ಸಿದ್ದರಾಮಯ್ಯ ಬಿಎಸ್ ವೈ ಜೊತೆಗೆ ಈಗಲೂ ಡೀಲ್ ಮಾಡಿಕೊಂಡಿದ್ದಾರೆ: ಸಿಎಂ ಇಬ್ರಾಹಿಂ ವಾಗ್ದಾಳಿ
ಆ 12 ಜನರನ್ನು ಸಿದ್ದರಾಮಯ್ಯ ಮುಂಬೈಗೆ ಕಳಿಸಿ ಮಂಚದ ಮೇಲೆ ಮಲಗಿಸಿ ವೀಡಿಯೋ ಮಾಡಿಸಿ, ಯಡಿಯೂರಪ್ಪನ ಸಿಎಂ ಮಾಡಿದರು
Team Udayavani, Jun 12, 2022, 5:48 PM IST
ಬೆಂಗಳೂರು: 2023 ಕ್ಕೆ ಕುಮಾರಸ್ವಾಮಿ ಸಿಎಂ ಆಗೋದಕ್ಕೆ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಸೇರಿ ಫೌಂಡೇಶನ್ ಹಾಕಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಇವತ್ತಿನ ಮುಹೂರ್ತ ಬರೆದಿಟ್ಟುಕೊಳ್ಳಿ ಬಿಜೆಪಿಯವರಿಗೆ ಜೆಡಿಎಸ್ ನಂಬರ್ 1 ಬರುತ್ತದೆ ಎನ್ನುವುದು ಗೊತ್ತಾಗಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗೋದು ಗೊತ್ತಾಗಿದೆ. ರಮೇಶ್ ಕುಮಾರ್ ಭಾರೀ ಸಿದ್ದಾಂತ ಮಾತಾನಾಡುತ್ತಾರೆ. ಇದೇ ಡಿಕೆ ಶಿವಕುಮಾರ್ ಕಾಂಗ್ರೆಸ್ ನ ಒಂದು ಓಟು ಬಿಜೆಪಿ ಒಂದು ಓಟು ಹಾಕಿಸಿದ್ದಾರೆ. ಇಬ್ಬರು ಧರ್ಮಪತ್ನಿಯರು ಒಂದೇ ಗಂಡ ಏನು ನಾಟಕನಪ್ಪ ನಿಮ್ಮದು ಎಂದು ವ್ಯಂಗ್ಯವಾಗಿ ಟೀಕಿಸಿದರು.
ಕುಪೇಂದ್ರ ರೆಡ್ಡಿ ಓಟು ಕೇಳೋಕೆ ಹೋದಾಗ ಸತೀಶ್ ರೆಡ್ಡಿ ಏನು ಹೇಳಿದ್ರಿ? ಸಿದ್ದರಾಮಯ್ಯಗೆ ಉಸಿರಿರಲಿಲ್ಲ. ಕೆಪಿಸಿಸಿ ಪ್ರೆಸಿಡೆಂಟ್ ಡಿಕೆಶಿವಕುಮಾರ್ ಬಿಜೆಪಿಗೆ ಓಟು ಹಾಕಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಡಿ.ಕೆ ಶಿವಕುಮಾರ್ ಅವರನ್ನು ಕಿತ್ತುಹಾಕಬೇಕು ಎಂದರು.
ಇದನ್ನೂ ಓದಿ:ಕಡಬ : ಚಲಿಸುತ್ತಿದ್ದ ಬಸ್ ಮೇಲೆಯೇ ಬಿದ್ದ ಮರ : ಅಪಾಯದಿಂದ ಪಾರಾದ ಪ್ರಯಾಣಿಕರು!
ಸಿದ್ದರಾಮಯ್ಯ ರನ್ನು ವಿರೋಧ ಪಕ್ಷದಿಂದ ತೆಗೆದು ಹಾಕೋ ತಾಕತ್ತಿದೆಯಾ? ಸುರ್ಜೆವಾಲಾ ಎಲ್ಲಿ ಹೋದ್ಯಪ್ಪ ಡಬರಿವಾಲಾ? ಅವರವರ ಪಾಲು ಇಸ್ಕೊಂಡು ಊರು ಬಿಟ್ಟರು. ಅವನು ಬಂದ ಸೂಟ್ ಕೇಸ್, ಇವನು ಬಂದ ಸೂಟ್ ಕೇಸು ಸೂಟ್ ಕೇಸ್ ಇಸ್ಕೊಳ್ಳೋದು ಬಹುತ್ ಅಚ್ಚಾ ಹೈ ಎನ್ನೋದು ದೆಹಲಿಯಿಂದ ಬಂದವರೆಲ್ಲ ಹೀಗೆ ಸೂಟ್ ಕೇಸ್ ಎತ್ಕೊಂಡು ಹೋಗೋದು ಕುಪೇಂದ್ರ ರೆಡ್ಡಿ ಗೂಟ ಭಾರೀ ಗಟ್ಟಿ, ನಿಮಗೆ ಬುದ್ದಿ ಕಲಿಸುತ್ತಾರೆ ಎಂದು ಹೇಳಿದರು.
ಪಾಪ ಮನ್ಸೂರ್ ಖಾನ್ ಗೆ ಜಟ್ಕಾ ಮಾಡಿಬಿಟ್ರಲ್ಲ. ಹಲಾಲ್ ಮಾಡಿದ್ದಾದರೂ ನಡಿತಿತ್ತು ಜಟ್ಕಾ ಮಾಡಿಬಿಟ್ಟರಲ್ಲಾ. ನನಗೂ ಕಾಂಗ್ರೆಸ್ ನವರು ಜಟ್ಕಾ ಮಾಡೋದಕ್ಕೆ ಹೊರಟಿದ್ದರು. ನಾನು ತಪ್ಪಿಸಿಕೊಂಡು ಬಂದು ಕುಮಾರಸ್ವಾಮಿ ಪಕ್ಕದಲ್ಲಿ ಗಂಡಸಾಗಿ ಕುಳಿತಿದ್ದೇನೆ ಎಂದರು.
12 ಜನರನ್ನು ಸಿದ್ದರಾಮಯ್ಯ ಮುಂಬೈಗೆ ಕಳಿಸಿ ಮಂಚದ ಮೇಲೆ ಮಲಗಿಸಿ ವಿಡಿಯೋ ಮಾಡಿಸಿ, ಯಡಿಯೂರಪ್ಪನ ಸಿಎಂ ಮಾಡಿದರು. ಏರ್ಪೋರ್ಟ್ ನಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪನ ಜೊತೆಗೆ ಈಗಲೂ ಡೀಲ್ ಮಾಡ್ಕೊಂಡಿಕೊಂಡಿದ್ದಾರೆ. ಸಿಟಿ ರವಿ ಅದಕ್ಕೆ ಕಾಂಗ್ರೆಸ್ ಆಫೀಸಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದಾರೆ. ಒಬ್ಬರ ಬಳಿ ತಾಳಿ ಕಟ್ಟಿಸಿಕೊಳ್ಳೋದು ಇನ್ನೊಬ್ಬರ ಹತ್ತಿರ ಬಾನ ಮಾಡ್ತೀರಲ್ಲ ನಾಚಿಕೆಗಟ್ಟವರು, ಮಾನಗೆಟ್ಟವರು ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಕಾರ್ಯಕರ್ತರಿಗೆ ನೋವಿದೆ, ಜನರಲ್ಲಿ ಆಕ್ರೋಶ ಇದೆ. ಇವರು ಬಿಬಿಎಂಪಿ ಚುನಾವಣೆ ಮಾಡಲ್ಲ ಗೊತ್ತಿದೆ. ಕುಮಾರಸ್ವಾಮಿ ಬಗ್ಗೆ ಗುಬ್ಬಿ ಶ್ರೀನಿವಾಸ್ ಮಾತಾಡ್ತಿದ್ದಾನೆ ಅಂತ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಾಯಿ ಮನುಷ್ಯನಿಗೆ ಕಚ್ಚುತ್ತದೆ ಹೊರತು ಮನುಷ್ಯ ನಾಯಿಗೆ ಕಚ್ಚುವುದಿಲ್ಲ ಎಂದು ತೀಕ್ಷ್ಣವಾಗಿ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ