ಆಯ್ದ ಗ್ರಾಮಗಳ 500 ಕೆರೆಗಳ ಬಳಿ ಧ್ವಜಾರೋಹಣ
ಹಳ್ಳಿ-ಹಳ್ಳಿಗಳಲ್ಲೂ "ಹರ್ ಘರ್ ತಿರಂಗಾ' ಸಹಿತ ಹಲವು ಕಾರ್ಯಕ್ರಮಕ್ಕೆ ಗ್ರಾಮಾಭಿವೃದ್ಧಿ ಇಲಾಖೆ ಸಿದ್ಧತೆ
Team Udayavani, Aug 4, 2022, 7:40 AM IST
ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಆಯ್ದ ಗ್ರಾಮಗಳ ಸುಮಾರು 500 ಕೆರೆಗಳ ಬಳಿ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಾಡಲಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಗ್ರಾಮೀಣ ಭಾಗದಲ್ಲಿ ಅಭೂತಪೂರ್ವ ರೀತಿ ಆಚರಿಸಲು ಹಳ್ಳಿ-ಹಳ್ಳಿಗಳಲ್ಲೂ ಹರ್ ಘರ್ ತಿರಂಗಾ ಸಹಿತ ಹಲವು ಕಾರ್ಯಕ್ರಮಗಳನ್ನು ರೂಪಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯು ಕೆರೆಗಳ ಬಳಿ ಧ್ವಜಾರೋಹಣ ನೆರವೇರಿಸುವ ವಿನೂತನ ಕಾರ್ಯಕ್ರಮ ಹಾಕಿಕೊಂಡಿದೆ.
ಅಮೃತ್ ಸರೋವರ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ 75ರಂತೆ ಒಟ್ಟು 2,325 ಹೊಸದಾಗಿ ಜಲಮೂಲಗಳು ಅಥವಾ ಕೆರೆಗಳನ್ನು ನಿರ್ಮಿಸುವ ಅಥವಾ ಪುನಃಶ್ಚೇತನಗೊಳಿಸುವ ಕಾರ್ಯಕ್ರಮ ಹಾಕಿಕೊಳ್ಳ ಲಾಗಿದೆ. ಅದರಲ್ಲಿ ಪ್ರತಿ ಜಿಲ್ಲೆಯ 75 ಕೆರೆ, ಸರೋವರಗಳ ಪೈಕಿ ಈ ಆಗಸ್ಟ್ 15ರೊಳಗೆ 15 ಕೆರೆ, ಸರೋವರಗಳನ್ನು ನಿರ್ಮಿಸುವ ಅಥವಾ ಪುನಃಶ್ಚೇತನಗೊಳಿಸುವ ಕಾಮಗಾರಿ ಪೂರ್ಣಗೊಳಿಸಬೇಕು. ಈ ರೀತಿ ಪ್ರತಿ ಜಿಲ್ಲೆಗೆ 15ರಂತೆ 21 ಜಿಲ್ಲೆಗಳಲ್ಲಿ 465 ಕೆರೆಗಳು ಪೂರ್ಣಗೊಂಡಿರುತ್ತವೆ. ಸ್ವಾತಂತ್ರ್ಯೋತ್ಸವದ ದಿನದಂದು ಆ ಕೆರೆಗಳ ಪರಿಸರದಲ್ಲಿ ಧ್ವಜಾರೋಹಣ ನೆರವೇರಿಸುವಂತೆ ಸೂಚಿಸಲಾಗಿದೆ. ಜತೆಗೆ ಕಾಮಗಾರಿ ಪ್ರಗತಿಯಲ್ಲಿ ರುವ ಕಡೆಗಳಲ್ಲೂ ಧ್ವಜಾರೋಹಣ ನೆರವೇರಿಸ ಬಹುದು. ಅದರಂತೆ 500ಕ್ಕೂ ಹೆಚ್ಚು ಕೆರೆಗಳ ಬಳಿ ತ್ರಿವರ್ಣ ಧ್ವಜ ಹಾರುವ ನಿರೀಕ್ಷೆ ಇದೆ.
ರಾಜಕಾರಣಿಗಳಿಂದ ಧ್ವಜಾರೋಹಣ ಇಲ್ಲ
ಧ್ವಜಾರೋಹಣವನ್ನು ರಾಜಕಾರಣಿಗಳು, ಚುನಾಯಿತ ಜನಪ್ರತಿನಿಧಿಗಳು ನೆರವೇರಿಸು ವುದಿಲ್ಲ. ಇದನ್ನು ಜನರ ಕಾರ್ಯಕ್ರಮವನ್ನಾಗಿ ಮಾಡಲು ಆಯಾ ಜಿಲ್ಲೆ, ಪಂಚಾಯತ್ ಅಥವಾ ಗ್ರಾಮದ ವ್ಯಾಪ್ತಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರರು, ಅವರ ಕುಟುಂಬದ ಸದಸ್ಯರು, ಹುತಾತ್ಮರ ಕುಟುಂಬದ ಸದಸ್ಯರು, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸಹಿತ ಇತರ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದವರು ಧ್ವಜಾರೋಹಣ ನೆರವೇರಿಸುವರು. ಇಂಥವರು ಇಲ್ಲದ ಕಡೆಗಳಲ್ಲಿ ಗ್ರಾಮದ ಹಿರಿಯರೊಬ್ಬರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನರೇಗಾ ಹಣ ಬಳಕೆ
ಕೆರೆಗಳ ಅಭಿವೃದ್ಧಿ ಮತ್ತು ಅಮೃತ ಸರೋವರ ನಿರ್ಮಾಣ ಕಾರ್ಯಕ್ರಮಗಳಿಗೆ ನರೇಗಾ ಯೋಜನೆ, 15ನೇ ಹಣಕಾಸು ಆಯೋಗದ ಅನುದಾನ, ಕೇಂದ್ರ, ರಾಜ್ಯ, ಜಿ.ಪಂ.-ತಾ.ಪಂ.ಗಳಲ್ಲಿ ವಿವಿಧ ಯೋಜನೆಗಳಡಿ ಲಭ್ಯವಿರುವ ಅನುದಾನ, ಸಣ್ಣ ನೀರಾವರಿ ಇಲಾಖೆ, ಅಟಲ್ ಭೂಜಲ್ ಅನುದಾನ, ಸಿಎಸ್ಆರ್ ನಿಧಿ, ಆರ್ಥಿಕ ದೇಣಿಗೆ, ಸಾರ್ವಜನಿಕರ ವಂತಿಕೆ ಮೂಲಕ ಹಣ ಬಳಕೆ ಮಾಡಬಹುದು. ಯಂತ್ರಗಳನ್ನು ಬಳಸುವ ಕಾಮಗಾರಿಗಳಿಗೆ ರಾಜ್ಯ ಸರಕಾರ ಬಜೆಟ್ನಲ್ಲಿ ಘೋಷಿಸಿರುವ 100 ಕೋಟಿ ರೂ. ಅನುದಾನವನ್ನು ಬಳಸಿಕೊಳ್ಳಬಹುದು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.
ಈ ಅಭಿಯಾನದಲ್ಲಿ ಕನಿಷ್ಠ 2,325 ಕೊಳಗಳನ್ನು ರಾಜ್ಯದಲ್ಲಿ ಕಾಯಕಲ್ಪ ನೀಡಲಾಗುವುದು. ಇದು ಸಮುದಾಯ ಸಹಭಾಗಿತ್ವದ ಪ್ರಯತ್ನವಾಗಿದೆ. ಇದು ರಾಷ್ಟ್ರದ 75ನೇ ಸ್ವಾತಂತ್ರÂದ ಸಂದರ್ಭದಲ್ಲಿ ನರೇಗಾ ಯೋಜನೆಯ ಹೆಮ್ಮೆಯ ಕೊಡುಗೆಯಾಗಿದ್ದು, ಆಗಸ್ಟ್ 15 ರಂದು 465 ಕೆರೆಗಳ ಬಳಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ.
– ಶಿಲ್ಪಾ ನಾಗ್, ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ