ಜಾಡಿ, ಹಟ್ಟಿಯಂಗಡಿ ರಸ್ತೆ : ಡಾಮರು ಕಾಮಗಾರಿಗೆ ಮಧ್ಯದಲ್ಲೊಂದು ತೊಡಕು
Team Udayavani, Mar 18, 2021, 5:10 AM IST
ವಂಡ್ಸೆ: ದೇವಲ್ಕುಂದದಿಂದ ಹಟ್ಟಿಯಂಗಡಿ ಕ್ರಾಸ್ವರೆಗಿನ ಸುಮಾರು 4 ಕೋಟಿ ರೂ. ವೆಚ್ಚದ ರಸ್ತೆ ಡಾಮರು ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅಲ್ಲಿನ ಕಿರು ಸೇತುವೆಯ ಬಳಿ ಒಂದಿಷ್ಟು ವ್ಯಾಪ್ತಿಯ ರಸ್ತೆ ಡಾಮರು ಕಾಮಗಾರಿ ಬಾಕಿ ಉಳಿದಿರುವುದು ಸ್ಥಳೀಯರು ಹಾಗೂ ನಿತ್ಯ ಸಂಚಾರಿಗಳಿಗೆ ಕಿರಿಕಿರಿ ಉಂಟು ಮಾಡಿದೆ.
ಶಾಸಕರ ಪ್ರಯತ್ನದ ಫಲ
ಗ್ರಾಮಸ್ಥರ ಬಹಳಷ್ಟು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಬೈಂದೂರು ಶಾಸಕ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅನುದಾನವನ್ನು ಒದಗಿಸಿದ್ದರು. ಈ ನಡುವೆ ರಸ್ತೆ ವಿಸ್ತ ರ ಣೆ ಸಂದರ್ಭದಲ್ಲಿ ಎದುರಾದ ತಕರಾರು ಕೂಡ ಇತ್ಯರ್ಥಗೊಳಿಸಿ ಕಾಮಗಾರಿ ಮುಂದುವರಿಸಲಾಗಿತ್ತು.
ಅವೈಜ್ಞಾನಿಕ ಕಿರು ಸೇತುವೆ
ನಿರ್ಮಿಸಲಾಗಿರುವ ಕಿರು ಸೇತುವೆ ಅವೈಜ್ಞಾನಿಕವಾಗಿದ್ದು ಆ ಮಾರ್ಗವಾಗಿ ವಾಹನಗಳು ಸಾಗುವಾಗ ಭಯದ ವಾತಾವರಣದಲ್ಲಿ ಸಂಚರಿಸಬೇಕಾಗಿದೆ. ತಿರುವಿನ ನಡುವೆ ನಿರ್ಮಿಸಲಾಗಿರುವ ಸೇತುವೆ ಅಪಘಾತ ಆಹ್ವಾನಿಸುವಂತಿದೆ.
ಪೂರ್ಣಗೊಳ್ಳದ ಕಾಮಗಾರಿ
ಸೇತುವೆ ಸನಿಹದ ಮುಖ್ಯ ರಸ್ತೆಯ ಡಾಮರು ಕಾಮಗಾರಿ ಆರಂಭಗೊಳ್ಳದಿರುವುದು ವಾಹನ ಚಾಲಕರಿಗೆ ಹೊಂಡಮಯ ರಸ್ತೆಯಲ್ಲಿ ಸಾಗಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹಟ್ಟಿಯಂಗಡಿ ಕ್ರಾಸ್ನಿಂದ ದೇವಲ್ಕುಂದದವರೆಗಿನ ಜಾಡಿ ರಸ್ತೆಯ ಅಪೂರ್ಣಗೊಂಡ ಕಾಮಗಾರಿ ಕೂಡಲೇ ಆರಂಭಗೊಳ್ಳದಿದ್ದಲ್ಲಿ ಮಳೆಗಾಲದಲ್ಲಿ ಈ ಮಾರ್ಗವಾಗಿ ಸಂಚರಿಸುವ ದ್ವಿಚಕ್ರ ವಾಹನ ಸಹಿತ ಇನ್ನಿತರ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಲಿದೆ. ಅವೈಜ್ಞಾನಿಕ ಕಿರುಸೇತುವೆಯ ಬದಲು ನೇರ ಮಾರ್ಗದ ಕಿರುಸೇತುವೆಯ ನಿರ್ಮಾಣದೊಡನೆ ಉಳಿದ ಭಾಗದ ರಸ್ತೆಯ ಕಾಮಗಾರಿ ಪೂರ್ಣಗೊಂಡಲ್ಲಿ ತಲ್ಲೂರು ಮಾರ್ಗವಾಗಿ ಕೊಲ್ಲೂರಿಗೆ ಸಾಗುವ ನಿತ್ಯ ಪ್ರಯಾಣಿಕರಿಗೆ ಸುಮಾರು 5 ಕಿ.ಮೀ. ದೂರ ವ್ಯಾಪ್ತಿ ಅಂತರ ಉಳಿತಾಯವಾಗಲಿದ್ದು, ಸುಗಮ ವಾಹನ ಸಂಚಾರಕ್ಕೆ ಹತ್ತಿರದ ಮಾರ್ಗ ವಾಗಿ ರೂಪುಗೊಳ್ಳಲಿದೆ. ಹಟ್ಟಿಯಂಗಡಿ- ಕೊಲ್ಲೂರು ಕ್ಷೇತ್ರ ಯಾತ್ರಾರ್ಥಿಗಳಿಗೆ ಸನಿಹದ ಮಾರ್ಗವಾಗಲಿದೆ.
ಶೀಘ್ರದಲ್ಲಿ ಪೂರ್ಣ
ಮಿಕ್ಕುಳಿದ ರಸ್ತೆ ನಿರ್ಮಾಣ ಕಾಮಗಾರಿ ಅತಿ ಶೀಘ್ರದಲ್ಲಿ ಪೂರ್ಣ ಗೊಳಿಸಲಾಗುವುದು.ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗ ದಂತೆ ಕ್ರಮ ಕೈಗೊಳ್ಳಲಾಗುವುದು.
-ಬಿ.ಎಂ. ಸುಕುಮಾರ್ ಶೆಟ್ಟಿ, ಶಾಸಕರು ಬೈಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
MUST WATCH
ಹೊಸ ಸೇರ್ಪಡೆ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು