ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ
ಹಿಮಪಾತಕ್ಕೆ ಸಿಲುಕಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು.
Team Udayavani, Jan 28, 2022, 11:18 AM IST
ವಾಷಿಂಗ್ಟನ್: ಮೈಕೊರೆಯುವಂತಹ ಚಳಿಗಾಳಿ, ಹಿಮಪಾತಕ್ಕೆ ಸಿಲುಕಿ ಇತ್ತೀಚೆಗೆ ಕೆನಡಾ/ಅಮೆರಿಕದ ಗಡಿಭಾಗದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದ ನಾಲ್ವರು ಭಾರತೀಯರ ಗುರುತು ಪತ್ತೆ ಹಚ್ಚಲಾಗಿದೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತ: 24ಗಂಟೆಯಲ್ಲಿ 2.51 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.16
ಈ ಭಾರತೀಯ ಕುಟುಂಬ ಕಾನೂನು ಬಾಹಿರವಾಗಿ ಮಧ್ಯವರ್ತಿಗಳ ಸಲಹೆಯಂತೆ ಗಡಿಯನ್ನು ದಾಟಿದ್ದು, ರಾತ್ರಿ ವೇಳೆ ಮೈನಸ್ 36 ಡಿಗ್ರಿ ಸೆಲ್ಸಿಯಸ್ ಮೈಕೊರೆಯುವಂತಹ ಚಳಿಗಾಳಿ, ಹಿಮಪಾತಕ್ಕೆ ಸಿಲುಕಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು.
ಜನವರಿ 19ರಂದು ಮ್ಯಾನಿಟೋಬಾ ಸಮೀಪದ ಎಮರ್ಸನ್ ಪ್ರದೇಶದಲ್ಲಿ ಅಮೆರಿಕವನ್ನು ಅಕ್ರಮವಾಗಿ ಗಡಿಭಾಗದ ಮೂಲಕ ಒಳಪ್ರವೇಶಿಸುವ ವೇಳೆ ಭಾರತೀಯ ಮೂಲದ ಜಗದೀಶ್ ಬಲ್ ದೇವ್ ಭಾಯಿ ಪಟೇಲ್ (39), ಪತ್ನಿ ವೈಶಾಲಿಬೆನ್ ಜಗದೀಶ್ ಕುಮಾರ್ ಪಟೇಲ್ 37ವರ್ಷ), ವಿಹಾಂಗಿ ಜಗದೀಶ್ ಕುಮಾರ್ (11ವರ್ಷ) ಮತ್ತು ಧಾರ್ಮಿಕ್ ಜಗದೀಶ್ ಕುಮಾರ್ (3ವರ್ಷ) ಭಾರೀ ಚಳಿ, ಹಿಮಪಾತ ತಾಳಲಾರದೆ ಸಾವನ್ನಪ್ಪಿರುವುದಾಗಿ ಕೆನಡಾದ ಅಧಿಕಾರಿಗಳು ವಿವರಿಸಿದ್ದಾರೆ.
ಪಟೇಲ್ ಕುಟುಂಬ ಗುಜರಾತ್ ನ ಕಾಲೋಲ್ ನ ದಿಂಗುಚಾ ಗ್ರಾಮದವರಾಗಿದ್ದಾರೆ ಎಂದು ವರದಿ ತಿಳಿಸಿದೆ. ಇದಕ್ಕೂ ಮುನ್ನ ಕೆನಡಾ ಅಧಿಕಾರಿಗಳು, ಹಿಮಪಾತ, ಚಳಿಗಾಳಿಗೆ ಸಿಲುಕಿ ಭಾರತೀಯ ಮೂಲದ ಪುರುಷ, ಮಹಿಳೆ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಶವ ಪತ್ತೆಯಾಗಿರುವುದಾಗಿ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ