ದೃಢ ನಿಲುವು…ಬಿಜೆಪಿ ರಾಷ್ಟ್ರಭಕ್ತಿಗೆ ಸಮರ್ಪಿತ,ವಿಪಕ್ಷಗಳದ್ದು ಪರಿವಾರ ಭಕ್ತಿ:ಪ್ರಧಾನಿ ಮೋದಿ
ಭಾರತ ತನ್ನ ಹಿತಾಸಕ್ತಿಯಲ್ಲಿ ದೃಢ ನಿಲುವನ್ನು ಹೊಂದಿರುವ ಬಗ್ಗೆ ಜಗತ್ತು ನೋಡುತ್ತಿದೆ.
Team Udayavani, Apr 6, 2022, 1:35 PM IST
ನವದೆಹಲಿ: ಭಾರತೀಯ ಜನತಾ ಪಕ್ಷ ದೇಶ ಭಕ್ತಿಗೆ ಸಮರ್ಪಿತವಾಗಿದೆ. ಆದರೆ ವಿಪಕ್ಷಗಳಿಗೆ ಪರಿವಾರ ಭಕ್ತಿ ಮಾತ್ರ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಏಪ್ರಿಲ್ 06) ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಭ್ರಷ್ಟಾಚಾರ: ಬಂಧನ ಭೀತಿಯಿಂದ ಇಮ್ರಾನ್ ಪತ್ನಿಯ ಗೆಳತಿ ಪಾಕ್ ನಿಂದ ಪರಾರಿ, ಯಾರೀಕೆ?
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಕುರಿತಂತೆ ಕಠಿಣ ನಿಲುವು ತಳೆಯುವಂತೆ ಭಾರತದ ಮೇಲೆ ಜಾಗತಿಕ ಮಟ್ಟದ ಒತ್ತಡ ಹೇರಲಾಗಿತ್ತು. ಆದರೆ ಇಡೀ ಜಗತ್ತು ಎರಡು ಪ್ರತಿಸ್ಪರ್ಧಿ ಬಣಗಳಾಗಿ ವಿಭಜನೆಗೊಂಡ ಸಂದರ್ಭದಲ್ಲಿ ಭಾರತ ದೃಢ ನಿಲುವು ತಳೆದಿದೆ ಮತ್ತು ರಾಷ್ಟ್ರದ ಹಿತಾಸಕ್ತಿಗೆ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು.
ಇಂದು ಯಾವುದೇ ಆತಂಕ ಅಥವಾ ಒತ್ತಡವಿಲ್ಲದೇ ಭಾರತ ತನ್ನ ಹಿತಾಸಕ್ತಿಯಲ್ಲಿ ದೃಢ ನಿಲುವನ್ನು ಹೊಂದಿರುವ ಬಗ್ಗೆ ಜಗತ್ತು ನೋಡುತ್ತಿದೆ. ಯಾವಾಗ ಇಡೀ ಪ್ರಪಂಚ ಎರಡು ಪ್ರತಿಸ್ಪರ್ಧಿಗಳಾಗಿ ವಿಭಜನೆಯಾಯಿತೋ ಆ ಸಂದರ್ಭದಲ್ಲಿಯೂ ಭಾರತ ಮಾನವೀಯತೆ ಬಗ್ಗೆ ದೃಢ ಸಂಕಲ್ಪದಿಂದ ಮಾತನಾಡಿತ್ತು. ನಮ್ಮ ಸರ್ಕಾರ ಎಲ್ಲವನ್ನೂ ಮೀರಿ ರಾಷ್ಟ್ರೀಯ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಈ ಕಾರಣಗಳ ಜೊತೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಕ್ಷ ಜಯಭೇರಿ ಗಳಿಸಿರುವ ಹಿನ್ನೆಲೆಯಲ್ಲಿ ಸಂಸ್ಥಾಪನಾ ದಿನಾಚರಣೆ ಬಿಜೆಪಿಗೆ ಹೆಚ್ಚು ಮಹತ್ವಪೂರ್ಣವಾಗಿದೆ ಎಂದರು. ಕೆಲವು ವಾರಗಳ ಹಿಂದಷ್ಟೇ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ನಾಲ್ಕು ರಾಜ್ಯಗಳಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಸುಮಾರು ಮೂರು ದಶಕಗಳ ನಂತರ ರಾಜ್ಯಸಭೆಯಲ್ಲಿ ಪಕ್ಷ ನೂರು ಸದಸ್ಯರನ್ನು ತಲುಪಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ