ಕೊಂಕಣ ರೈಲ್ವೇ : ಭೂಸಂತ್ರಸ್ತರಿಗಿಲ್ಲ ನೌಕರಿಯ ನೆಲೆ


Team Udayavani, Feb 7, 2021, 7:00 AM IST

ಕೊಂಕಣ ರೈಲ್ವೇ : ಭೂಸಂತ್ರಸ್ತರಿಗಿಲ್ಲ ನೌಕರಿಯ ನೆಲೆ

ಉಡುಪಿ: ಕೊಂಕಣ ರೈಲ್ವೇ ನಿರ್ಮಾಣವಾಗುವಾಗ ಭೂಮಿ ಒದಗಿಸಿದ ಸಂತ್ರಸ್ತರಿಗೆ ಉದ್ಯೋಗ ನೀಡುವುದಾಗಿ ನಿಗಮವು ನೀಡಿದ್ದ ಭರವಸೆ ಕ್ಷೀಣವಾಗುತ್ತಿದೆ. ಈಗ ಅರ್ಹತೆ ಹೊಂದಿರುವ ಭೂ ಸಂತ್ರಸ್ತ ರಿಗೂ “ಅರ್ಹತೆ ಇಲ್ಲ’ ಎಂಬ ಸಬೂಬು ನೀಡಿ ಹೊರಗಿನವರನ್ನು, ವಿಶೇಷವಾಗಿ ಉತ್ತರ ಭಾರತದವರನ್ನು ನೇಮಿ ಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ಡಿ ದರ್ಜೆಯಲ್ಲಿಯೇ ನಿವೃತ್ತಿ!
ಕೊಂಕಣ ರೈಲ್ವೇಯಲ್ಲಿ ಸುಮಾರು 7 ಸಾವಿರ ನೌಕರರಿದ್ದಾರೆ. ಇವರಲ್ಲಿ ಸುಮಾರು 5 ಸಾವಿರ ಮಂದಿ ಡಿ ದರ್ಜೆಯವರು. ಸುಮಾರು 4 ಸಾವಿರ ಸಂತ್ರಸ್ತರಲ್ಲಿ ಡಿ ದರ್ಜೆಯವರೇ ಅಧಿಕ. ಒಟ್ಟು ನೌಕರರಲ್ಲಿ ಸುಮಾರು 2 ಸಾವಿರ ಮಂದಿ ನಿರ್ಮಾಣ ಕ್ಷೇತ್ರದವರಿದ್ದರೆ, ಸುಮಾರು 500 ಮಂದಿ ರೈಲ್ವೇ ಮಂಡಳಿ ಪರೀಕ್ಷೆ ಬರೆದು ಬಂದವರು. 1990ರ ದಶಕದಲ್ಲಿ ಸೇರಿದ ಈ 1,500 ಡಿ ದರ್ಜೆ ನೌಕರರಲ್ಲಿ ಬಹುತೇಕರು ಭಡ್ತಿಗೆ ಅರ್ಹತೆ ಇದ್ದರೂ ಡಿ ದರ್ಜೆಯಲ್ಲಿಯೇ ನಿವೃತ್ತಿಯ ವಯಸ್ಸಿಗೆ ಬರುತ್ತಿದ್ದಾರೆ. ಇವರ ಸ್ಥಾನಕ್ಕೆ ವಿದ್ಯಾರ್ಹತೆ ಇರುವ ಇವರ ಪೀಳಿಗೆಯವರನ್ನು ಸೇರಿಸಿಕೊಳ್ಳಲು ಅವಕಾಶವಿದ್ದರೂ ಈಗ ಹೊರಗಿನ ವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಸುಮಾರು 450 ನೌಕರರು ಹೀಗೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಮಿಕ ಯೂನಿಯನ್‌ ಪಾತ್ರ
ಕೊಂಕಣ ರೈಲ್ವೇಯಲ್ಲಿ ಸ್ಥಾಪಕ ಜಾರ್ಜ್‌ ಫೆರ್ನಾಂಡಿಸ್‌ ಹೆಸರಿನ ಕಾರ್ಮಿಕ ಸಂಘಟನೆ ಇದ್ದು, ಇದಕ್ಕೆ ಸಂಯೋಜನೆಗೊಂಡ ಕೊಂಕಣ ರೈಲ್ವೇ ನಿಗಮ ಕಾರ್ಮಿಕ ಯೂನಿಯನ್‌ (ಕೆಆರ್‌ಸಿಇಯು) ಇತ್ತು. ಈಗ ರಾಷ್ಟ್ರೀಯ ರೈಲ್ವೇ ಮಜ್ದೂರ್‌ ಯೂನಿಯನ್‌ ಅಧಿಕೃತ ಮಾನ್ಯತೆ ಹೊಂದಿದೆ. ನೌಕರರ ಹೆಚ್ಚು ಮತ ಪಡೆದ ಯೂನಿಯನ್‌ ಆಡಳಿತ ಮಂಡಳಿಯಲ್ಲಿ ಮಾನ್ಯತೆ ಹೊಂದುತ್ತದೆ. 2013-15ರ ಅವಧಿಯಲ್ಲಿ ಕೆಆರ್‌ಸಿಇಯು ಮಾನ್ಯತೆ ಹೊಂದಿದ್ದಾಗ ಅರ್ಹತೆ ಇರುವ ಸುಮಾರು 400 ಡಿ ದರ್ಜೆ ನೌಕರರು ಭಡ್ತಿ ಹೊಂದಿದ್ದರು.

ಹೊರ ರಾಜ್ಯ ನೌಕರರು
ಸ್ಟೇಶನ್‌ ಮಾಸ್ಟರ್‌ ಹುದ್ದೆಗೆ ಯಾವುದೇ ಪದವೀಧರರಾದರೆ ಸಾಕು, ಕಿರಿಯ ಎಂಜಿನಿಯರ್‌ (ಇಲೆಕ್ಟ್ರಿಕಲ್‌) ಹುದ್ದೆಗೆ ಡಿಪ್ಲೊಮಾ ಕಲಿಕೆ ಸಾಕು. ಆದರೆ ಭೂಸಂತ್ರಸ್ತ ಮನೆಗಳ ನೌಕರರು ಇರುವುದು ಪಾಯಿಂಟ್‌ಮನ್‌, ಟ್ರ್ಯಾಕ್‌ಮನ್‌, ಸ್ವೀಪರ್‌, ಹೆಲ್ಪರ್‌ ಇತ್ಯಾದಿ ಡಿ ದರ್ಜೆ ಹುದ್ದೆಗಳಲ್ಲಿ ಮಾತ್ರ. ಮೇಲ್ದರ್ಜೆ ಹುದ್ದೆಗಳಿಗೆ ಇವರಲ್ಲಿಯೇ ಅರ್ಹರಿದ್ದರೂ ಹೊರಗಿನವರನ್ನು ಕರೆತರುವ ಪ್ರಯತ್ನ ಕಾರ್ಮಿಕ ಸಂಘಟನೆಯಿಂದ ನಡೆಯುತ್ತಿದೆಯೇ ಎಂಬ ಸಂಶಯ ಮೂಡಿದೆ.

ಯೂನಿಯನ್‌ ಕುಮ್ಮಕ್ಕು?
ಇತ್ತೀಚಿಗೆ ರತ್ನಗಿರಿ ವಿಭಾಗದ ಸಿಂಧುದುರ್ಗದಲ್ಲಿ ಎನ್‌ಆರ್‌ಎಂ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ವೇಣು ಪಿ. ನಾಯರ್‌ ನೀಡಿದ ಹೇಳಿಕೆ ಈ ಸಂಶಯಕ್ಕೆ ಪುಷ್ಟಿ ನೀಡುತ್ತದೆ. ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, “ಭೂಸಂತ್ರಸ್ತರಲ್ಲಿ ಸೂಕ್ತ ವಿದ್ಯಾರ್ಹತೆ ಇರುವವರು ಇಲ್ಲ. ಆದ್ದರಿಂದ ಹೊರಗಿನವರನ್ನು ಸೇರಿಸಿಕೊಳ್ಳಲಾಗುತ್ತಿದೆ’ ಎಂದಿದ್ದರು. ವಿವಿಧ ಸರಕಾರಿ ಸಂಸ್ಥೆಗಳಲ್ಲಿ ಕಾರ್ಮಿಕ ಯೂನಿಯನ್‌ ಹೆಸರಿನಲ್ಲಿ ಆಡಳಿತ ಮಂಡಳಿ ಜತೆ ಒಳ ಒಪ್ಪಂದ ಮಾಡಿಕೊಂಡು ಯೂನಿಯನ್‌ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳುವುದು ಹೊಸ ವಿಷಯವಲ್ಲ,

ಒಂದು ಪೀಳಿಗೆಯ ಅಂತಿಮ ಘಟ್ಟ
ಕೊಂಕಣ ರೈಲ್ವೇ ಆರಂಭವಾದಾಗ ಭೂಸಂತ್ರಸ್ತರಲ್ಲಿ ಸೌಲಭ್ಯ ಪಡೆದು ಕೊಳ್ಳುವ ವಿಶೇಷ ಕಾಳಜಿ ಇತ್ತು. ಈಗ ಒಂದು ಪೀಳಿಗೆಯ ಕಾಲ ಮುಗಿದು ಇನ್ನೊಂದು ಪೀಳಿಗೆಯ ಕಾಲ ಘಟ್ಟ. ಹೆಚ್ಚಿನವರಿಗೆ ಆ ಕಾಲದಲ್ಲಿ ಸೌಲಭ್ಯ ಪಡೆದುಕೊಳ್ಳಲು ನಡೆಸಿದ ಹೋರಾಟದ ನೆನಪೂ ಇಲ್ಲವಾಗಿದೆ. ಆಗ “ಉದಯವಾಣಿ’, “ತರಂಗ’ ಜನ ಜಾಗೃತಿ ರೂಪಿಸಿ ಸಂತ್ರಸ್ತರಿಗೆ ಪರಿಹಾರ, ಉದ್ಯೋಗ ಇತ್ಯಾದಿ ವಿಷಯಗಳಲ್ಲಿ ನ್ಯಾಯ ದೊರಕಿಸಿಕೊಡುವಲ್ಲಿ ಬಹುತೇಕ ಯಶಸ್ವಿಯಾಗಿತ್ತು.

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.