ಭಾರತ-ಚೀನಾ ಗಡಿಯಿಂದೀಚೆ ಒಂದಿಂಚೂ ಜಾಗ ಕಳೆದುಕೊಂಡಿಲ್ಲ : ಸೇನಾ ಮುಖ್ಯಸ್ಥರ ಸ್ಪಷ್ಟನೆ
Team Udayavani, Mar 30, 2021, 8:30 PM IST
ನವದೆಹಲಿ: ಭಾರತ-ಚೀನಾ ಗಡಿಯಿಂದೀಚೆಗೆ ಭಾರತ ಈ ಹಿಂದೆ ಎಷ್ಟು ಭೂಪ್ರದೇಶವನ್ನು ಹೊಂದಿತ್ತೋ ಅಷ್ಟೇ ಭೂಪ್ರದೇಶವನ್ನು ಈಗಲೂ ಹೊಂದಿದೆ. ಒಂದೇ ಒಂದು ಇಂಚು ಭೂಮಿಯೂ ಕೂಡ ಚೀನಾದ ಪಾಲಾಗಿಲ್ಲ ಎಂದು ಭೂಸೇನೆಯ ಮುಖ್ಯಸ್ಥ ಎಂ.ಎಂ. ನರವಾಣೆ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಅವರು, ಭಾರತ-ಚೀನಾ ಗಡಿ ವಿವಾದ ಶುರುವಾದಾಗ ಎಷ್ಟು ಭೂಮಿಯನ್ನು ಹೊಂದಿದ್ದೆವೋ ಈಗಲೂ ಅಷ್ಟೇ ಭೂಮಿಯನ್ನು ನಾವು ಹೊಂದಿದ್ದೇವೆ. ಪೂರ್ವ ಲಡಾಖ್ನಲ್ಲಿ ಚೀನಾ ಸೇನೆಯ ತೆರವು ಬಗ್ಗೆ ಈಗಾಗಲೇ ಉಭಯ ಸೇನೆಗಳ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ಸಾಗಿವೆ. ಸದ್ಯದಲ್ಲೇ ಆ ಸಮಸ್ಯೆಯೂ ನಿವಾರಣೆಯಾಗುತ್ತದೆ ಎಂದು ನರವಾಣೆ ತಿಳಿಸಿದ್ದಾರೆ.
ಇದನ್ನೂ ಓದಿ :ಮುಂಬೈ: ಕೋವಿಡ್ ನಿಯಮ ಉಲ್ಲಂಘಿಸಿ ಸಮುದ್ರ ಪ್ರವೇಶಿಸಿದ ಐವರಿಗೆ ‘ಕೋಳಿ ನಡಿಗೆ’ ಶಿಕ್ಷೆ
“ಉಗ್ರರ ಕ್ಯಾಂಪ್ಗಳು ಇನ್ನೂ ಇವೆ’
ಇದೇ ವೇಳೆ, ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಬಳಿ, ಪಾಕಿಸ್ತಾನದೊಳಗೆ ಇರುವ ಉಗ್ರರ ಕ್ಯಾಂಪ್ಗಳು ಇನ್ನೂ ಜೀವಂತವಾಗಿವೆ ಎಂದು ನರವಾಣೆ ತಿಳಿಸಿದ್ದಾರೆ. ಈ ಕ್ಯಾಂಪ್ಗ್ಳನ್ನು ತೆರವುಗೊಳಿಸುವುದಾಗಿ ಈ ಹಿಂದೆ ಪಾಕಿಸ್ತಾನ ವಾಗ್ಧಾನ ಮಾಡಿತ್ತು. ಆದರೆ, ಅದನ್ನು ಗಂಭೀರವಾಗಿ ಕಾರ್ಯಗತಗೊಳಿಸಿಲ್ಲ. ಈಗ ಎಲ್ಒಸಿಯಲ್ಲಿನ ಮಂಜು ಪೂರ್ತಿ ಕರಗಿ ಹೋದ ನಂತರ ಆಚೆ ಬದಿಯಲ್ಲಿ ಎಷ್ಟು ಉಗ್ರರ ಕ್ಯಾಂಪ್ಗ್ಳಿವೆ ಎಂಬ ಲೆಕ್ಕ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ