ಶ್ರೀಲಂಕಾ ಪ್ರವಾಸಕ್ಕಾಗಿ ಭಾರತೀಯ ವಾಯು ಸರಹದ್ದು ಬಳಸಲು ಇಮ್ರಾನ್ ಗೆ ಅನುಮತಿಸಿದ ಭಾರತ..!
ಅಫ್ಘಾನಿಸ್ಥಾನದ ಭೇಟಿಯ ಕೆಲವು ತಿಂಗಳುಗಳ ನಂತರ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಎರಡನೇ ಪ್ರವಾಸ ಇದಾಗಿದೆ
Team Udayavani, Feb 23, 2021, 10:54 AM IST
ನವ ದೆಹಲಿ : ಪಾಕಿಸ್ಥಾನದ ಪ್ರಧಾನಿ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತೀಯ ವಾಯು ಸರಹದ್ದು ಬಳಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಪಾಕಿಸ್ಥಾನದ ಪ್ರಧಾನಿ ಇಂದಿನಿಂದ(ಫೆ.23) ಎರಡು ದಿನಗಳ ಕಾಲ ಶ್ರೀಲಂಕಾ ಪ್ರವಾಸದಲ್ಲಿದ್ದು, ಅಫ್ಘಾನಿಸ್ಥಾನದ ಭೇಟಿಯ ಕೆಲವು ತಿಂಗಳುಗಳ ನಂತರ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಎರಡನೇ ಪ್ರವಾಸ ಇದಾಗಿದೆ.
ಓದಿ : ಬಹುಮುಖ ಪ್ರತಿಭೆ ನಟಿ ಸೋನಲ್ ಚೌಹಾನ್ ಗ್ಲಾಮರಸ್ ಲುಕ್
ಭಾರತದ ಪರವಾನಿಗೆ ಹೊಂದಿರುವ ವಾಯು ಸರಹದ್ದು ಶ್ರೀಲಂಕಾ ಪ್ರವಾಸಕ್ಕಾಗಿ ಬಳಸಿಕೊಳ್ಳು ಅನುಮತಿಸಬೇಕು ಎಂದು ಪಾಕಿಸ್ಥಾನ ಭಾರತ ಸರ್ಕಾರವನ್ನು ಕೋರಿತ್ತು. ಪ್ರೋಟೋಕಾಲ್ ಪ್ರಕಾರ, ಬೇರೆ ಯಾವುದೇ ದೇಶದ ಪ್ರಮುಖರು ಭಾರತೀಯ ವಾಯು ಸರಹದ್ದಿನ ಮೂಲಕ ಪ್ರಯಾಣಿಸುವಾಗ ಆ ದೇಶಕ್ಕೆ ಎಚ್ಚರಿಕೆಯನ್ನು ನೀಡಲಾಗುತ್ತದೆ.
ಇನ್ನು, ಈ ಕುರಿತಾಗಿ ಇಸ್ಲಾಮಾಬಾದ್ ನಿಂದ ಹತ್ತು ದಿನಗಳ ಹಿಂದೆ ನವ ದೆಹಲಿಗೆ ಅನುಮತಿ ಕೋರಿ ಪತ್ರವನ್ನು ಕಳುಹಿಸಲಾಗಿತ್ತು ಎಂದು ವರ್ಲ್ಡ್ ಈಸ್ ಒನ್ ನ್ಯೂಸ್ (WION) ಸಂಸ್ಥೆ ವರದಿ ಮಾಡಿದೆ. ಹಾಗೂ ಸೋಮವಾರ(ಫೆ.22) ಭಾರತ ಸರ್ಕಾರ ಈ ಕೋರಿಕೆಗೆ ಅನುಮತಿಸಿದೆ.
ಗಮನಿಸಬೇಕಾದ ವಿಷಯವೇನೆಂದರೇ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದ ನಂತರ ಪಾಕಿಸ್ಥಾನ ಸರ್ಕಾರ, ಒಂದು ಭಾರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ, ಹಾಗೂ ಎರಡು ಭಾರಿ ಪ್ರಧಾನಿ ಮೋದಿಯವರ ಅತಿಯಾದ ವಿಮಾನ ಹಾರಾಟಕ್ಕೆ ಅನುಮತಿಯನ್ನು ನಿರಾಕರಿಸಿತ್ತು.
ಓದಿ : ಮುರುಗೇಶ್ ನಿರಾಣಿಗೆ ಅಮಿತ್ ಶಾ ದಿಢೀರ್ ಬುಲಾವ್: ಕುತೂಹಲ ಮೂಡಿಸಿದ ನಿರಾಣಿ ದಿಲ್ಲಿ ಭೇಟಿ!
ಇನ್ನು, 2019ರ ಸಪ್ಟೆಂಬರ್ ನಲ್ಲಿ ರಾಷ್ಟ್ರಪತಿ ಕೋವಿಂದ್ ಅವರ ಯೂರೋಪ್ ಪ್ರವಾಸದ ಸಂದರ್ಭದಲ್ಲಿ ಪಾಕಿಸ್ಥಾನದ ವಾಯು ಸರಹದಿನಲ್ಲಿ ಅನುಮತಿಯನ್ನು ನಿರಾಕರಿಸಿತ್ತು. ಯು ಎನ್ ಜಿ ಎ ಅಧಿವೇಶನಕ್ಕೆ ತೆರಳಲು ಪ್ರಧಾನಿ ಮೋದಿಯವರ ವಿಮಾನ ಹಾರಾಟಕ್ಕೂ ಅನುಮತಿಯನ್ನು ನೀಡಿರಲಿಲ್ಲ. ಮತ್ತು ಏರ್ ಇಂಡಿಯಾ ಒನ್ ಗೆ ಮೋದಿಯವರು ಅಕ್ಟೋಬರ್ 2019ರಲ್ಲಿ ಸೌದಿ ಅರೇಬಿಯಾ ಪ್ರವಾಸದ ಸಂದರ್ಭದಲ್ಲೂ ಅನುಮತಿಯನ್ನು ನೀಡಿರಲಿಲ್ಲ.
ಭಾರತ ಈ ವಿಷಯವನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯಿಂದ ಪಡೆದುಕೊಂಡಿದೆ ಎಂದು ವರದಿಯಾಗಿದೆ.