ಅಕ್ರಮ ದಾಸ್ತಾನು: ಅಬಕಾರಿ ಅಧಿಕಾರಿಗಳಿಂದ 17.ಲೀ ಮದ್ಯ ವಶ
Team Udayavani, Oct 3, 2021, 11:25 AM IST
ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಅಜ್ಜಿಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕಿಯಾದ ಶ್ರೀ ಲತಾ ಅವರ ತಂಡ ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಜೆಟ್ಟಿಅಗ್ರಹಾರ ಗ್ರಾಮ ಪಂಚಾಯತ್ ನ ಅಜ್ಜಿಹಳ್ಳಿ ನಿವಾಸಿಯಾದ ತಿಮ್ಮಯ್ಯನ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ ಒಟ್ಟು17.280 ಲೀಟರ್ ಮದ್ಯವನ್ನು ಜಪ್ತಿ ಮಾಡ ಕೊಳ್ಳಲಾಗಿದೆ. ಆರೋಪಿ ತಿಮ್ಮಯ್ಯನನ್ನು ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆ ವೇಳೆ ಅಬಕಾರಿ ನಿರೀಕ್ಷಕಿ ಶ್ರೀ ಲತಾ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಮೋರಾಖಂಡಿ, ರಂಗಧಾಮಯ್ಯ, ಹಮೀದ್, ಮಧು ಮಂಜುಳಾ ಹಾಜರಿದ್ದರು.