ಮೂರೂ ಸರಣಿಗೆ ಭಾರತವೇ ಸರದಾರ : ಸೋತರೂ ಸ್ಯಾಮ್‌ ಕರನ್‌ ಸಾಹಸಕ್ಕೊಂದು ಸಲಾಂ!


Team Udayavani, Mar 28, 2021, 11:01 PM IST

ಮೂರೂ ಸರಣಿಗೆ ಭಾರತವೇ ಸರದಾರ : ಸೋತರೂ ಸ್ಯಾಮ್‌ ಕರನ್‌ ಸಾಹಸಕ್ಕೊಂದು ಸಲಾಂ!

ಪುಣೆ: ಸ್ಯಾಮ್‌ ಕರನ್‌ ಸಾಹಸದಿಂದ ಕೊನೆಯ ಹಂತದ ತನಕ ತೀವ್ರಾಸಕ್ತಿಯನ್ನು ಕಾಯ್ದುಕೊಂಡು ಬಂದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 7 ರನ್ನುಗಳ ರೋಚಕ ಜಯ ಸಾಧಿಸಿ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿ ಕೊಂಡಿದೆ.

ಇದರೊಂದಿಗೆ ಇಂಗ್ಲೆಂಡ್‌ ಎದುರಿನ ಮೂರೂ ಸರಣಿಗಳನ್ನು ಗೆದ್ದ ಸಾಹಸ ಭಾರತದ್ದಾಯಿತು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 48.2 ಓವರ್‌ಗಳಲ್ಲಿ 329 ರನ್‌ ಗಳಿಸಿದರೆ, ಇಂಗ್ಲೆಂಡ್‌ 9 ವಿಕೆಟಿಗೆ 322 ರನ್‌ ಗಳಿಸಿ ಗೆಲುವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿತು. ಆಗ 8ನೇ ಕ್ರಮಾಂಕದಲ್ಲಿ ಆಡಲಿಳಿದು ದಿಟ್ಟ ಬ್ಯಾಟಿಂಗ್‌ ಹೋರಾಟ ನೀಡಿದ ಸ್ಯಾಮ್‌ ಕರನ್‌ 95 ರನ್‌ ಗಳಿಸಿ ಅಜೇಯರಾಗಿದ್ದರು (83 ಎಸೆತ, 9 ಬೌಂಡರಿ, 3 ಸಿಕ್ಸರ್‌). ಅವರಿಗೆ ತಂಡವನ್ನು ದಡ ಮುಟ್ಟಿಸಲಾಗಲಿಲ್ಲ, ಶತಕವೂ ಒಲಿಯಲಿಲ್ಲ.

ಧವನ್‌-ರೋಹಿತ್‌ ಬಿರುಸಿನ ಆರಂಭ
ಶಿಖರ್‌ ಧವನ್‌-ರೋಹಿತ್‌ ಶರ್ಮ ಆರಂಭಿಕ ವಿಕೆಟಿಗೆ ದಾಖಲಿಸಿದ ಶತಕದ ಜತೆಯಾಟ, ಪಂತ್‌-ಹಾರ್ದಿಕ್‌ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್‌ ಭಾರತದ ಸರದಿಯ ಆಕರ್ಷಣೆಯಾಗಿತ್ತು. ಆದರೆ ನಾಯಕ ವಿರಾಟ್‌ ಕೊಹ್ಲಿ-ಕೆ.ಎಲ್‌. ರಾಹುಲ್‌ ವೈಫ‌ಲ್ಯ ಅನುಭವಿಸಿದ್ದು, ಹಾಗೆಯೇ ಅಂತಿಮ 10 ಓವರ್‌ಗಳಲ್ಲಿ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ ಕ್ರೀಸ್‌ನಲ್ಲಿ ಇಲ್ಲದಿದ್ದುದು ದೊಡ್ಡ ಕೊರತೆಯಾಗಿ ಕಾಡಿತು. ಹೀಗಾಗಿ ಭಾರತದ ಮೊತ್ತ 380ರ ಗಡಿಯನ್ನು ಮುಟ್ಟಿàತೆಂಬ ನಿರೀಕ್ಷೆ ಹುಸಿಯಾಯಿತು.
40 ಓವರ್‌ ಮುಕ್ತಾಯಕ್ಕೆ ಭಾರತ 6ಕ್ಕೆ 283 ರನ್‌ ಗಳಿಸಿತ್ತು. ಆದರೆ ಮುಂದಿನ 8.2 ಓವರ್‌ಗಳಲ್ಲಿ 46 ರನ್‌ ಮಾಡುವಷ್ಟರಲ್ಲಿ ಆಲೌಟ್‌ ಆಯಿತು.

ಧವನ್‌-ರೋಹಿತ್‌ ಜೋಡಿಯ ಆರಂಭ ಅಬ್ಬರದಿಂದ ಕೂಡಿತ್ತು. 14.4 ಓವರ್‌ಗಳಿಂದ 103 ರನ್‌ ಹರಿದು ಬಂತು. ರೋಹಿತ್‌ ಎಸೆತಕ್ಕೊಂದರಂತೆ 37 ರನ್‌ ಮಾಡಿ ರಶೀದ್‌ಗೆ ಬೌಲ್ಡ್‌ ಆದರು. ಆಗಲೇ ಧವನ್‌ 32ನೇ ಅರ್ಧ ಶತಕ ಬಾರಿಸಿ ಮುನ್ನುಗ್ಗಿದ್ದರು. ಅವರ 67 ರನ್‌ 56 ಎಸೆತಗಳಿಂದ ಬಂತು. ಇದು 10 ಬೌಂಡರಿಗಳನ್ನು ಒಳಗೊಂಡಿತ್ತು. ಧವನ್‌ ವಿಕೆಟ್‌ ಕೂಡ ರಶೀದ್‌ ಪಾಲಾಯಿತು. ಎರಡೇ ಓವರ್‌ಗಳಲ್ಲಿ ಮತ್ತೋರ್ವ ಸ್ಪಿನ್ನರ್‌ ಮೊಯಿನ್‌ ಅಲಿ ಭಾರತದ ನಾಯಕನನ್ನು ಬೌಲ್ಡ್‌ ಮಾಡಿದರು. ನೋಲಾಸ್‌ 103ರಲ್ಲಿದ್ದ ಭಾರತ 121ಕ್ಕೆ ತಲುಪುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತು.

ಹೀಗೆ ಮೊದಲ 3 ವಿಕೆಟ್‌ ಸ್ಪಿನ್ನರ್‌ಗಳ ಬುಟ್ಟಿಗೆ ಬಿದ್ದಾಗ ಆತಿಥೇಯರ ಪಾಳೆಯದಲ್ಲಿ ಸಹಜವಾಗಿಯೇ ಆತಂಕ ಶುರುವಾಯಿತು. ಟೀಮ್‌ ಇಂಡಿಯಾ ಸ್ಪೆಷಲಿಸ್ಟ್‌ ಸ್ಪಿನ್ನರ್‌ಗಳನ್ನು ಕೈಬಿಟ್ಟು ಗ್ಯಾಂಬ್ಲಿಂಗ್‌ ನಡೆಸಿತ್ತು!

ಪಂತ್‌-ಪಾಂಡ್ಯ ಅಬ್ಬರ
4ನೇ ಕ್ರಮಾಂಕಕ್ಕೆ ಭಡ್ತಿ ಪಡೆದು ಬಂದ ರಿಷಭ್‌ ಪಂತ್‌ ಮತ್ತು ಹಾರ್ದಿಕ್‌ ಪಾಂಡ್ಯ ಜತೆಗೂಡಿದ ಬಳಿಕ ಭಾರತದ ಬ್ಯಾಟಿಂಗ್‌ ಮತ್ತೆ ಬಿರುಸು ಪಡೆದುಕೊಳ್ಳತೊಡಗಿತು. ಇಬ್ಬರೂ ಪೈಪೋಟಿಗೆ ಇಳಿದವರಂತೆ ಬ್ಯಾಟ್‌ ಬೀಸತೊಡಗಿದರು. ಫೋರ್‌, ಸಿಕ್ಸರ್‌ ಸರಾಗವಾಗಿ ಸಿಡಿಯತೊಡಗಿತು. 30ನೇ ಓವರ್‌ನಲ್ಲಿ 200 ರನ್‌ ಪೂರ್ತಿಗೊಂಡಿತು. ಇವರಿಂದ 11.4 ಓವರ್‌ಗಳಿಂದ 5ನೇ ವಿಕೆಟಿಗೆ 99 ರನ್‌ ಒಟ್ಟುಗೂಡಿತು. ಇಬ್ಬರೂ ಅರ್ಧ ಶತಕ ಹೊಡೆದು ಸಂಭ್ರಮಿಸಿದರು.

ಪಂತ್‌ 62 ಎಸೆತ ನಿಭಾಯಿಸಿ 78 ರನ್‌ ಹೊಡೆದರು. 4 ಸಿಕ್ಸರ್‌, 5 ಬೌಂಡರಿ ಬಾರಿಸಿ ರಂಜಿಸಿದರು. ಇದು ಅವರ 3ನೇ ಅರ್ಧ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ.

20 ರನ್‌ ಒಟ್ಟುಗೂಡುವಷ್ಟರಲ್ಲಿ ಹಾರ್ದಿಕ್‌ ಪಾಂಡ್ಯ ಕೂಡ ಪೆವಿಲಿಯನ್‌ ಹಾದಿ ಹಿಡಿದರು. ಅವರು ತಮ್ಮ ಜವಾಬ್ದಾರಿಯನ್ನು 7ನೇ ಅರ್ಧ ಶತಕದೊಂದಿಗೆ ಯಶಸ್ವಿಯಾಗಿ ನಿಭಾಯಿಸಿದರು. 44 ಎಸೆತಗಳಿಂದ 64 ರನ್‌ ಹೊಡೆದ ಪಾಂಡ್ಯ ಕೂಡ ಪಂತ್‌ ಅವರಂತೆ 4 ಸಿಕ್ಸರ್‌, 5 ಬೌಂಡರಿ ಚಚ್ಚಿದರು. ಆದರೆ ಕೃಣಾಲ್‌ ಪಾಂಡ್ಯ ಬ್ಯಾಟಿಂಗ್‌ ಬಹಳ “ಡಲ್‌’ ಆಗಿತ್ತು. 34 ಎಸೆತ ಎದುರಿಸಿದ ಅವರು 25 ರನ್‌ ಮಾಡಿದರು. ಇದರಲ್ಲಿ ಒಂದೂ ಬೌಂಡರಿ ಶಾಟ್‌ ಇರಲಿಲ್ಲ.

ಕೊನೆಯಲ್ಲಿ ಕ್ಷಿಪ್ರ ಕುಸಿತ
39ನೇ ಓವರ್‌ ವೇಳೆ 5ಕ್ಕೆ 276 ರನ್‌ ಗಳಿಸಿ ದೊಡ್ಡ ಮೊತ್ತದತ್ತ ದೌಡಾಯಿಸುವ ಸೂಚನೆ ನೀಡಿದ್ದ ಭಾರತ, ಹಾರ್ದಿಕ್‌ ಪಾಂಡ್ಯ ನಿರ್ಗಮನದೊಂದಿಗೆ ಕ್ಷಿಪ್ರ ಕುಸಿತ ಕಂಡಿತು. 53 ರನ್‌ ಅಂತರದಲ್ಲಿ ಕೊನೆಯ 5 ವಿಕೆಟ್‌ ಉರುಳಿತು. ಈ ಅವಧಿಯಲ್ಲಿ ಶಾದೂìಲ್‌ ಠಾಕೂರ್‌ ಮಿಂಚಿನ ಆಟವಾಡಿ 21 ಎಸೆತಗಳಿಂದ 30 ರನ್‌ ಹೊಡೆದದ್ದು ಬೋನಸ್‌ ಆಗಿ ಪರಿಣಮಿಸಿತು. ಶಾದೂìಲ್‌ ಬ್ಯಾಟಿನಿಂದ 3 ಸಿಕ್ಸರ್‌, ಒಂದು ಬೌಂಡರಿ ಚಿಮ್ಮಿತು.

ಇಂಗ್ಲೆಂಡ್‌ ಪರ ಬೌಲಿಂಗ್‌ ದಾಳಿಗಿಳಿದ ಎಲ್ಲ 7 ಮಂದಿ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು!

ಚೇಸಿಂಗ್‌ ನಡೆಯಲಿಲ್ಲ!
ಕಳೆದ ಪಂದ್ಯದಲ್ಲಿ ಭರ್ಜರಿ ಚೇಸಿಂಗ್‌ ನಡೆಸಿ 336 ರನ್ನುಗಳ ಗಡಿ ದಾಟಿದ್ದ ಇಂಗ್ಲೆಂಡ್‌ ಇದೇ ಸ್ಫೂರ್ತಿಯಲ್ಲಿತ್ತು. ಭುವನೇಶ್ವರ್‌ ಅವರ ಮೊದಲ ಓವರಿನ ಮೊದಲೆರಡು ಎಸೆತಗಳನ್ನೇ ಜಾಸನ್‌ ರಾಯ್‌ ಬೌಂಡರಿಗೆ ಬಡಿದಟ್ಟಿದರು. 5ನೇ ಎಸೆತವೂ ಬೌಂಡರಿ ದಾಟಿತು. ಅಂತಿಮ ಎಸೆತದಲ್ಲಿ ಭುವಿ ತಿರುಗಿಬಿದ್ದರು. ರಾಯ್‌ (14) ಬೌಲ್ಡ್‌ ಆದರು!

ಮುಂದಿನ ಓವರಿನಲ್ಲೇ ಭುವನೇಶ್ವರ್‌ ದೊಡ್ಡ ಬೇಟೆಯಾಡಿದರು. ಮತ್ತೋರ್ವ ಓಪನರ್‌, ಕಳೆದ ಪಂದ್ಯದ ಶತಕವೀರ ಬೇರ್‌ಸ್ಟೊ (1) ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಭಾರತ 2019ರ ವಿಶ್ವಕಪ್‌ ಬಳಿಕ ಆಡಿದ 18 ಏಕದಿನ ಪಂದ್ಯಗಳಲ್ಲಿ ಮೊದಲ ಸಲ ಪವರ್‌ ಪ್ಲೇ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ವಿಕೆಟ್‌ ಉರುಳಿಸಿತ್ತು.

ಅಬ್ಬರವನ್ನು ಮುಂದುವರಿಸಿದ ಬೆನ್‌ ಸ್ಟೋಕ್ಸ್‌, ಸರಣಿಯಲ್ಲಿ ಇದೇ ಮೊದಲ ಸಲ ಆಡಲಿಳಿದ ನಟರಾಜನ್‌ ಮೋಡಿಗೆ ಸಿಲುಕಿದರು. ಸ್ಟೋಕ್ಸ್‌ ಗಳಿಕೆ 39 ಎಸೆತಗಳಿಂದ 35 ರನ್‌ (4 ಬೌಂಡರಿ, 1 ಸಿಕ್ಸರ್‌).

ಇಲ್ಲಿಂದ ಮುಂದೆ ಶಾದೂìಲ್‌ ಠಾಕೂರ್‌ ಶಾರ್ಪ್‌ ಬೌಲಿಂಗ್‌ ಮೂಲಕ ಆಂಗ್ಲರ ಮೇಲೆರಗಿ ಹೋದರು. ಅವರ ಮೊದಲ ವಿಕೆಟ್‌ ಉಸ್ತುವಾರಿ ನಾಯಕ ಜಾಸ್‌ ಬಟ್ಲರ್‌ (15) ಅವರದಾಗಿತ್ತು. ಮಲಾನ್‌-ಲಿವಿಂಗ್‌ಸ್ಟೋನ್‌ ಜತೆಗೂಡಿ ತಂಡಕ್ಕೆ ರಕ್ಷಣೆ ಒದಗಿಸುವ ಸೂಚನೆ ನೀಡಿದರು. 5ನೇ ವಿಕೆಟಿಗೆ 60 ರನ್‌ ಒಟ್ಟುಗೂಡಿತು. ಠಾಕೂರ್‌ ಇವರಿಬ್ಬರನ್ನೂ 13 ರನ್‌ ಅಂತರದಲ್ಲಿ ಪೆವಿಲಿಯನ್ನಿಗೆ ರವಾನಿಸಿ ಭಾರತವನ್ನು ಚಾಲಕನ ಸ್ಥಾನದಲ್ಲಿ ಕೂರಿಸಿದರು. ಮಾಲನ್‌ ಗಳಿಕೆ 50 ಎಸೆತಗಳಿಂದ 50 ರನ್‌.

ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಮೊಯಿನ್‌ ಅಲಿ ಅವರನ್ನು ದ್ವಿತೀಯ ಸ್ಪೆಲ್‌ನ ಮೊದಲ ಓವರಿನಲ್ಲೇ ಭುವಿ ಉರುಳಿಸಿದರು. ಮುಂದಿನದು ಸ್ಯಾಮ್‌ ಕರನ್‌ ಆಟ. ಅವರು ಚೊಚ್ಚಲ ಅರ್ಧ ಶತಕ ಬಾರಿಸಿ ಇಂಗ್ಲೆಂಡಿಗೆ ಹೊಸ ಭರವಸೆ ಮೂಡಿಸಿದರು. ಆದರೆ ತಂಡವನ್ನು ದಡ ಸೇರಿಸಲಾಗಲಿಲ್ಲ.

ಸ್ಕೋರ್‌ ಪಟ್ಟಿ
ಭಾರತ
ರೋಹಿತ್‌ ಶರ್ಮ ಬಿ ರಶೀದ್‌ 37
ಶಿಖರ್‌ ಧವನ್‌ ಸಿ ಮತ್ತು ಬಿ ರಶೀದ್‌ 67
ವಿರಾಟ್‌ ಕೊಹ್ಲಿ ಬಿ ಮೊಯಿನ್‌ 7
ರಿಷಭ್‌ ಪಂತ್‌ ಸಿ ಬಟ್ಲರ್‌ ಬಿ ಕರನ್‌ 78
ಕೆ.ಎಲ್‌. ರಾಹುಲ್‌ ಸಿ ಮೊಯಿನ್‌ ಬಿ ಲಿವಿಂಗ್‌ಸ್ಟೋನ್‌ 7
ಹಾರ್ದಿಕ್‌ ಪಾಂಡ್ಯ ಬಿ ಸ್ಟೋಕ್ಸ್‌ 64
ಕೃಣಾಲ್‌ ಪಾಂಡ್ಯ ಸಿ ರಾಯ್‌ ಬಿ ವುಡ್‌ 25
ಶಾರ್ದೂಲ್‌ ಠಾಕೂರ್‌ ಸಿ ಬಟ್ಲರ್‌ ಬಿ ವುಡ್‌ 30
ಭುವನೇಶ್ವರ್‌ ಸಿ ಕರನ್‌ ಬಿ ಟಾಪ್ಲಿ 3
ಪ್ರಸಿದ್ಧ್ ಕೃಷ್ಣ ಬಿ ವುಡ್‌ 0
ನಟರಾಜನ್‌ ಔಟಾಗದೆ 0
ಇತರ 11
ಒಟ್ಟು (48.2 ಓವರ್‌ಗಳಲ್ಲಿ ಆಲೌಟ್‌) 329
ವಿಕೆಟ್‌ ಪತನ: 1-103, 2-117, 3-121, 4-157, 5-256, 6-276, 7-321, 8-328, 9-329.
ಬೌಲಿಂಗ್‌; ಸ್ಯಾಮ್‌ ಕರನ್‌ 5-0-43-1
ರೀಸ್‌ ಟಾಪ್ಲಿ 9.2-0-66-1
ಮಾರ್ಕ್‌ ವುಡ್‌ 7-1-34-3
ಬೆನ್‌ ಸ್ಟೋಕ್ಸ್‌ 7-0-45-1
ಆದಿಲ್‌ ರಶೀದ್‌ 10 -0-81-2
ಮೊಯಿನ್‌ ಅಲಿ 7-0-39-1
ಲಿಯಮ್‌ ಲಿವಿಂಗ್‌ಸ್ಟೋನ್‌ 3-0-20-1

ಇಂಗ್ಲೆಂಡ್‌
ಜಾಸನ್‌ ರಾಯ್‌ ಬಿ ಭುವನೆಶ್ವರ್‌ 14
ಜಾನಿ ಬೇರ್‌ಸ್ಟೊ ಎಲ್‌ಬಿಡಬ್ಲ್ಯು ಭುವನೇಶ್ವರ್‌ 1
ಬೆನ್‌ ಸ್ಟೋಕ್ಸ್‌ ಸಿ ಧವನ್‌ ಬಿ ನಟರಾಜನ್‌ 35
ಡೇವಿಡ್‌ ಮಲಾನ್‌ ಸಿ ರೋಹಿತ್‌ ಬಿ ಶಾದೂìಲ್‌ 50
ಜಾಸ್‌ ಬಟ್ಲರ್‌ ಎಲ್‌ಬಿಡಬ್ಲ್ಯು ಶಾದೂìಲ್‌ 15
ಲಿವಿಂಗ್‌ಸ್ಟೋನ್‌ ಸಿ ಮತ್ತು ಬಿ ಶಾದೂìಲ್‌ 36
ಮೊಯಿನ್‌ ಅಲಿ ಸಿ ಹಾರ್ದಿಕ್‌ ಬಿ ಭುವನೇಶ್ವರ್‌ 29
ಸ್ಯಾಮ್‌ ಕರನ್‌ ಔಟಾಗದೆ 95
ಆದಿಲ್‌ ರಶೀದ್‌ ಸಿ ಕೊಹ್ಲಿ ಬಿ ಶಾದೂìಲ್‌ 19
ಮಾರ್ಕ್‌ ವುಡ್‌ ರನೌಟ್‌ 14
ರೀಸ್‌ ಟಾಪ್ಲಿ ಔಟಾಗದೆ 1
ಇತರ 13
ಒಟ್ಟು (9 ವಿಕೆಟಿಗೆ) 322
ವಿಕೆಟ್‌ ಪತನ: 1-14, 2-28, 3-68, 4-95, 5-155, 6-168, 7-200, 8-257, 9-317.
ಬೌಲಿಂಗ್‌;ಭುವನೇಶ್ವರ್‌ ಕುಮಾರ್‌ 10-0-42-3
ಟಿ. ನಟರಾಜನ್‌ 10-0-73-1
ಪ್ರಸಿದ್ಧ್ ಕೃಷ್ಣ 7-0-62-0
ಶಾರ್ದೂಲ್‌ ಠಾಕೂರ್‌ 10-0-67-4
ಹಾರ್ದಿಕ್‌ ಪಾಂಡ್ಯ 9-0-48-0
ಕೃಣಾಲ್‌ ಪಾಂಡ್ಯ 4-0-29-0

ಸರಣಿಶ್ರೇಷ್ಠ: ಜಾನಿ ಬೇರ್‌ಸ್ಟೊ

ಟಾಪ್ ನ್ಯೂಸ್

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.