ಶಾಸಕರ ದತ್ತು ಶಾಲೆಗೆ ಕಟ್ಟಡವೇ ಸುಭದ್ರವಾಗಿಲ್ಲ! ನೂತನ ಸರ್ಕಾರಿ ಪ್ರೌಢಶಾಲೆಯ ಅವ್ಯವಸ್ಥೆ
Team Udayavani, Dec 10, 2020, 12:51 PM IST
ಕೋಲಾರ: ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ತಾವು ದತ್ತು ಪಡೆದ 3 ಶಾಲೆ ಪೈಕಿ ಜಿಲ್ಲಾ ಕೇಂದ್ರದ ನೂತನ ಸರ್ಕಾರಿ ಪ್ರೌಢಶಾಲೆಗೆ ಕಟ್ಟಡವೇ ಸುಭದ್ರವಾಗಿಲ್ಲ. ಸುಮಾರು 40 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಶಾಲಾಕಟ್ಟಡಕ್ಕೆಈಗಲೂ
ಮೂಲಭೂತ ಸೌಕರ್ಯಗಳಿಲ್ಲ. ವಿಶ್ವೇಶ್ವರಯ್ಯ ಕ್ರೀಡಾಂಗಣ ಹಾಗೂ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿಯೇ ಶಾಲೆ ಇದ್ದರೂ, ದುರಸ್ತಿಗೆ ಯಾರೂ ಗಮನಹರಿಸಿಲ್ಲ. ಉಸ್ತುವಾರಿ ಸಚಿವರು ಇದೇ ಶಾಲೆ ಮುಂದೆಯೇ ರಾಷ್ಟ್ರೀಯ ಹಬ್ಬಗಳಿಗೆ ಧ್ವಜ ಹಾರಿಸಲು ಹೋದರೂ ಶಾಲೆಯ ಅಧ್ವಾನದ ಪರಿಸ್ಥಿತಿ ಅವಲೋಕಿಸಿಲ್ಲ.
ಕೊಠಡಿ ಶಿಥಿಲ: ಸುಮಾರು 30 ವರ್ಷಗಳಿಂದಲೂ ಶಾಲಾ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದಿಲ್ಲ. ಇದೇ ಶಿಥಿಲಗೊಂಡಿರುವ ಕಟ್ಟಡದಲ್ಲಿ ಪದವಿ ಪೂರ್ವ ಕಾಲೇಜು ನಡೆಯುತ್ತಿದ್ದು, ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಪ್ರೌಢ ಶಾಲೆಯಲ್ಲಿ 262 ಮಂದಿ ವ್ಯಾಸಂಗ ಮಾಡುತ್ತಿದ್ದು, 4 ಕೊಠಡಿ ಸಂಪೂರ್ಣ ಶಿಥಿಲಗೊಂಡಿದೆ. ನೆಲಹಾಸು ಕಿತ್ತು ಬಂದಿದ್ದು,
ತೇಪೆಗಳನ್ನು ತಾತ್ಕಾಲಿಕವಾಗಿ ಹಾಕಲಾಗಿದೆ. ಮಳೆ ಬಂದರೆ ಸೋರುತ್ತದೆ. ಆಗಾಗ್ಗೆಚಾವಣಿ ಸಿಮೆಂಟ್ ಕುಸಿಯುತ್ತಿರುತ್ತದೆ.
ಕಾರಿಡಾರ್ ಚಾವಣಿಯೂ ಕುಸಿಯುತ್ತಾ ಸಿಮೆಂಟ್ ಕಬ್ಬಿಣದ ಅಸ್ಥಿಪಂಜರ ಕಾಣುವಂತಾಗಿದೆ.
ಇದನ್ನೂ ಓದಿ:ಮತದಾರರಿಗೆ ಆಮಿಷವೊಡ್ಡಿದರೆ ನಿರ್ದಾಕ್ಷಿಣ್ಯಕ್ರಮ : ಜಿಲ್ಲಾಧಿಕಾರಿ ಎಚ್ಚರಿಕೆ
ತಾರಸಿ ಕುಸಿತ ಭೀತಿ: ಕೆಲವೊಮ್ಮೆ ಶಿಕ್ಷಕರ ವಿಶ್ರಾಂತಿ ಕೊಠಡಿಯಲ್ಲಿಯೇ ತಾರಸಿ ಸಿಮೆಂಟ್ ಕುಸಿದು ಬಿದ್ದು, ಶಿಕ್ಷಕಿಯೊಬ್ಬರು ಗಾಯಗೊಂಡ ಘಟನೆಯೂ ಜರುಗಿದೆ. ತರಗತಿಗಳಲ್ಲಿ ಇದೇ ಪರಿಸ್ಥಿತಿ ಇದ್ದು ವಿದ್ಯಾರ್ಥಿಗಳು ಯಾವಾಗ ತಾರಸಿ ಕುಸಿಯುತ್ತದೋ
ಎಂದು ಭೀತಿಯಿಂದಲೇ ಎಚ್ಚರ ವಹಿಸಬೇಕಾಗಿದೆ. ಈ ಕಟ್ಟಡದಲ್ಲಿ ನಡೆಯುವ ಶಾಲಾಕಾಲೇಜಿಗೆವಿದ್ಯಾರ್ಥಿಗಳು ಸುತ್ತಮುತ್ತಲ ಗ್ರಾಮಗಳಿಂದ ಬರು ತ್ತಿದ್ದು, ಬಹುತೇಕಸಾರಿಗೆಸಂಸ್ಥೆಬಸ್ಗಳನ್ನೇಅವಲಂಬಿಸಿದ್ದಾರೆ.
ಶಾಲೆಯಲ್ಲಿ ಇಬ್ಬರು ದೈಹಿಕ ಶಿಕಣ ಶಿಕ್ಷಕರಿದ್ದಾರೆ. ಸಿಬ್ಬಂದಿ ವರ್ಗಕ್ಕೆ ಇಬ್ಬರು ಶಿಕ್ಷಕರ ಕೊರತೆ ಇದೆಯಾದರೂ ಸಮಸ್ಯೆ ಇಲ್ಲದಂತೆ ನೋಡಿ ಕೊಳ್ಳಲಾಗುತ್ತಿದೆ.
– ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
MUST WATCH
ಹೊಸ ಸೇರ್ಪಡೆ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್