ಕುಂದಾಪುರ ಕಕ್ಕುಂಜೆಯ ಕುವರಿ ಶ್ವೇತಭವನದ ಅಧಿಕಾರಿ


Team Udayavani, Nov 22, 2020, 6:50 AM IST

ಕುಂದಾಪುರ ಕಕ್ಕುಂಜೆಯ ಕುವರಿ ಶ್ವೇತಭವನದ ಅಧಿಕಾರಿ

ಉಡುಪಿ: ಕರಾವಳಿ ಮೂಲದ ಕುವರಿ ಮಾಲಾ ಅಡಿಗ ಅವರು ಅಮೆರಿಕದ ಶ್ವೇತಭವನದಲ್ಲಿ ಪ್ರಭಾವಿ ಅಧಿಕಾರವನ್ನು ಪಡೆದಿದ್ದಾರೆ.

ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಶ್ವೇತಭವನದ ಹಿರಿಯ ಅಧಿಕಾರಿಗಳ ನೇಮಕವನ್ನು ಪ್ರಕಟಿಸಿದ್ದು, ಭಾರತೀಯ ಮೂಲದ ಅಮೆರಿಕದ ಪ್ರಜೆ, ಹಾಲಾಡಿ ಬಳಿಯ ಕಕ್ಕುಂಜೆ ಅಡಿಗರ ಕುಟುಂಬಕ್ಕೆ ಸೇರಿದ ಮಾಲಾ ಅಡಿಗ ಸೇರಿದ್ದಾರೆ.

ಮಾಲಾ ಅವರು ಅಮೆರಿಕದ ಪ್ರಥಮ ಮಹಿಳೆ ಜಿಲ್‌ ಬೈಡೆನ್‌ ಅವರ ನೀತಿ ನಿರೂಪಕಿಯಾಗಿ ನಿಯುಕ್ತಿಗೊಂಡಿ ದ್ದಾರೆ. ಮಾಲಾ ಹಿಂದೆ ಬೈಡೆನ್‌-ಹ್ಯಾರಿಸ್‌ ಅಧ್ಯಕ್ಷೀಯ ಚುನಾವಣ ಪ್ರಚಾರದಲ್ಲಿ ಸಲಹೆಗಾರರಾಗಿದ್ದರು.

ಚುನಾವಣ ಸಲಹೆಗಾರ್ತಿ
ಮಾಲಾ ಅಡಿಗ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸಲಹೆ ಗಾರರಾಗುವ ಮೊದಲು ಬೈಡೆನ್‌ ಪ್ರತಿ ಷ್ಠಾನದಲ್ಲಿ ಉನ್ನತ ಶಿಕ್ಷಣ ಮತ್ತು ಸೈನಿಕ ಕುಟುಂಬ ವಿಭಾಗದ ನಿರ್ದೇಶಕ ರಾಗಿದ್ದರು. ಒಬಾಮಾ – ಬೈಡೆನ್‌ ಆಡಳಿತದ ವೇಳೆ ಮಾಲಾ ಅವರು ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಇದಕ್ಕೂ ಮುನ್ನ ನ್ಯಾಯ ಇಲಾಖೆಯ ಸಹ ಅಟಾರ್ನಿ ಜನರಲ್‌ ಅವರಿಗೆ ಕೌನ್ಸೆಲ್‌ ಆಗಿದ್ದರು.

ಕಾನೂನು ತಜ್ಞೆ
ಮಾಲಾ ಅಡಿಗ ಅವರು ವಾಷಿಂಗ್ಟನ್‌ ನಿವಾಸಿಯಾಗಿದ್ದು, ಅಮೆರಿಕದ ಗ್ರಿನೆಲ್‌ ಕಾಲೇಜು, ಮಿನ್ನೆಸೊಟಾ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ ವಿ.ವಿ., ಶಿಕಾಗೋ ಲಾ ಸ್ಕೂಲ್‌ ವಿ.ವಿ.ಗಳಿಂದ ಪದವಿ ಗಳಿಸಿದ್ದರು. ತಂದೆ ಡಾ| ರಮೇಶ ಅಡಿಗರು ಮಾಲಾ ಜತೆಗಿದ್ದಾರೆ.

ಕಕ್ಕುಂಜೆ ಮೂಲ
ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷರಾ ಗಿದ್ದ ಕಕ್ಕುಂಜೆ ಮೂಲದ ಕೆ.ಎಸ್‌.ಎನ್‌. ಅಡಿಗ ಅವರ ತಂದೆ ಮತ್ತು ಮಾಲಾ ಅಡಿಗರ ಅಜ್ಜ ಚಂದ್ರಶೇಖರ ಅಡಿಗ ಅಣ್ಣತಮ್ಮಂದಿರ ಮಕ್ಕಳು. ಚಂದ್ರಶೇಖರ ಅಡಿಗರು ಕೃಷಿಕರಾಗಿ ದ್ದರು. ಇವರಿಗೆ ಲೀಲಾ ಅಡಿಗರ ತಂದೆ ಡಾ| ರಮೇಶ ಅಡಿಗರ ಸಹಿತ ಆರು ಮಂದಿ ಮಕ್ಕಳು. ಅಡಿಗರು ಕುಂದಾಪುರ ವಡೇರಹೋಬಳಿ ಬಳಿ ವಾಸವಿದ್ದರು.

ಡಾ| ರಮೇಶ ಅಡಿಗರ ಪಯಣ
ಡಾ| ರಮೇಶ ಅಡಿಗರು ಬೆಂಗಳೂರು ವೈದ್ಯಕೀಯ ಕಾಲೇಜಿ ನಲ್ಲಿ ಪದವಿ ಪಡೆದು 24ನೆಯ ವಯಸ್ಸಿನಲ್ಲಿ ಅಮೆರಿಕಕ್ಕೆ ಹೋದರು. ಬಳಿಕ ಅಲ್ಲಿ ಕಾರ್ಡಿಯೋಲಜಿಯಲ್ಲಿ ಉನ್ನತ ಶಿಕ್ಷಣ ಪಡೆದರು. ಸುಮಾರು 60 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಡಾ| ಅಡಿಗ ಮತ್ತು ಡಾ|ಜಯಲಕ್ಷ್ಮೀ ಅಡಿಗರ ಮೂವರು ಮಕ್ಕಳಲ್ಲಿ ಮಾಲಾ ಹಿರಿಯಾಕೆ.

ಊರಿನ ನಂಟು
ಮಾಲಾ ಅವರ ಪತಿ ಚಾರ್ಲ್ಸ್‌ ಬೀರೋ ವೃತ್ತಿಯಲ್ಲಿ ನ್ಯಾಯವಾದಿ. ಕಳೆದ ವರ್ಷ ನವೆಂಬರ್‌ನಲ್ಲಿ ಕುಟುಂಬ ಮಿಲನ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಡಾ| ರಮೇಶ ಅಡಿಗ, ಮಾಲಾ ಸಹಿತ ಮೂವರೂ ಮಕ್ಕಳು ಆಗಮಿಸಿದ್ದರು. ಮಾಲಾ ಅವರು ಮದುವೆ ಇತ್ಯಾದಿ ಕಾರ್ಯ ಕ್ರಮಗಳಿದ್ದಾಗ ಕುಂದಾಪುರ, ಕಕ್ಕುಂಜೆಗೆ ಬರುತ್ತಿದ್ದರು. ಸುಮಾರು ಏಳು ವರ್ಷಗಳ ಹಿಂದೆ ಕಕ್ಕುಂಜೆಗೆ ಬಂದು ಪೂಜೆಯಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ರಮೇಶ ಅಡಿಗರ ಸಹೋದರಿ ನಿರ್ಮಲಾ ಉಪಾಧ್ಯರ ಮಗಳು, ಕುಂದಾಪುರ ಕುಂದೇಶ್ವರ ಸಮೀಪದ ನಿವಾಸಿ ಸುಜಾತಾ ನಕ್ಕತ್ತಾಯ ಸ್ಮರಿಸಿಕೊಳ್ಳುತ್ತಾರೆ.

ಮಾಲಾ ಪರಿಶ್ರಮ ಜೀವಿ. ಅವರ ನೇಮಕದ ವಿಷಯ ಕೇಳಿ ಸಂತೋಷವಾಗಿ ಇನ್ನಷ್ಟು ದೊಡ್ಡ ಹುದ್ದೆ ಸಿಗಲಿ ಎಂದು ಹಾರೈಸಿ ಸಂದೇಶ ಕಳುಹಿಸಿದ್ದೇನೆ. ಅವಳಿಂದಲೂ ಸಂದೇಶ ಬಂದಿದೆ.
– ಸುಜಾತಾ ನಕ್ಕತ್ತಾಯ, ಕುಂದಾಪುರ

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udyavara: ತಪಾಸಣೆ ನಿರತ ಕಾರಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

Udupi; ಕಾರು ಢಿಕ್ಕಿ: ಸ್ಕೂಟರ್‌ ಸವಾರ ಆಸ್ಪತ್ರೆಗೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.