ಮುಳ್ಳುಹಂದಿ ತಿಂದು ಚಿರತೆ ಸಾವು: 20 ದಿನದ ನಂತರ ಬೆಳಕಿಗೆ
Team Udayavani, Jan 5, 2022, 5:20 PM IST
ಗುಂಡ್ಲುಪೇಟೆ: ಮುಳ್ಳುಹಂದಿ ತಿಂದು 6-8 ತಿಂಗಳ ಚಿರತೆಯೊಂದು ಕಳೆದ 20 ದಿನಗಳ ಹಿಂದೆ ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯದ ಬೋಗಯ್ಯನಹುಂಡಿ ಗ್ರಾಮದ ರೈತರ ಜಮೀನೊಂದರಲ್ಲಿ ನಡೆದಿದೆ. ಇದು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ತಡವಾಗಿ ಬುಧವಾರ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ ಉಪ ವಿಭಾಗದ ಬಫರ್ ಜೋನ್ ವಲಯದ ಬೆಟ್ಟದಮಾದಹಳ್ಳಿ ಎಲ್ಲೆಯ ಬೋಗಯ್ಯನಹುಂಡಿ ಗ್ರಾಮದ ಗುರುಸ್ವಾಮಪ್ಪ ಬಿನ್ ನಾಗಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ.ವಾಸೀಂಮಿರ್ಜಾ, ವನ್ಯಜೀವಿ ಪರಿಪಾಲಕ ಎಂ.ಕೆ.ನಂಜುಂಡೇರಾಜೆ ಅರಸ್, ಆರ್.ರಘುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ಚಿರತೆಯ ಎಲ್ಲಾ ಉಗುರು, ಹಲ್ಲುಗಳು ಹಾಗೂ ಇತರೆ ಅಂಗಾಗಳು ಸುರಕ್ಷಿತವಾಗಿದೆ. ಚಿರತೆ ಮೃತಪಟ್ಟ ಸ್ಥಳದ ಪಕ್ಕದಲ್ಲಿ ಮುಳ್ಳಂದಿಯ ಮುಳ್ಳುಗಳು ಹಾಗೂ ಇತರೆ ಭಾಗಗಳು ಬಿದ್ದಿದೆ. ಮರಣೋತ್ತರ ಪರೀಕ್ಷೆಯನ್ನು ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ನಡೆಸಿದ್ದು, ಹೊಟ್ಟೆ ಭಾಗ ತೆರೆದು ನೋಡಿದಾಗ ಮುಳ್ಳಂದಿಯ ಮುಳ್ಳುಗಳು ಹಾಗೂ ಬಾಯಿಯ ಭಾಗಗಳು ಇರುವುದು ಧೃಡಪಡಿಸಿದರು.
ನಂತರ ಮೃತ ಚಿರತೆಯ ಕಳೆಬರವನ್ನು ಅರಣ್ಯ ಅಧಿಕಾರಿಗಳು ಹಾಗು ಸ್ಥಳೀಯರ ಸಮ್ಮುಖದಲ್ಲಿ ಸುಡಲಾಯಿತು ಎಂದು ಎಸಿಎಫ್ ಪರಮೇಶ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ