ಸರಕಾರಿ ಜಾಗ ಗುಳುಂ: 2,467 ಎಕರೆ ತೆರವಿಗೆ ಜಿಲ್ಲಾಡಳಿತ ಸಿದ್ಧತೆ
Team Udayavani, Mar 23, 2021, 5:55 AM IST
ಮಹಾನಗರ: ಸರಕಾರಿ ಜಮೀನು ಒತ್ತುವರಿ ಮಾಡಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರುವ ದ.ಕ. ಜಿಲ್ಲಾಡಳಿತವು ಅಂತಹ ಒಟ್ಟು 782 ಪ್ರಕರಣಗಳನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಿದೆ. ಈ ಪೈಕಿ 431 ಪ್ರಕರಣಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಬಾಕಿ ಉಳಿದ ಪ್ರಕರಣಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 782 ಪ್ರಕರಣದಿಂದ ಒಟ್ಟು 2,467.37 ಎಕರೆ ಜಮೀನು ಒತ್ತುವರಿಯಾಗಿತ್ತು. ಇದರಲ್ಲಿ 431 ಪ್ರಕರಣದ ಪೈಕಿ ಒಟ್ಟು 1415.82 ಎಕರೆ ತೆರವುಗೊಳಿಸಲಾಗಿದೆ. 351 ಪ್ರಕರಣಗಳು ಬಾಕಿ ಇರುವ ಕಾರಣದಿಂದ 1,051.55 ಎಕರೆ ಜಮೀನು ತೆರವು ಮಾಡಲು ಬಾಕಿಯಿದೆ.
ಒಟ್ಟು ಗುರುತಿಸಿರುವ ಒತ್ತುವರಿ ಪ್ರಕರಣದ ಪೈಕಿ ಮಂಗಳೂರು ತಾಲೂಕಿನ 163 ಪ್ರಕರಣದಲ್ಲಿ 521.89 ಎಕರೆ (ತೆರವು ಮಾಡಿದ್ದು 148 ಪ್ರಕರಣ 262 ಎಕರೆ), ಬಂಟ್ವಾಳ 87 ಪ್ರಕರಣದಲ್ಲಿ 139.21 ಎಕರೆ (ತೆರವು 29 ಪ್ರಕರಣ 42 ಎಕರೆ), ಮೂಡುಬಿದಿರೆ 18 ಪ್ರಕರಣದಲ್ಲಿ 34.54 ಎಕರೆ (ತೆರವು 7 ಪ್ರಕರಣದಲ್ಲಿ 4 ಎಕರೆ), ಮೂಲ್ಕಿ 22 ಪ್ರಕರಣದಲ್ಲಿ 13.13 ಎಕರೆ (ತೆರವು 4 ಪ್ರಕರಣದಲ್ಲಿ 3 ಎಕರೆ), ಕಡಬದಲ್ಲಿ 271 ಪ್ರಕರಣದಲ್ಲಿ 1177.78 ಎಕರೆ (ತೆರವು 132 ಪ್ರಕರಣದಲ್ಲಿ 888.44 ಎಕರೆ) ಒತ್ತುವರಿ ತೆರವಿಗೆ ಗುರುತಿಸಲಾಗಿತ್ತು. ಈ ಮಧ್ಯೆ ಸುಳ್ಯದಲ್ಲಿ ಗುರುತಿಸಲಾದ ಒಟ್ಟು 110 ಪ್ರಕರಣದಲ್ಲಿ 366.47 ಎಕರೆ ಭೂಮಿ ಕೂಡ ಇನ್ನೂ ತೆರವು ಮಾಡಿಲ್ಲ.
ಪುತ್ತೂರು-ಬೆಳ್ತಂಗಡಿ ಸಂಪೂರ್ಣ ತೆರವು
ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ಈಗಾಗಲೇ ಗುರುತಿಸಿರುವ ಒಟ್ಟು ಪ್ರಕರಣಗಳ ಪೈಕಿ ಎಲ್ಲವನ್ನೂ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದರಂತೆ ಪುತ್ತೂರುವಿನಲ್ಲಿ ಒಟ್ಟು 34 ಪ್ರಕರಣದಲ್ಲಿ 101.18 ಎಕರೆ ಹಾಗೂ ಬೆಳ್ತಂಗಡಿಯಲ್ಲಿ ಒಟ್ಟು 77 ಪ್ರಕರಣದಲ್ಲಿ 113.17 ಎಕರೆ ಭೂಮಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.
ವಸತಿ ಸಹಿತ ವಿವಿಧ ಯೋಜನೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಜಮೀನಿನ ಕೊರತೆ ಇದೆ ಎಂಬ ಕೂಗು ಕೇಳಿಬರುತ್ತಲೇ ಇದೆ. ಆದರೂ ಜಿಲ್ಲೆಯಲ್ಲಿ ಸರಕಾರಿ ಜಮೀನು ಗುಳುಂ ಮಾಡಿರುವವರ ಮೇಲೆ ಯಾವುದೇ ಕ್ರಮ ಆಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿತ್ತು. ಹೀಗಾಗಿ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ಇದೀಗ ಒತ್ತುವರಿ ತೆರವಿಗೆ ಮುಂದಾಗಿದೆ.
ಕಾರ್ಯಪಡೆ ರಚನೆ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸರಕಾರಿ ಜಮೀನು ಒತ್ತುವರಿಯನ್ನು ತೆರವುಗೊಳಿಸಲು ಕಾರ್ಯಪಡೆ ರಚಿಸಲಾಗಿದೆ. ಅದರಂತೆ ಎಲ್ಲ ಜಿಲ್ಲಾಧಿಕಾರಿಗಳು ಕಾಲಬದ್ಧ ಕ್ರೀಯಾಯೋಜನೆ ಸಿದ್ಧಪಡಿಸಿಕೊಂಡಿದ್ದು ಒತ್ತುವರಿ ಆಗಿರುವ ಸರಕಾರಿ ಜಮೀನುಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ.
ತೆರವುಗೊಳಿಸಲು ಕ್ರಮ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಜಮೀನುಗಳಲ್ಲಿ ಮಾಡಿರುವ ಅಕ್ರಮ ಒತ್ತುವರಿಯನ್ನು ತೆರವು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈವರೆಗೆ 1415.82 ಎಕರೆಯನ್ನು ತೆರವುಗೊಳಿಸಲಾಗಿದೆ. ಬಾಕಿ ಇರುವ ಪ್ರಕರಣವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
-ಎಂ.ಜೆ. ರೂಪಾ,ಅಪರ ಜಿಲ್ಲಾಧಿಕಾರಿ, ದ.ಕ.
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ