ಹಿಂದೆ ಹೇಗಿತ್ತೋ ಹಾಗೆ ಡ್ರೆಸ್ ಕೋಡ್ ಮುಂದುವರೆಯಲಿ: ಆರ್. ಧ್ರುವನಾರಾಯಣ
Team Udayavani, Feb 19, 2022, 2:16 PM IST
ಚಿಕ್ಕಮಗಳೂರು: ಸರ್ಕಾರದ ಲೋಪ ದೋಷಗಳನ್ನ ಮುಚ್ಚಿಹಾಕಲು ಹಿಜಬ್ ವಿವಾದ ಸೃಷ್ಟಿ ಮಾಡಲಾಗಿದೆ, ಭಾವನಾತ್ಮಕ ವಿಷಯಗಳನ್ನ ಚೆಲ್ಲುತ್ತಿರುವುದೇ ಬಿಜೆಪಿ ಮುಖಂಡರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಶನಿವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್,ಬಿಜೆಪಿ ಸರ್ಕಾರದ ಲೋಪದೋಷಗಳನ್ನ ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ.ಜೆಡಿಎಸ್ ಜಾತ್ಯಾತೀತ ಪಕ್ಷ ಅಂತ ಅವರಿಗೆ ಬೆಂಬಲ ಕೊಟ್ಟಿದ್ದೆವು.ಕುಮಾರಸ್ವಾಮಿಯವರು ತಮ್ಮ ಅವಕಾಶವಾದಿ ತನವನ್ನ ಪ್ರದರ್ಶಿಸಿದರು ಐದು ವರ್ಷ ಅವರೇ ಸಿಎಂ ಆಗಬಹುದಿತ್ತು, ಕೊಟ್ಟ ಅವಕಾಶವನ್ನ ಉಪಯೋಗಿಸಿಕೊಳ್ಳಲಿಲ್ಲ. ಶಾಸಕರ ವಿಶ್ವಾಸ ಗಳಿಸದೆ, ಸರಿಯಾಗ ಆಡಳಿತ ಮಾಡದೆ ಅಧಿಕಾರ ಕಳೆದುಕೊಂಡರು. ಈಗ ಎಲ್ಲಾ ಕಳೆದುಕೊಂಡು ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ, ಅದನ್ನು ನೋಡಿ ಭಾವನಾತ್ಮಕ ವಿಚಾರ ಹುಟ್ಟುಹಾಕಿದ್ದಾರೆ. ಹಿಜಬ್ ಬಳಕೆ ಹಿಂದೆ ಹೇಗಿತ್ತೋ ಹಾಗೇ ಮುಂದುವರೆಯಲಿ ಅನ್ನೋದು ನಮ್ಮ ನಿಲುವು ಎಂದರು.