IPL ಉದ್ಘಾಟನಾ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು ಸಿಎಸ್ ಕೆ ಬದಲು ಆರ್ಸಿಬಿ?
Team Udayavani, Aug 31, 2020, 4:38 PM IST
ಹೊಸದಿಲ್ಲಿ: ಐಪಿಎಲ್ಗಾಗಿ ಈಗಾಗಲೇ ಯುಎಇ ತಲುಪಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋವಿಡ್ ಆಕ್ರಮಣದಿಂದ ತತ್ತರಿಸಿದೆ. ಹೀಗಾಗಿ ಸೆ. 19ರ ಉದ್ಘಾಟನಾ ಪಂದ್ಯದಲ್ಲಿ ಅದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ದೂರಾಗಿದೆ. ಸಿಎಸ್ಕೆ ತಂಡದ ಕ್ವಾರಂಟೈನ್ ಅವಧಿ ವಿಸ್ತರಣೆಯಾಗಿದ್ದು, ಇದರಿಂದ ಅಭ್ಯಾಸ ಕೂಡ ವಿಳಂಬವಾಗುವುದೇ ಇದಕ್ಕೆ ಕಾರಣ.
ಹಾಗಾದರೆ 2020ನೇ ಸಾಲಿನ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಎದುರಾಗುವ ತಂಡಗಳು ಯಾವುದು ಎಂಬ ಕುತೂಹಲ ತೀವ್ರಗೊಂಡಿದೆ. ಒಂದು ಕಡೆ ಮುಂಬೈ ಇಂಡಿಯನ್ಸ್ ತಂಡವಂತೂ ಇದ್ದೇ ಇರುತ್ತದೆ. ಕಾರಣ, ಅದು ಹಾಲಿ ಚಾಂಪಿಯನ್. ರೋಹಿತ್ ಶರ್ಮ ಪಡೆಯ ಎದುರಾಳಿ ಯಾವುದು ಎಂಬುದು ಸದ್ಯದ ಪ್ರಶ್ನೆ.
ವರದಿಗಳ ಪ್ರಕಾರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಬದಲು ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಕಣಕ್ಕಿಳಿಯುವ ಸಾಧ್ಯತೆ ಇದೆ.
ಮೊದಲ ಪಂದ್ಯದಿಂದಲೇ ಜೋಶ್
“ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್ಸಿಬಿ ಆಡಲಿಳಿಯಬಹುದು. ಯಾವತ್ತೂ ಈ ಶ್ರೀಮಂತ ಕೂಟದ ಉದ್ಘಾಟನಾ ಪಂದ್ಯದಲ್ಲಿ ಸ್ಟಾರ್ ಆಟಗಾರರನ್ನು ಒಳಗೊಂಡ ತಂಡಗಳು ಮುಖಾಮುಖೀ ಆಗುವುದು ಸಂಪ್ರದಾಯ. ಮೊದಲ ಪಂದ್ಯದಿಂದಲೇ ಕೂಟದ ಜೋಶ್ ಹೆಚ್ಚಬೇಕು ಎಂಬುದು ಇದರ ಉದ್ದೇಶ. ಧೋನಿ ನೇತೃತ್ವದ ಸಿಎಸ್ಕೆ ಆಡದೇ ಹೋದರೆ, ಸ್ಟಾರ್ ಕ್ರಿಕೆಟಿಗರನ್ನು ಹೊಂದಿರುವ ಮತ್ತೂಂದು ತಂಡವೆಂದರೆ ಆರ್ಸಿಬಿ. ಆದರೆ ಚೆನ್ನೈ ಆರಂಭಿಕ ಪಂದ್ಯದಲ್ಲಿ ಆಡುವ ಅಥವಾ ಆಡದಿರುವ ವಿಚಾರ ಇನ್ನೂ ಅಧಿಕೃತಗೊಂಡಿಲ್ಲ. ಐಪಿಎಲ್ ಆಡಳಿತ ಮಂಡಳಿ ಈ ಕುರಿತು ಗಂಭೀರವಾಗಿ ಚಿಂತಿಸುತ್ತಿದೆ’ ಎಂಬುದಾಗಿ ಮೂಲವೊಂದರಿಂದ ತಿಳಿದು ಬಂದಿದೆ.
2019ರ ಫೈನಲಿಸ್ಟ್ ತಂಡಗಳನ್ನೇ 2020ರ ಉದ್ಘಾಟನಾ ಪಂದ್ಯದಲ್ಲಿ ಆಡಿಸುವುದು ಬಿಸಿಸಿಐ ಯೋಜನೆಯಾಗಿತ್ತು. ಕಳೆದ ವರ್ಷ ಮುಂಬೈ ಮತ್ತು ಚೆನ್ನೈ ತಂಡಗಳು ಹೈದರಾಬಾದ್ನಲ್ಲಿ ನಡೆದ ಪ್ರಶಸ್ತಿ ಸಮರದಲ್ಲಿ ಮುಖಾಮುಖೀಯಾಗಿದ್ದವು. ರೋಹಿತ್ ಪಡೆ ಒಂದು ರನ್ನಿನ ರೋಚಕ ಜಯ ದಾಖಲಿಸಿ ಟ್ರೋಫಿಯನ್ನೆತ್ತಿತ್ತು.
ಸ್ಟಾರ್ ಆಟಗಾರರ ಪಡೆ
ವಿರಾಟ್ ಕೊಹ್ಲಿ ನಾಯಕತ್ವದ ಆರ್ಸಿಬಿ ಈವರೆಗೆ ಚಾಂಪಿಯನ್ ಆಗದೇ ಹೋದರೂ ವಿಶ್ವ ದರ್ಜೆಯ ಸ್ಟಾರ್ ಆಟಗಾರರನ್ನು ಹೊಂದಿದೆ. ಆರನ್ ಫಿಂಚ್, ಎಬಿ ಡಿ ವಿಲಿಯರ್, ಮೊಯಿನ್ ಅಲಿ, ಕ್ರಿಸ್ ಮಾರಿಸ್, ಡೇಲ್ ಸ್ಟೇನ್, ಯಜುವೇಂದ್ರ ಚಹಲ್, ಇಸುರು ಉದಾನ ಅವರೊಂದಿಗೆ ನವದೀಪ್ ಸೈನಿ, ಶಿವಂ ದುಬೆ, ದೇವದತ್ತ ಪಡಿಕ್ಕಲ್, ವಾಷಿಂಗ್ಟನ್ ಸುಂದರ್ ಮೊದಲಾದ ಭರವಸೆಯ ಆಟಗಾರರಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಮುಂಬೈಯನ್ನು ಎದುರಿಸಲು ಆರ್ಸಿಬಿಯೇ ಸೂಕ್ತ ಎಂಬುದು ಬಿಸಿಸಿಐ ನಿರ್ಧಾರವಾದರೆ ಅಚ್ಚರಿಯೇನಿಲ್ಲ.
ಸ್ಟಾರ್ ಕ್ರಿಕೆಟಿಗರ ಪಡೆಯನ್ನೇ ಹೊಂದಿರುವ ಸನ್ರೈಸರ್ ಹೈದರಾಬಾದ್ ಕೂಡ ರೇಸ್ನಲ್ಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ