ಕುಂದಾಪುರ, ಬೈಂದೂರು ತಾ.ಪಂ. ಕಳಕೊಳ್ಳಲಿದೆ ಕ್ಷೇತ್ರಗಳು; ಜಿ.ಪಂ. ಯಥಾಸ್ಥಿತಿ


Team Udayavani, Feb 12, 2021, 5:00 AM IST

ಕುಂದಾಪುರ, ಬೈಂದೂರು ತಾ.ಪಂ. ಕಳಕೊಳ್ಳಲಿದೆ ಕ್ಷೇತ್ರಗಳು; ಜಿ.ಪಂ. ಯಥಾಸ್ಥಿತಿ

ಕುಂದಾಪುರ: ತಾಲೂಕು ಪಂಚಾಯತ್‌ ವ್ಯವಸ್ಥೆ ರದ್ದತಿಯ ಚರ್ಚೆಯ ನಡು ವೆ ಯೇ ಚುನಾವಣ ಆಯೋಗ ಮಾತ್ರ ಚುನಾವಣೆಗೆ ಸಜ್ಜಾಗುತ್ತಿದೆ. ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಗೆ ರಾಜ್ಯ ಚುನಾವಣ ಆಯೋಗ ಸಿದ್ಧತೆ ನಡೆಸಿದ್ದು ಅದರ ಅನ್ವಯ ಜಿ.ಪಂ., ತಾ.ಪಂ. ಕ್ಷೇತ್ರಗಳ ವಿಂಗಡಣೆಗೆ ಮುಂದಾಗಿದೆ. ಗಜೆಟ್‌ ನೋಟಿಫಿಕೇಶನ್‌ ಬುಧವಾರ ಪ್ರಕಟವಾಗಿದ್ದು ಹೊಸ ನೀತಿ ಪ್ರಕಾರ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಲಿದೆ. ಜಿ.ಪಂ. ಸದಸ್ಯರ ಸ್ಥಾನದ ಸಂಖ್ಯೆ ಅಷ್ಟೇ ಇರಲಿದೆ.

37 ಸದಸ್ಯರಿದ್ದರು
ಕುಂದಾಪುರ ತಾಲೂಕು ಪಂಚಾಯತ್‌ನಲ್ಲಿ 2015ರಲ್ಲಿ ಚುನಾವಣೆ ನಡೆದಾಗ 37 ಸದಸ್ಯರು ಆಯ್ಕೆಯಾಗಿದ್ದರು. ಬೈಂದೂರು ಹಾಗೂ ಹೆಬ್ರಿ ಪ್ರತ್ಯೇಕ ತಾಲೂಕಾಗಿ, ಹೊಸದಾಗಿ ತಾ.ಪಂ. ರಚನೆಯಾದ ಬಳಿಕ ಸದಸ್ಯರ ವಿಂಗಡಣೆಯಾಯಿತು. ಅದರಂತೆ ಕುಂದಾಪುರ 22, ಬೈಂದೂರು 14, ಹೆಬ್ರಿಗೆ 1 ಸದಸ್ಯರು ಹಂಚಿಹೋದರು.

ಹೊಸ ಸಂಖ್ಯೆ
ಉಡುಪಿ ಜಿಲ್ಲೆಯಲ್ಲಿ ತಾ.ಪಂ.ಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಒಟ್ಟು ಜನಸಂಖ್ಯೆ ಲೆಕ್ಕಾವಾರು ಸದಸ್ಯ ಸ್ಥಾನಗಳ ಹಂಚಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಸದಸ್ಯರ ಸಂಖ್ಯೆಯಲ್ಲಿ ಕಡಿತವಾಗಲಿದ್ದು ಹೊಸ ತಾ.ಪಂ.ಗಳ ಸದಸ್ಯ ಬಲದಲ್ಲಿ ವ್ಯತ್ಯಯವಾಗಲಿದೆ. ಕುಂದಾಪುರ ತಾ.ಪಂ.ನಲ್ಲಿ ಪ್ರಸ್ತುತ 22 ಸದಸ್ಯ ಸ್ಥಾನಗಳಿದ್ದು ಹೊಸದಾಗಿ ವಿಂಗಡಣೆಯಾದ ಬಳಿಕ 19 ಸ್ಥಾನಗಳಷ್ಟೇ ದೊರೆಯಲಿವೆ. ಬೈಂದೂರಿನಲ್ಲಿ 14 ಸ್ಥಾನಗಳಿದ್ದು 9 ಸ್ಥಾನಗಳಷ್ಟೇ ದೊರೆಯಲಿದೆ. ಹೆಬ್ರಿಗೆ 11 ಸದಸ್ಯರು ಇರಲಿದ್ದಾರೆ. ಕುಂದಾಪುರ ತಾ.ಪಂ. ಆಗಲೂ ಈಗಲೂ ಮುಂದೆಯೂ ಜಿಲ್ಲೆಯ ಅತಿದೊಡ್ಡ ತಾ.ಪಂ. ಆಗಿರಲಿದೆ. ಫೆ.20ರ ಒಳಗೆ ಕ್ಷೇತ್ರ ಪುನರ್ವಿಂಗಡಣೆ ಮಾಡಿ ಆಯೋಗಕ್ಕೆ ವರದಿ ನೀಡಬೇಕಿದೆ. ಜಿ.ಪಂ. ಸದಸ್ಯರ ಸಂಖ್ಯೆ 10 ಇದ್ದು ಅದರಲ್ಲಿ ಬದಲಾವಣೆ ಇಲ್ಲ. ಆದರೆ ಹೊಸ ನಿಯಮದಂತೆ ಬೈಂದೂರು ತಾ|ನಲ್ಲಿ 5 ಸದಸ್ಯರ ಬದಲು ಮೂವರು ಇರಲಿದ್ದು ಕುಂದಾಪುರ ತಾ|ನಲ್ಲಿ 7 ಸದಸ್ಯರು ಇರುತ್ತಾರೆ.

ರದ್ದು
ಬೈಂದೂರು ಪ.ಪಂ. ಆದ ಕಾರಣ ಆ ಭಾಗದ ತಾ.ಪಂ., ಜಿ.ಪಂ. ಕ್ಷೇತ್ರ ರದ್ದಾಗಲಿದೆ. ಬೈಂದೂರು ಜಿ.ಪಂ. ಕ್ಷೇತ್ರ ರದ್ದಾಗಲಿದೆ. ಬದಲಿಗೆ ಪ್ರತ್ಯೇಕ ಹೆಸರಿನ ಕ್ಷೇತ್ರ ರಚನೆಯಾಗಲಿದ್ದು ಶಿರೂರು, ಕಂಬದಕೋಣೆ ಕ್ಷೇತ್ರಗಳು ಇರಲಿವೆ. ಪಡುವರಿ, ಯಡ್ತರೆ, ಬೈಂದೂರು ತಾ.ಪಂ. ಕ್ಷೇತ್ರಗಳು ರದ್ದಾಗುವ ಸಾಧ್ಯತೆಯಿದೆ. ಉಳಿದಂತೆ ಇನ್ನೆರಡು ಕ್ಷೇತ್ರಗಳು ರದ್ದಾಗಲಿದ್ದು ಯಾವುವು ಎಂದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಕುಂದಾಪುರ ಪುರಸಭೆ ನಗರಸಭೆ ಆಗುವುದಾದರೆ ಅದರ ಸನಿಹದ ಕ್ಷೇತ್ರಗಳು ರದ್ದಾಗುವ ಸಾಧ್ಯತೆಯಿತ್ತು. ಆದರೆ ಪುರಸಭೆ ಮೇಲ್ದರ್ಜೆಗೇರುವ ಕಡತ ಇನ್ನೂ ಪೂರ್ಣಪ್ರಮಾಣದಲ್ಲಿ ತಯಾರಾಗಿಲ್ಲ. ಆದ್ದರಿಂದ ಅದರ ಸುತ್ತಲಿನ ಕ್ಷೇತ್ರಗಳಾದ ಕೋಟೇಶ್ವರ, ಕೋಣಿ ಆತಂಕದಿಂದ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಿದ್ದರೂ ಮೂರು ಕ್ಷೇತ್ರಗಳು ರದ್ದಾಗಲಿದ್ದು ಯಾವೆಲ್ಲ ಕ್ಷೇತ್ರಗಳು ರದ್ದಾಗಲಿವೆ ಎಂಬ ಕುತೂಹಲ ಗರಿಗೆದರಿದೆ. ಜನಸಂಖ್ಯೆ ಆಧಾರಿತವಾಗಿ ವಿಂಗಡಣೆ ನಡೆಯಲಿದೆ.

ಯಾವೆಲ್ಲ ಕ್ಷೇತ್ರ
ಪ್ರಸ್ತುತ ಕುಂದಾಪುರ ತಾ.ಪಂ.ಗೆ ಆಲೂರು, ತ್ರಾಸಿ, ಗಂಗೊಳ್ಳಿ, ವಂಡ್ಸೆ, ಕರ್ಕುಂಜೆ, ಸಿದ್ದಾಪುರ, ಆಜ್ರಿ, ಕಾವ್ರಾಡಿ, ಹೆಮ್ಮಾಡಿ, ತಲ್ಲೂರು, ಶಂಕರನಾರಾಯಣ, ಬಸೂÅರು, ಕೋಣಿ, ಕೋಟೇಶ್ವರ, ಹಂಗಳೂರು, ಬೀಜಾಡಿ, ಕುಂಭಾಶಿ, ಬೇಳೂರು, ಕಾಳಾವರ, ಮೊಳಹಳ್ಳಿ, ಹಾರ್ದಳ್ಳಿ ಮಂಡಳ್ಳಿ, ಅಮಾಸೆಬೈಲು ಕ್ಷೇತ್ರಗಳಿವೆ. ಬೈಂದೂರು ತಾ.ಪಂ.ಗೆ ಶಿರೂರು 1, ಶಿರೂರು 2, ಪಡುವರಿ, ಯಡ್ತರೆ, ಬೈಂದೂರು, ಉಪ್ಪುಂದ, ಬಿಜೂರು, ಕೊಲ್ಲೂರು, ಕಾಲೊ¤àಡು, ಕಂಬದಕೋಣೆ, ಕಿರಿಮಂಜೇಶ್ವರ, ಮರವಂತೆ, ನಾಡಾ, ಹಳ್ಳಿಹೊಳೆ ಕ್ಷೇತ್ರಗಳಿವೆ. ಬೆಳ್ವೆ ಕ್ಷೇತ್ರ ಹೆಬ್ರಿ ತಾ.ಪಂ. ಪಾಲಾಗಿದೆ. ಬೈಂದೂರಿನಲ್ಲಿ ಶಿರೂರು, ಬೈಂದೂರು, ಕಂಬದಕೋಣೆ ಜಿ.ಪಂ. ಕ್ಷೇತ್ರಗಳಿದ್ದು ವಂಡ್ಸೆ, ಸಿದ್ದಾಪುರ, ತ್ರಾಸಿ ಜಿ.ಪಂ.ಕ್ಷೇತ್ರಗಳು ಕುಂದಾಪುರ ಹಾಗೂ ಬೈಂದೂರನ್ನು ಬೆಸೆದಿವೆ. ಕಾವ್ರಾಡಿ, ಹಾಲಾಡಿ, ಕೋಟೇಶ್ವರ, ಬೀಜಾಡಿ ಜಿ.ಪಂ. ಕ್ಷೇತ್ರಗಳು ಕುಂದಾಪುರ ತಾಲೂಕಿನಲ್ಲಿವೆ.

ತಯಾರಾಗಲಿದೆ
ಅಧಿಸೂಚನೆ ಬಂದಿದ್ದು ಅದರಲ್ಲಿ ಸೂಚಿಸಿದ ಮಾರ್ಗಸೂಚಿಯಂತೆ ಕ್ಷೇತ್ರವಾರು ವಿಂಗಡಣೆ ಮಾಡಿ ಚುನಾವಣ ಆಯೋಗಕ್ಕೆ ಕಳುಹಿಸಲಾಗುತ್ತದೆ. ಜಿ.ಪಂ. ಸದಸ್ಯ ಸ್ಥಾನಗಳು ಮೊದಲಿನಷ್ಟೇ ಇರಲಿದ್ದು ತಾ.ಪಂ. ಕ್ಷೇತ್ರಗಳಲ್ಲಿ ಬದಲಾವಣೆ ಆಗಲಿದೆ.
-ಸದಾಶಿವ ಪ್ರಭು ಅಪರ ಜಿಲ್ಲಾಧಿಕಾರಿ, ಉಡುಪಿ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.