ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಬೇಡ : ಸವದಿ
Team Udayavani, Feb 16, 2021, 10:45 PM IST
ಬೆಂಗಳೂರು: ಶ್ರೀರಾಮ ಮಂದಿರವನ್ನು ನಿರ್ಮಿಸುವ ದೊಡ್ಡ ಪುಣ್ಯ ಕೆಲಸದಲ್ಲಿ ಇಡೀ ದೇಶದ ಎಲ್ಲ ಜನಾಂಗದವರು, ಎಲ್ಲಾ ಧರ್ಮದವರು ಅತ್ಯಂತ ಸ್ವಯಂಪ್ರೇರಣೆಯಿಂದ ತಮ್ಮ ತನು, ಮನ, ಧನವನ್ನು ಅರ್ಪಿಸಿ ಪುನೀತರಾಗುತ್ತಿದ್ದಾರೆ.
ಸಂಘಪರಿವಾರವಾಗಲಿ ಅಥವಾ ವಿಶ್ವ ಹಿಂದೂ ಪರಿಷತ್ ಆಗಲಿ ಎಲ್ಲಿಯೂ ರಾಮಮಂದಿರ ಹೆಸರಿನಲ್ಲಿ ಒತ್ತಾಯಪೂರ್ವಕವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಬದಲಿಗೆ ಕೋಟ್ಯಂತರ ಜನರೇ ಮುಂದೆ ಬಂದು ದೇಣಿಗೆ ಕೊಟ್ಟು ಕೃತಾರ್ಥರಾಗುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಆದರೆ ದುರಾದೃಷ್ಟವಶಾತ್ ಇದನ್ನು ವಿರೋಧಿಸುತ್ತಿರುವವರು ವಿನಾಕಾರಣ ಈ ಬಗ್ಗೆ ಅಪಸ್ವರ ಎತ್ತಿ ವಿವಾದ ಸೃಷ್ಟಿಸಲು ಹೊರಟಿರುವುದು ನಿಜಕ್ಕೂ ಖಂಡನಾರ್ಹ ಸಂಗತಿ. ಈ ರೀತಿಯ ಕಲ್ಮಶ ಪೂರಿತ ಹೇಳಿಕೆ ನೀಡುತ್ತಿದ್ದರೆ ಸಾರ್ವಜನಿಕರು ಸಹಿಸುವುದಿಲ್ಲ ಎಂಬುದನ್ನು ಇವರು ಗಮನಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯ 17 ಕೋಟಿ ರೂ. ಆಸ್ತಿ ಜಪ್ತಿ