ದುರಸ್ತಿ ಭಾಗ್ಯ ಕಾಣದ ಕೋಣಿ- ಕೋಟೇಶ್ವರ ರಸ್ತೆ : ಅಲ್ಲಲ್ಲಿ ಹೊಂಡ- ಗುಂಡಿ
Team Udayavani, Mar 28, 2021, 7:07 PM IST
ಬಸ್ರೂರು : ಕುಂದಾಪುರ – ತೀರ್ಥಹಳ್ಳಿ ಹೆದ್ದಾರಿಯ ಕೋಣಿ ಬಳಿಯಿಂದ ಕೋಟೇಶ್ವರಕ್ಕೆ ಸಂಚರಿಸುವ ಒಳ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿದ್ದು, ಇನ್ನೂ ದುರಸ್ತಿಗೆ ಕಾಲ ಕೂಡ ಬಂದಿಲ್ಲ. ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಹೊಂಡ- ಗುಂಡಿಗಳಿದ್ದು, ಸಂಚಾರ ದುಸ್ತರವಾಗಿದೆ.
ಈ ಕೋಣಿ – ಕೋಟೇಶ್ವರ ಸಂಪರ್ಕ ರಸ್ತೆ ಕಿರಿದಾಗಿದ್ದು, ಈ ರಸ್ತೆಯಲ್ಲಿ ಉದ್ದಕ್ಕೂ ಹೊಂಡಗಳೇ ತುಂಬಿದ್ದು ಎದುರಿನಿಂದ ಬೇರೊಂದು ವಾಹನ ಬಂದರೆ ಎಡಕ್ಕೆ ತಿರುಗಿಸಿದರೆ ಇಲ್ಲಿ ಚರಂಡಿಗೆ ಬೀಳುವ ಸಾಧ್ಯತೆ ಇದೆ.
ಈ ರಸ್ತೆಯ ಆರಂಭದಲ್ಲಿ ಸುಮಾರು 150 ಮೀ.ಗಳಷ್ಟೆ ಕೋಣಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುತ್ತದೆ. ಅಲ್ಲಿಂದ ಹಂಗಳೂರು ಗ್ರಾ.ಪಂ. ವ್ಯಾಪ್ತಿ ಆರಂಭ ವಾಗುತ್ತದೆ. ಇಲ್ಲೂ ರಸ್ತೆ ತುಂಬಾ ಹೊಂಡಗಳೇ ತುಂಬಿವೆ. ಈ ರಸ್ತೆಯಲ್ಲಿ ಮುಂದೆ ಹೋದರೆ ಕೋಟೇಶ್ವರ ವ್ಯಾಪ್ತಿ ಆರಂಭವಾಗುತ್ತದೆ.
ಇದನ್ನೂ ಓದಿ :ಚೀನಾ ಸೇನೆಗೆ ಭಾರತ ತಕ್ಕ ಪಾಠ ಕಲಿಸಿದೆ: ಸಂಸದ ತೇಜಸ್ವಿ ಸೂರ್ಯ
ಇದು ಕುಂದಾಪುರ – ತೀರ್ಥಹಳ್ಳಿ ಹೆದ್ದಾರಿಯಿಂದ ಕೋಟೇಶ್ವರ – ಹಾಲಾಡಿ ಜಿಲ್ಲಾ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ.ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಕೋಣಿ – ಕೋಟೇಶ್ವರ ಸಂಪರ್ಕ ರಸ್ತೆಗೆ ದುರಸ್ತಿ ಭಾಗ್ಯ ಬಂದಿಲ್ಲ. ಈ ರಸ್ತೆಯಲ್ಲಿ ಕುಂದಾಪುರಕ್ಕೆ ಹೋಗದೆ ಕೋಟೇಶ್ವರ ಮತ್ತಿತರ ಪ್ರದೇಶಗಳಿಗೆ ಹೋಗಬಹುದಾಗಿದೆ.
ವಿಶೇಷವೆಂದರೆ ಕುಂದಾಪುರ ಅಗ್ನಿಶಾಮಕ ಠಾಣೆಯಿರುವುದೂ ಈ ಕೋಣಿಯ ಇಕ್ಕಟ್ಟಿನ ರಸ್ತೆಗಳ ಮಧ್ಯೆ. ತುರ್ತಾಗಿ ಸಾಗಬೇಕಾದರೆ ಎದುರಿನಿಂದ ಯಾವ ವಾಹನವೂ ಬರಬಾರದು. ದ್ವಿಚಕ್ರ ವಾಹನ ಸವಾರರು ಸೇರಿದಂತೆ ಯಾವುದೇ ವಾಹನವೂ ಈ ರಸ್ತೆಯಲ್ಲಿ ಸರಾಗವಾಗಿ ಸಾಗುವಂತಿಲ್ಲ. ಸಂಬಂಧಪಟ್ಟ ಇಲಾಖೆ ತತ್ಕ್ಷಣ ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ