ವನಿತಾ ಏಕದಿನ: ದಕ್ಷಿಣ ಆಫ್ರಿಕಾವನ್ನು ಕೆಡವಿದ ಭಾರತ


Team Udayavani, Mar 10, 2021, 12:40 AM IST

ವನಿತಾ ಏಕದಿನ: ದಕ್ಷಿಣ ಆಫ್ರಿಕಾವನ್ನು ಕೆಡವಿದ ಭಾರತ

ಲಕ್ನೋ: ಹಿರಿಯ ವೇಗಿ ಜೂಲನ್‌ ಗೋಸ್ವಾಮಿ ಅವರ ಘಾತಕ ಬೌಲಿಂಗ್‌, ಸ್ಮೃತಿ ಮಂಧನಾ-ಪೂನಂ ರಾವತ್‌ ಜೋಡಿಯ ಅಜೇಯ ಬ್ಯಾಟಿಂಗ್‌ ಪರಾಕ್ರಮದಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಂಗಳವಾರದ ಪಂದ್ಯವನ್ನು 9 ವಿಕೆಟ್‌ಗಳಿಂದ ಭರ್ಜರಿ ಯಾಗಿ ಗೆದ್ದು ಸರಣಿಯನ್ನು 1-1 ಸಮಬಲಕ್ಕೆ ತಂದಿದೆ.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪ್ರವಾಸಿ ದಕ್ಷಿಣ ಆಫ್ರಿಕಾಕ್ಕೆ ಆತಿಥೇಯರ ಶಿಸ್ತಿನ ಹಾಗೂ ಘಾತಕ ಬೌಲಿಂಗ್‌ ತಲೆನೋವಾಗಿ ಪರಿಣಮಿಸಿತು. 41 ಓವರ್‌ಗಳಲ್ಲಿ 157 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟ್‌ ಆಯಿತು. ಜವಾಬಿತ್ತ ಭಾರತ 28.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 160 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಮೊದಲ ಮುಖಾಮುಖೀಯಲ್ಲಿ ಭಾರತ 8 ವಿಕೆಟ್‌ ಸೋಲನುಭವಿಸಿತ್ತು. 3ನೇ ಪಂದ್ಯ ಶುಕ್ರವಾರ ನಡೆಯಲಿದೆ.

ಮಿಂಚಿನ ದಾಳಿ
ವೇಗಿಗಳಾದ ಜೂಲನ್‌ ಗೋಸ್ವಾಮಿ ಮತ್ತು ಮಾನ್ಸಿ ಜೋಶಿ ದಕ್ಷಿಣ ಆಫ್ರಿಕಾದ ಅಗ್ರ ಸರದಿಯನ್ನು ನಡುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ತಂಡ ಚೇತರಿಕೆ ಕಂಡಿತೆನ್ನುವಷ್ಟರಲ್ಲಿ ಕರ್ನಾಟಕದ ಎಡಗೈ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ ಘಾತಕ ವಾಗಿ ಪರಿಣಮಿಸಿದರು. ಹೀಗಾಗಿ ತಂಡಕ್ಕೆ ಸವಾಲಿನ ಮೊತ್ತ ಮರೀಚಿಕೆಯಾಗಿ ಪರಿಣಮಿಸಿತು.

ಜೂಲನ್‌ ಗೋಸ್ವಾಮಿ 4, ರಾಜೇಶ್ವರಿ ಗಾಯಕ್ವಾಡ್‌ 3 ಹಾಗೂ ಮಾನ್ಸಿ 2 ವಿಕೆಟ್‌ ಕೆಡವಿದರು. 49 ರನ್‌ ಮಾಡಿದ ಲಾರಾ ಗುಡಾಲ್‌ ಅವರದು ದಕ್ಷಿಣ ಆಫ್ರಿಕಾ ಸರದಿಯ ಗರಿಷ್ಠ ಮೊತ್ತ. ನಾಯಕಿ ಸುನೆ ಲೂಸ್‌ 36 ರನ್‌ ಮಾಡಿದರು. ಇವರಿಬ್ಬರ 3ನೇ ಜತೆಯಾಟದಲ್ಲಿ 60 ರನ್‌ ಹರಿದು ಬಂತು. 77 ರನ್‌ ಅಂತರದಲ್ಲಿ ಕೊನೆಯ 8 ವಿಕೆಟ್‌ ಉರುಳಿತು.

ಇದನ್ನೂ ಓದಿ :ಭಾರತದ ಸ್ಟಾರ್‌ ಚೆಸ್‌ ಆಟಗಾರ್ತಿ ಕೊನೆರು ಹಂಪಿಗೆ ಬಿಬಿಸಿ ಪ್ರಶಸ್ತಿ

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-41 ಓವರ್‌ಗಳಲ್ಲಿ 157 (ಗುಡಾಲ್‌ 49, ಲೂಸ್‌ 36, ಜೂಲನ್‌ 42ಕ್ಕೆ 4, ರಾಜೇಶ್ವರಿ ಗಾಯಕ್ವಾಡ್‌ 37ಕ್ಕೆ 3, ಮಾನ್ಸಿ 23ಕ್ಕೆ 2). ಭಾರತ-28.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 160 (ಮಂಧನಾ ಔಟಾಗದೆ 80, ಪೂನಂ ಔಟಾಗದೆ 62, ಶಬಿ°ಮ್‌ 46ಕ್ಕೆ 1). ಪಂದ್ಯಶ್ರೇಷ್ಠ: ಜೂಲನ್‌ ಗೋಸ್ವಾಮಿ.

ಮಂಧನಾ ಮಿಂಚಿನ ಆಟ
10 ರನ್‌ ಆಗುವಷ್ಟರಲ್ಲಿ ಜೆಮಿಮಾ ರೋಡ್ರಿಗಸ್‌ (9) ವಿಕೆಟ್‌ ಕಳೆದು ಕೊಂಡು ಅಪಾಯಕ್ಕೆ ಸಿಲುಕಿದ ಭಾರತಕ್ಕೆ ಸ್ಮೃತಿ ಮಂಧನಾ- ಪೂನಂ ರಾವತ್‌ ಸೇರಿಕೊಂಡು ರಕ್ಷಣೆ ಒದಗಿಸಿದರು. ಹರಿಣಗಳ ಬೌಲಿಂಗ್‌ ಪಡೆಯ ಮೇಲೆ ಸವಾರಿ ಮಾಡಿದ ಈ ಜೋಡಿ ಕೊನೆಯ ತನಕವೂ ಕ್ರೀಸ್‌ ಬಿಟ್ಟು ಕದಲಲಿಲ್ಲ. ಮುರಿಯದ ದ್ವಿತೀಯ ವಿಕೆಟಿಗೆ ಭರ್ತಿ 150 ರನ್‌ ಬಾರಿಸಿ ಭಾರತಕ್ಕೆ ಮಹೋನ್ನತ ಜಯವೊಂದನ್ನು ತಂದಿತ್ತರು.

ಇದರಲ್ಲಿ ಮಂಧನಾ ಕೊಡುಗೆ ಅಜೇಯ 80 ರನ್‌. 64 ಎಸೆತಗಳ ಈ ಅತ್ಯಾಕರ್ಷಕ ಆಟದಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ ಸೇರಿತ್ತು. ಮಂಧನಾ ಹೊರತುಪಡಿಸಿ ಈ ಪಂದ್ಯದಲ್ಲಿ ಬೇರೆ ಯಾರಿಂದಲೂ ಸಿಕ್ಸರ್‌ ದಾಖಲಾಗಲಿಲ್ಲ. ಮಂಧನಾ ಕಳೆದ 5 ಪಂದ್ಯಗಳಲ್ಲಿ ಬಾರಿಸಿದ 4ನೇ ಅರ್ಧ ಶತಕ ಇದಾಗಿದೆ. ಪೂನಂ ರಾವತ್‌ ಕೊಡುಗೆ 89 ಎಸೆತಗಳಿಂದ 62 ರನ್‌.

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.