ಒಮಿಕ್ರಾನ್ ವಿಚಾರದಲ್ಲೂ ಲಂಚ ಹೊಡೆಯುವುದನ್ನು ಸರಕಾರ ಬಿಡಬೇಕು : ಡಿಕೆಶಿ
Team Udayavani, Dec 3, 2021, 12:38 PM IST
ಚಿಕ್ಕಮಗಳೂರು: ಒಮಿಕ್ರಾನ್ ವೈರಸ್ ವಿಚಾರದಲ್ಲೂ ಕೂಡ ಲಂಚ ಹೊಡೆಯುವುದನ್ನು ಸರಕಾರ ಬಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಸ್ ವಿಚಾರದಲ್ಲಿ ಮಾಹಿತಿ ಬರುತ್ತಾ ಇದ್ದು, ನಿಖರವಾಗಿ ಯಾವುದೇ ಪ್ರಕರಣಗಳು ಹೊರಬರುತ್ತಿಲ್ಲ. ಅಲ್ಲಿ ಇಲ್ಲಿ ಒಂದೊಂದು ಪ್ರಕರಣಗಳ ಬಗ್ಗೆ ವರದಿ ಆಗಿದೆ.ಭಯದ ವಾತಾವರಣ ಸೃಷ್ಟಿಸಬಾರದು, ಸರಕಾರ, ಆರೋಗ್ಯ ಇಲಾಖೆ ಮುಂಜಾಗೃತ ಕ್ರಮ ವಹಿಸಬೇಕು. ಸರ್ಕಾರಕ್ಕೆ ಎಲ್ಲಾ ರೀತಿ ಸಹಕಾರವನ್ನು ನೀಡಲಾಗುತ್ತೆ, ನಾವು ಅಡ್ಡಿ ಬರುವುದಿಲ್ಲ ಎಂದರು.
ಈಗಾಗಲೇ ಇಡೀ ದೇಶದ ಜನರು ನರಳುತ್ತಿದ್ದಾರೆ. ಸುಮ್ಮನೆ ಭಯ ಉಂಟು ಮಾಡಿ , ಎಲ್ಲಾ ವ್ಯವಹಾರಗಳನ್ನು ನಿಲ್ಲಿಸುವಂತೆ ಆಗಬಾರದು,ಜಾಗ್ರತೆ ಇರಬೇಕು ಎಂದರು.