ಫ್ಯಾಶನ್ ಗೋಲ್ಡ್ ಜುವೆಲರಿ ವಂಚನೆ ಪ್ರಕರಣ! ಮಂಜೇಶ್ವರ ಶಾಸಕ ಖಮರುದ್ದೀನ್ ಬಂಧನ
Team Udayavani, Nov 8, 2020, 7:10 AM IST
ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆಗೆ ಸಂಬಂಧಿಸಿ ಮಂಜೇಶ್ವರ ಶಾಸಕ, ಸಂಸ್ಥೆಯ ಚೇರ್ಮನ್ ಹಾಗೂ ಮುಸ್ಲಿಂ ಲೀಗ್ ನೇತಾರ ಎಂ.ಸಿ. ಖಮರುದ್ದೀನ್ ಅವರನ್ನು ಕ್ರೈಂ ಬ್ರಾಂಚ್ನ ಪ್ರತ್ಯೇಕ ತನಿಖಾ ತಂಡವು ಶನಿವಾರ ಸಂಜೆ ಜಾಮೀನು ರಹಿತ ಕೇಸು ದಾಖಲಿಸಿ ಬಂಧಿಸಿದೆ.
ಚಿನ್ನಾಭರಣ ಮತ್ತು ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಖಮರುದ್ದೀನ್ ವಿರುದ್ಧ 115ರಷ್ಟು ಕೇಸುಗಳು ದಾಖಲಾಗಿವೆ ಎಂದು ಎಎಸ್ಪಿ ವಿವೇಕ್ ಕುಮಾರ್ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರದಲ್ಲಿ ಖಮರುದ್ದೀನ್ ಅವರನ್ನು ಬಂಧಿಸಲಾಗಿದೆ.
15 ಕೋಟಿ ರೂ. ವಂಚನೆ
15 ಕೋಟಿ ರೂ. ಗಳಷ್ಟು ವಂಚನೆ ನಡೆಸಿದ ಬಗ್ಗೆ ಮಾಹಿತಿ ಲಭಿಸಿದೆ ಎಂದು ತನಿಖಾ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು. ತನಿಖಾ ತಂಡವು ಶನಿವಾರ ಬೆಳಗ್ಗೆ ಎಂ.ಸಿ.ಖಮರುದ್ದೀನ್ ಅವರನ್ನು ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರಕ್ಕೆ ಕರೆಸಿ ಅಲ್ಲಿ 5 ಗಂಟೆಗಳ ಕಾಲ ಪ್ರತ್ಯೇಕ ವಿಚಾರಣೆ ನಡೆಸಿತು. ಈ ಸಂದರ್ಭ ಸಮಗ್ರ ಮಾಹಿತಿ ಸಂಗ್ರಹಿಸಿದ ಅನಂತರ ಸಂಜೆ 4 ಗಂಟೆಯ ವೇಳೆಗೆ ಶಾಸಕರನ್ನು ಬಂಧಿಸಲಾಗಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು, ಚಂದೇರ, ಪಯ್ಯನ್ನೂರು ಮುಂತಾದ ಪೊಲೀಸ್ ಠಾಣೆಗಳಲ್ಲಿ ಶಾಸಕರ ವಿರುದ್ಧ 115ರಷ್ಟು ಕೇಸುಗಳು ದಾಖಲಾಗಿವೆ. ಚಂದೇರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ನಾಲ್ಕು ಕೇಸುಗಳಲ್ಲಿ ಬಂಧಿಸಲಾಗಿದೆ. 15 ಕೋಟಿ ರೂ. ಠೇವಣಿ ಸಂಗ್ರಹ ವಂಚನೆ ನಡೆದಿದೆ ಎಂದು ಕಂಡುಕೊಳ್ಳಳಾಗಿದೆ.
ಸುಮಾರು 800ರಷ್ಟು ಠೇವಣಿದಾರರಿಂದ ಭಾರೀ ಮೊತ್ತ ಪಡೆದು ಬಳಿಕ ಅದನ್ನು ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಖಮರುದ್ದೀನ್ ಮತ್ತು ಜುವೆಲರಿಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮುಸ್ಲಿಂ ಲೀಗ್ನ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪೂಕೋಯ ತಂಙಳ್ಅವರ ಮನೆಗೆ ಇತ್ತೀಚೆಗೆ ತನಿಖಾ ತಂಡವು ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿತ್ತು. .
ಶಾಸಕ ಖಮರುದ್ದೀನ್ರ ಬಂಧನದಿಂದ ಮುಸ್ಲಿಂ ಲೀಗ್ಗೆ ತೀವ್ರ ಮುಖಭಂಗವಾಗಿದೆ. ಮಾತ್ರವಲ್ಲದೆ ಐಕ್ಯರಂಗದ ಘಟಕ ಪಕ್ಷವಾದ ಕಾಂಗ್ರೆಸ್ನ್ನು ಪೇಚಿಗೆ ಸಿಲುಕಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಚುನಾ ವಣೆಯು ಸಮೀಪಿಸುತ್ತಿದ್ದಂತೆ ಇದು ಐಕ್ಯರಂಗವನ್ನು ತೀವ್ರ ಸಂದಿಗ್ಧ ಸ್ಥಿತಿಗೆ ಸಿಲುಕಿಸಿದೆ.
ಬಿಜೆಪಿ ಹೋರಾಟದಿಂದ ಬಂಧನ:
ಬಿಜೆಪಿ ನಡೆಸಿದ ಹೋರಾಟ ದಿಂದ ಖಮರುದ್ದೀನ್ ಬಂಧನ ವಾಗಿದೆ. ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ