ಟೋಲ್ ವಿರುದ್ಧ ಬಸ್ ಮಾಲಕರ ಪ್ರತಿಭಟನೆ, ಬಸ್ ಸಂಚಾರ ರದ್ದು: ಪ್ರಯಾಣಿಕರು ಅತಂತ್ರ
Team Udayavani, Feb 19, 2021, 5:45 AM IST
ಪಡುಬಿದ್ರಿ: ಹೆಜಮಾಡಿ ಒಳ ರಸ್ತೆಗಳಲ್ಲಿ ಸಂಚರಿಸುವ ಖಾಸಗಿ ಸರ್ವಿಸ್ ಬಸ್ಗಳಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಕ್ರಮವನ್ನು ಖಂಡಿಸಿ ಟೋಲ್ ಬಳಿ ಹಠಾತ್ತಾಗಿ ಬಸ್ ಸಂಚಾರ ರದ್ದುಗೊಳಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಇದರಿಂದ ಪ್ರಯಾಣಿಕರು ಅತಂತ್ರರಾದರು.
ಫೆ. 15ರಿಂದ ಫಾಸ್ಟಾಗ್ ಕಡ್ಡಾಯ ಗೊಳಿಸಿ ಎಲ್ಲ ವಾಹನಗಳಿಗೆ ವಿನಾಯಿತಿ ಯನ್ನು ರದ್ದುಗೊಳಿಸಿದ ಪರಿಣಾಮ ಹೆಜಮಾಡಿ ಹಳೆ ಎಂಬಸಿ ರಸ್ತೆಯಲ್ಲಿ ಸಂಚರಿಸುವ ಸರ್ವಿಸ್ ಬಸ್ಗಳಿಂದಲೂ ನವಯುಗ ಟೋಲ್ ಕಂಪೆನಿ ಗುರುವಾರ ಟೋಲ್ ಸಂಗ್ರಹ ಆರಂಭಿಸಿತು.
ಬುಧವಾರವೂ ಟೋಲ್ ಸಂಗ್ರಹ ವಿರೋಧಿಸಿ ಸರ್ವಿಸ್ ಬಸ್ಗಳು ಹಠಾತ್ತಾಗಿ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ಟೋಲ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತ್ತು. ಗುರುವಾರ ಬೆಳಗ್ಗೆ ಟೋಲ್ ವಿನಾಯಿತಿ ನೀಡಿ ಮತ್ತೆ ಏಕಾಏಕಿ ಟೋಲ್ ಸಂಗ್ರಹಕ್ಕೆ ಮುಂದಾದ ನವಯುಗ ಕಂಪೆನಿ ಕ್ರಮವನ್ನು ವಿರೋಧಿಸಿದ ಕೆಲ ಖಾಸಗಿ ಸರ್ವಿಸ್ ಬಸ್ ಮಾಲಕರು ಟೋಲ್ ನೀಡದೆ ಬಸ್ಗಳನ್ನು ಹಳೆ ಎಂಬಿಸಿ ರಸ್ತೆ ಟೋಲ್ ಕೇಂದ್ರ ಆಸುಪಾಸಿನಲ್ಲಿಯೇ ಪ್ರಯಾಣಿಕರನ್ನಿಳಿಸಿ ಪ್ರತಿಭಟನೆ ನಡೆಸಿದರು.
ಇದರೊಂದಿಗೆ ಹಿಂದುಗಡೆಯಿಂದ ಅಗಮಿಸಿದ ಹಲವಾರು ಬಸ್ಗಳನ್ನು ತಡೆದು ಜನರನ್ನಿಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅತಂತ್ರರಾದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್ಗಳನ್ನು ರಸ್ತೆಯಿಂದ ತೆರವು ಗೊಳಿಸಿದರು. ಈ ಮಧ್ಯೆ ಬಸ್ ಮಾಲಕರು ಜಿಲ್ಲಾಧಿಕಾರಿ ಹಾಗೂ ಸಂಸದರಿಗೆ ಮನವಿ ಸಲ್ಲಿಸಲು ತೆರಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ