ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಖಚಿತ: ಕನ್ನಡಪರ ಸಂಘಟನೆಗಳ ನಿರ್ಧಾರ
Team Udayavani, Nov 20, 2020, 12:06 PM IST
ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ರಚನೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್ ಮಾಡಲು ನಿರ್ಧರಿಸಿದೆ.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಕನ್ನಡ ಪರ ಸಂಘಟನೆಗಳ ಸಭೆಯಲ್ಲಿ ಬಂದ್ ಮಾಡುವ ಬಗ್ಗೆ ನಿರ್ಧಾರಕ್ಕೆ ಬರಲಾಯಿತು. ಡಿಸೆಂಬರ್ 5ರಂದು ಬೆಳಿಗ್ಗೆ 6ರಿಂದ ಸಂಜೆ 6 ರವರೆಗೆ ಬಂದ್ ನಡೆಯಲಿದೆ.
ಸಿಎಂ ಬಿಎಸ್ ವೈ ನೇತೃತ್ವದ ರಾಜ್ಯ ಸರ್ಕಾರ ಇತ್ತೀಚೆಗೆ ಮರಾಠ ಅಭಿವೃದ್ಧಿ ನಿಗಮ ರಚಿಸಿತ್ತು. ಆದರೆ ಇದಕ್ಕೆ ವಿರೋಧಗಳು ಎದುರಾಗಿತ್ತು. ರಾಜ್ಯ ಸರ್ಕಾರ ಮರಾಠಿಗರಿಗೆ ನೆರವು ನೀಡುತ್ತಿದೆ ಎಂದು ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ಇದನ್ನೂ ಓದಿ:ಹಳೇ ನಿಗಮಗಳಿಗೆ ಸಿಕ್ಕಿಲ್ಲ ವಾರಸುದಾರ; ಹೊಸದಕ್ಕೆ ಯಾರು ಜವಾಬ್ದಾರ?
ಹೋಟೆಲ್ ಉದ್ಯಮ ನೈತಿಕ ಬೆಂಬಲ: ಡಿಸೆಂಬರ್ 5ರ ಕರ್ನಾಟಕ ಬಂದ್ ಗೆ ಹೋಟೆಲ್ ಉದ್ಯಮವು ನೈತಿಕ ಬೆಂಬಲ ನೀಡಲು ಮಾತ್ರ ನಿರ್ಧರಿಸಿದೆ. ಹೋಟೆಲ್ ಗಳನ್ನು ಬಂದ್ ಮಾಡದೆ, ನೈತಿಕ ಬೆಂಬಲ ನೀಡಲು ಮಾತ್ರ ನಿರ್ಧರಿಸಿದೆ.