ಹೆಜಮಾಡಿ ಯುವಕ ಅಬುಧಾಬಿಯಲ್ಲಿ ಕೋವಿಡ್ ಗೆ ಬಲಿ
Team Udayavani, May 25, 2020, 7:05 PM IST
ಪಡುಬಿದ್ರಿ: ಕಳೆದ 8 ವರ್ಷಗಳಿಂದ ಅಬುಧಾಬಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಹೆಜಮಾಡಿಯ 44ರ ಹರೆಯದವರೊಬ್ಬರು ಕೋವಿಡ್ ಕಾಯಿಲೆ ಉಲ್ಬಣಿಸಿ ರವಿವಾರ ಸಾವನ್ನಪ್ಪಿದ್ದಾರೆ.
ಹೆಜಮಾಡಿ ಬ್ರಹ್ಮಸ್ಥಾನ ಬಳಿಯ ಯುವಕ ಅಬುಧಾಬಿಯಲ್ಲಿದ್ದರು. ವಿಶ್ವದಾದ್ಯಂತ ಕೋವಿಡ್ ಉಲ್ಬಣಿಸಿದ ಪರಿಯಾಮವಾಗಿ ಅವರು ಊರಿಗೆ ಬರಲಾಗಲಿಲ್ಲ.
ಉದ್ಯೋಗ ಮಾಡಿಕೊಂಡ ಸ್ಥಳದಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಸಂದರ್ಭ ನೆಗೆಟಿವ್ ಬಂದಿತ್ತು.
ಮೂರನೇ ಬಾರಿಯ ಪರೀಕ್ಷೆ ವೇಳೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ಶೇಖ್ ಖಲೀಫಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪತ್ನಿ ಹಾಗೂ ಪುತ್ರಿ ಪುಣೆದಲ್ಲಿದ್ದಾರೆ.
ಅಲ್ಲಿಂದ ಶವ ತರಲು ಅಸಾಧ್ಯವಾಗಿದ್ದು, ಮಂಗಳವಾರ ಅಬುಧಾಬಿಯಲ್ಲೇ ಗೆಳೆಯರು ಮತ್ತು ಸಹೋದ್ಯೋಗಿಗಳ ಸಮ್ಮುಖ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು