ಕರನ್‌ ಓಡದೇ ಬಿಟ್ಟ ರನ್‌ ಭಾರತದ ಜಯಕ್ಕೆ ಕಾರಣವೇ?


Team Udayavani, Mar 30, 2021, 7:35 AM IST

ಕರನ್‌ ಓಡದೇ ಬಿಟ್ಟ ರನ್‌ ಭಾರತದ ಜಯಕ್ಕೆ ಕಾರಣವೇ?

ಪುಣೆ: ಕೊನೆಗೂ ವಿಶ್ವ ಚಾಂಪಿಯನ್‌ ಇಂಗ್ಲೆಂಡಿಗೆ ಭಾರತದ ನೆಲದಲ್ಲಿ ಏಕದಿನ ಸರಣಿ ವಶ ಪಡಿಸಿಕೊಳ್ಳುವ ಯೋಗ ಕೂಡಿಬರಲಿಲ್ಲ. ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರ ದಿಟ್ಟ ಬ್ಯಾಟಿಂಗ್‌ ಸಾಹಸದ ಹೊರತಾಗಿಯೂ ಅದು ಕೇವಲ 7 ರನ್ನಿನಿಂದ ದೂರವೇ ಉಳಿಯಿತು.

ರವಿವಾರದ ನಿರ್ಣಾಯಕ ಏಕ ದಿನದಲ್ಲಿ ಯುವ ಕ್ರಿಕೆಟಿಗ ಸ್ಯಾಮ್‌ ಕರನ್‌ ಬ್ಯಾಟ್‌ ಬೀಸುತ್ತಿದ್ದ ರೀತಿ, ಸಹ ಆಟಗಾರರ ಬೆಂಬಲದಿಂದ ಅವರು ಇನ್ನಿಂಗ್ಸ್‌ ಬೆಳೆಸುತ್ತಿದ್ದುದನ್ನು ಕಂಡಾಗ ಇಂಗ್ಲೆಂಡ್‌ ಏಕೆ ವಿಶ್ವ ಚಾಂಪಿಯನ್‌ ಎನಿಸಿಕೊಂಡಿದೆ ಎಂಬುದು ನಿಚ್ಚಳವಾ ಗುತ್ತ ಹೋಗಿತ್ತು. ಕೊನೆಯಲ್ಲಿ ಎದ್ದು ಬಿದ್ದು, ಬೆನ್ನು ಬೆನ್ನಿಗೆ ಕ್ಯಾಚ್‌ಗಳನ್ನೆಲ್ಲ ಕೈಚೆಲ್ಲಿ ಭಾರತ ಜಯ ಸಾಧಿಸಿತಾದರೂ ಕ್ರಿಕೆಟ್‌ ಅಭಿಮಾನಿಗಳ ಹೃದಯ ಮಾತ್ರ ಕರನ್‌ ಮತ್ತು ಇಂಗ್ಲೆಂಡಿಗೆ ಮಿಡಿಯುತ್ತಿದ್ದುದು ಸುಳ್ಳಲ್ಲ.

ಕಾಡತೊಡಗಿದ ಕರನ್‌
8ನೇ ಕ್ರಮಾಂಕದಲ್ಲಿ ಸ್ಯಾಮ್‌ ಕರನ್‌ ಬ್ಯಾಟ್‌ ಹಿಡಿದು ಬರುವ ತನಕ ಭಾರತ ದೊಡ್ಡ ಅಂತರದ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಕರನ್‌ ರನ್ನಿನ ಇಟ್ಟಿಗೆಯನ್ನು ಪೇರಿಸುತ್ತ ಹೋಗಿ ಪಂದ್ಯಕ್ಕೊಂದು ತಿರುವು ಕೊಟ್ಟ ರೀತಿ ನಿಜಕ್ಕೂ ಅಮೋಘ, ಅದ್ಭುತ. 200 ರನ್ನಿನ ಬಳಿಕ ಅವರು ಆದಿಲ್‌ ರಶೀದ್‌ ಮತ್ತು ಮಾರ್ಕ್‌ ವುಡ್‌ ಬೆಂಬಲ ಪಡೆದು ನಡೆಸಿದ ಜತೆಯಾಟ ಏಕದಿನ ಕ್ರಿಕೆಟಿನ ಪಾಠದಂತಿತ್ತು.

ಜತೆಗಾರನ ವಿಕೆಟ್‌ ಮುಖ್ಯ
ಸಹಜವಾಗಿಯೇ ಇಂಥ ಸಂದರ್ಭ ದಲ್ಲಿ ಬೇರೂರಿದ ಆಟಗಾರನೊಬ್ಬ ತನ್ನ ಬ್ಯಾಟಿಂಗ್‌ ಲಯವನ್ನು ಕಾಯ್ದು ಕೊಳ್ಳುವ ಜತೆಗೆ ಸಹ ಆಟಗಾರನ ವಿಕೆಟ್‌ ರಕ್ಷಿಸುವತ್ತಲೂ ಇನ್ನಿಲ್ಲದ ನಿಗಾ ವಹಿಸಬೇಕಾಗುತ್ತದೆ. ಎದುರಾಳಿ ಬೌಲರ್ ತಂತ್ರಗಾರಿಕೆ ಕೂಡ ಇದೇ ಆಗಿರುತ್ತದೆ. ಬೇರೂರಿದ ಆಟಗಾರನನ್ನು ಬಿಟ್ಟು ಆತನ ಜತೆಗಾರನನ್ನು ಟಾರ್ಗೆಟ್‌ ಮಾಡಿಕೊಂಡಿರುತ್ತಾರೆ.

ಸ್ಯಾಮ್‌ ಕರನ್‌ ಸ್ಟ್ರೈಕ್‌ ಉಳಿಸಿ ಕೊಳ್ಳುವ ಯೋಜನೆಯಲ್ಲೇನೋ ಯಶಸ್ಸು ಕಂಡರು. ಆದರೆ ಕೊನೆಯಲ್ಲಿ ಅವರು ದೊಡ್ಡ ಹೊಡೆತಗಳಿಗಷ್ಟೇ ಮಹತ್ವ ಕೊಟ್ಟರೇ ಹೊರತು, ಸಿಂಗಲ್ಸ್‌ ಗಳನ್ನು ತೆಗೆದುಕೊಳ್ಳಲು ಹೋಗಲೇ ಇಲ್ಲ. ಹೀಗಾಗಿ ಕನಿಷ್ಠ 8-10 ಸಿಂಗಲ್‌ ರನ್‌ ವ್ಯರ್ಥವಾಗಿತ್ತು. ಕೊನೆಯಲ್ಲಿ ಇಂಗ್ಲೆಂಡ್‌ ಸೋಲಿನ ಅಂತರ ಕೂಡ ಇಷ್ಟೇ ಅಂತರದಲ್ಲಿತ್ತು. ಕರನ್‌ ಆ ಸಿಂಗಲ್ಸ್‌ ತೆಗೆದುಕೊಂಡು, ಜತೆಗಾರನಿಗೆ ಆಡಲು ಅವಕಾಶ ನೀಡಿದ್ದೇ ಆದರೆ ಭಾರತಕ್ಕೆ ಗೆಲುವು ಸಾಧ್ಯವಾಗುತ್ತಿತ್ತೇ? ಪ್ರಶ್ನೆ ಮೂಡುವುದು ಸಹಜ.

ಆದರೆ ಇಲ್ಲಿ ಏನೂ ಸಂಭವಿಸ ಬಹುದಿತ್ತು. ಜತೆಗಾರ ಬೇಗನೇ ಔಟಾಗಿ ಇಂಗ್ಲೆಂಡ್‌ ಬೇಗನೇ ಸೋಲ ಬಹುದಿತ್ತು ಅಥವಾ ಆ ಆಟಗಾರನೇ ಮುನ್ನುಗ್ಗಿ ಬೀಸಿ ತಂಡದ ಗೆಲುವನ್ನು ಸಾರಲೂಬಹುದಿತ್ತು. ಹೀಗಾಗಿ ಕರನ್‌ ನಿರ್ಧಾರವನ್ನು ಇಲ್ಲಿ ಪ್ರಶ್ನಿಸುವುದು ಖಂಡಿತ ತಪ್ಪಾಗುತ್ತದೆ.

ಆದರೆ ಕೊನೆಯ ವಿಕೆಟ್‌ ಕೈಯ ಲ್ಲಿರುವಾಗ ಕರನ್‌ ಸ್ಟ್ರೈಕ್‌ ಉಳಿಸಿಕೊಳ್ಳ ತೊಡಗಿರೆ ಹೆಚ್ಚು ಲಾಭವಾಗುತ್ತಿತ್ತು ಎಂಬುದು ನಿಜ. ಆಗ ಅವರ ಸೆಂಚುರಿ ಕೂಡ ಪೂರ್ತಿಗೊಳ್ಳುತ್ತಿತ್ತು.

ನಿಜ, ನಾನೇ ಹೆಚ್ಚಿನ ಸಂಖ್ಯೆಯ ಎಸೆತಗಳನ್ನು ಎದುರಿಸಿದೆ. ತಂಡವನ್ನು ಗೆಲ್ಲಿಸುವುದಷ್ಟೇ ನನ್ನ ಗುರಿಯಾಗಿತ್ತು. ಆದರೆ ನಾವು ಗೆಲ್ಲಲಿಲ್ಲ. ಆದರೆ ನಾನು ಆಡಿದ ರೀತಿ ಖುಷಿ ಕೊಟ್ಟಿದೆ. ಕೊನೆಯಲ್ಲಿ ಭುವನೇಶ್ವರ್‌, ನಟರಾಜನ್‌ ಹೆಚ್ಚು ಪರಿಣಾಮಕಾರಿಯಾಗಿ ಗೋಚರಿಸುತ್ತಿದ್ದರು. ಹೀಗಾಗಿ ನಾನು ಸ್ಟ್ರೈಕ್‌ ಉಳಿಸಿಕೊಳ್ಳಲು ಮುಂದಾದೆ. ನನ್ನ ಪಾಲಿಗೆ ಈ ಪಂದ್ಯವೊಂದು ಪಾಠ.
– ಸ್ಯಾಮ್‌ ಕರನ್

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.