ಮೃತ್ಯುಂಜಯನ ನೆನೆದು ದೀಪ ಹಚ್ಚೋಣ


Team Udayavani, Apr 5, 2020, 6:15 AM IST

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

“ಕತ್ತಲೆಯ ನಡುವೆ ನರಕಾಸುರ ಸಂಹಾರ ನಡೆದು ಬೆಳಕು ಹರಿಯಿತು. ಕೊರೊನಾಸುರ  ನಿರ್ಮೂಲನೆಯೂ ಹಾಗೆಯೇ ಆಗಬಾರದೇಕೆ?’

ನಾವು ಪ್ರತಿದಿನ ಒಮ್ಮೆಯಾದರೂ ದೀಪ ಹಚ್ಚುತ್ತೇವೆ. ಕತ್ತಲೆಯಿಂದ ಬೆಳಕಿನಡೆಗೆ ನೋಡು ವುದು, ಮಿಡಿಯುವುದು ನಮ್ಮ ಸಂಸ್ಕೃತಿಯ ಹುಟ್ಟುಗುಣ. ತಮಸೋಮಾ ಜ್ಯೋತಿ ರ್ಗಮಯ, ಮೃತ್ಯೋರ್ಮಾ ಅಮೃತಮ್‌ ಗಮಯ ಎಂದು ಪಠಿಸಿದ್ದು ಇದಕ್ಕೇ ಅಲ್ಲವೇ?

ಮನದ ದುಗುಡವನ್ನು ದೂರ ಮಾಡುವುದು ದೀಪದ ಬಹುದೊಡ್ಡ ಸಂಜೀವಿನಿ ಗುಣ. ಎಲ್ಲರೂ ಏಕಕಾಲಕ್ಕೆ ಎಣ್ಣೆ ಯಾ ತುಪ್ಪದ ದೀಪ ಹಚ್ಚುವುದರಿಂದ ಈಗ ಕವಿದಿ ರುವ ಅಂಧ
ಕಾರದಂಥ ಸಂಕಟ ಕರಗಿ ಮನೋ ಸಾಮರ್ಥ್ಯ ಹೆಚ್ಚುತ್ತದೆ. ಋಣಾತ್ಮಕ ಆಲೋಚನೆ ಗಳು ದೂರವಾಗುತ್ತವೆ.

ಜ್ಯೋತಿಷ ಶಾಸ್ತ್ರದ ಪ್ರಕಾರ, ನಾಳೆ ಪ್ರದೋಷ ಸಮಯ. ಪ್ರದೋಷವು ಈಶ್ವರನ ಆರಾಧನೆಗೆ ಬಹಳ ಪ್ರಶಸ್ತ. ಈಶ್ವರ ಸಮಗ್ರ ಜಗತ್ತಿಗೆ ವೈದ್ಯನಿದ್ದಂತೆ. ಮೃತ್ಯುಂಜಯ ಅವನು. ಎಲ್ಲ ರೀತಿಯ ಋಣಾತ್ಮಕ ಶಕ್ತಿಗಳನ್ನು ನಾಶ ಮಾಡುವುದಕ್ಕೆ ಈಶ್ವರನು ಸಮರ್ಥ ಎಂದೂ ವಿಶ್ಲೇಷಿಸಬಹುದು. ದೀಪ ಹಚ್ಚಿ ಎಲ್ಲರೂ ಏಕಾಗ್ರ ಚಿತ್ತದಿಂದ, ಏಕಕಂಠದಿಂದ ಪ್ರಾರ್ಥಿಸಿದರೆ, ಅಲ್ಲೊಂದು ಸಂಘಶಕ್ತಿ ಪ್ರಕಟಗೊಳ್ಳುತ್ತದೆ.

ದೀಪವಿಲ್ಲದೆ ನಮ್ಮ ಯಾವುದೇ ಧಾರ್ಮಿಕ ಕಾರ್ಯಕ್ರಮಗಳೂ ಆರಂಭಗೊಳ್ಳುವುದಿಲ್ಲ. ಮದುವೆ- ಮುಂಜಿ, ಯಜ್ಞ- ಯಾಗ, ನಾಮಕರಣ- ಶ್ರಾದ್ಧಗಳು ದೀಪಗಳಿಲ್ಲದೆ ನಡೆ ಯುವುದಿಲ್ಲ. ಪ್ರಥಮ ಪೂಜಿತ ಗಣಪತಿಯನ್ನು ಅರ್ಚಿಸುವ ಮೊದಲು ಕೂಡ ನಾವು ದೀಪ ಹಚ್ಚುತ್ತೇವೆ.
ದೀಪಾವಳಿ ಪ್ರಾಮುಖ್ಯ ಪಡೆ ಯುವುದು ಹಣತೆಗಳಿಂದ. ನರಕಾಸುರನ ವಧೆ ನಡೆದದ್ದು ಕತ್ತಲೆಯ ಸಮಯದಲ್ಲಿ. ಆ ವಿಜಯದ ಸಂಕೇತವಾಗಿ ನಾವು ಭೂದೇವಿಯನ್ನು ಬೆಳಗುವುದು ದೀಪಗಳಿಂದ.

ಈಗಲೂ ದೀಪಾವಳಿಯಲ್ಲಿ ದೀಪ ಹಚ್ಚಿ, ದುಷ್ಟ ಶಕ್ತಿಗಳು ಬಳಿ ಬಾರದೆ ಇರಲಿ ಎಂದು ಪ್ರಾರ್ಥಿಸುತ್ತೇವೆ. ಈಗ ಕೊರೊನಾಸುರನನ್ನೂ ಕತ್ತಲೆ ವೇಳೆಯೇ ನಿವಾರಿಸಬೇಕಿದೆ.
ಹಿಂದೆ ರಾಜರು ಕೋಟೆಗಳ ಸುತ್ತಮುತ್ತಲೂ ಸಾಮೂಹಿಕ ದೀಪ ಹಚ್ಚುವ ವ್ಯವಸ್ಥೆ ಮಾಡಿಕೊಂಡಿದ್ದರು. ಏಕಕಾಲಕ್ಕೆ 108, 1008, 10008, ಲಕ್ಷ ದೀಪಗಳನ್ನು ಹಚ್ಚುವ ಕ್ರಮವಿತ್ತು. ಈಗಿರುವ ಲಕ್ಷ ದೀಪೋತ್ಸವದ ಕಲ್ಪನೆ ನಾವು ಪೂರ್ವಜರಿಂದಲೇ ಎರವಲು ಪಡೆದದ್ದು.
ಸಾಮೂಹಿಕ ದೀಪ ಹಚ್ಚುವುದರಿಂದ ನಾನು ಒಂಟಿಯಲ್ಲ ಅಂತ ಅನ್ನಿಸುತ್ತದೆ. ಮನಸ್ಸು ಸವಾಲನ್ನು ಎದುರಿಸುವ ಸಾಮರ್ಥ್ಯ ಪಡೆಯು ತ್ತದೆ. ಇದಕ್ಕಾಗಿ ನಾವು ದೀಪಗಳನ್ನು ಬೆಳಗಬೇಕು.

-ದೈವಜ್ಞ ಸೋಮಯಾಜಿ

ಜ್ಯೋತಿಷ ತಜ್ಞರು

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.