಚ್ಚಳ ಮಾಡಬೇಕಾದರೆ ಅವರಿಗೆ ನೀಡುವ ವಿಶೇಷ ಭತ್ತೆಯ ಬಗ್ಗೆ ಚರ್ಚೆ ನಡೆಯಬೇಕಾಗುತ್ತದೆ. ಈ ಬಗ್ಗೆ ತೀರ್ಮಾನ ಮಾಡಲು ಸಮಯ ಅಗತ್ಯ. 6ನೇ ವೇತನ ಆಯೋಗದ ಶಿಫಾರಸು ಅನುಷ್ಠಾನಗೊಳಿಸಿದರೆ ಇಲಾಖೆಗೆ ಮೊದಲ ವರ್ಷ ಸುಮಾರು 700 ಕೋ.ರೂ., ಎರಡನೇ ವರ್ಷ ಸುಮಾರು 900 ಕೋ.ರೂ. ಹೊರೆಯಾಗಲಿದೆ. ನಾಲ್ಕು ವರ್ಷಗಳಲ್ಲಿ ಇದು ಸುಮಾರು 3,000 ಕೋ.ರೂ.ಗಳಿಗೇರುತ್ತದೆ ಎಂದು ಸಚಿವ ಸವದಿ ತಿಳಿಸಿದರು.
ಖಾಸಗಿ ಬಸ್ ಸೇವೆ ಅನಿವಾರ್ಯ
ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆಯದೆ ಇದ್ದರೆ ಖಾಸಗಿ ಬಸ್ಗಳನ್ನು ಸೇವೆಗಿಳಿಸುವುದು ಅನಿವಾರ್ಯ. ಖಾಸಗಿ ವಲಯದ ಸುಮಾರು 3 ಸಾವಿರ ಬಸ್ಗಳನ್ನು ಪಡೆಯಲು ಸಿದ್ಧತೆ ಆಗುತ್ತಿದೆ ಎಂದು ಸವದಿ ಹೇಳಿದ್ದಾರೆ.
ಸಾರಿಗೆ ಇಲಾಖೆ ನೌಕರರ ಪ್ರತಿಭಟನೆ ಕುರಿತು ಕಾರ್ಮಿಕ ಇಲಾಖೆ ನ್ಯಾಯಾ ಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಎ. 9ರ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ. ಕಾರ್ಮಿಕರು ಮುಷ್ಕರ ನಡೆಸಲು ಹೈಕೋರ್ಟ್ ಮೆಟ್ಟಿಲೇರಬೇಕು. ಇಲ್ಲದಿದ್ದರೆ ಕೋರ್ಟ್ ಸೂಚನೆ ಉಲ್ಲಂ ಸಿದಂತಾಗುತ್ತದೆ ಎಂದು ಸಚಿ ವರು ಎಚ್ಚ ರಿಕೆ ನೀಡಿ ದ್ದಾ ರೆ.
8 ಬೇಡಿಕೆ ಈಡೇರಿಸಲಾಗಿದೆ
ಕಳೆದ ಡಿಸೆಂಬರ್ನಲ್ಲಿ ಸಾರಿಗೆ ನೌಕರರು ದಿಢೀರ್ ಮುಷ್ಕರ ನಡೆಸಿ 9 ಬೇಡಿಕೆಗಳನ್ನು ಮಂಡಿಸಿದ್ದರು. ಅವು ಗಳಲ್ಲಿ ಎಂಟು ಬೇಡಿಕೆಗಳನ್ನು ಈಡೇರಿ ಸಲಾಗಿದೆ ಎಂದೂ ಸವದಿ ಹೇಳಿ ದ್ದಾರೆ.
ಸರಕಾರದ ವಾದ
ಕೊರೊನಾ 2ನೇ ಅಲೆಯಿಂದ ಶೇ. 5 ರಷ್ಟು ಪ್ರಯಾಣಿಕರ ಕೊರತೆಯಾಗಿದೆ. ಈ ಸಂದರ್ಭದಲ್ಲಿ ವೇತನ ಹೆಚ್ಚಿಸಿದರೆ ಮತ್ತಷ್ಟು ಹೊರೆಯಾಗಲಿದೆ. ಆದರೂ ಬೇಡಿಕೆ ಈಡೇರಿಸಲು ಸರಕಾರ ಸಿದ್ಧವಾಗಿದೆ. ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯ. ಹೀಗಾಗಿ ಮುಷ್ಕರ ಮಾಡಬಾರದು ಎಂದು ಸಚಿವ ಸವದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ