ನಮ್ಮ ಕನಸುಗಳಿಗೆ ಬಣ್ಣ ತುಂಬೋಣ


Team Udayavani, Mar 11, 2021, 6:30 AM IST

colour

ಮುಂದೆ ಗುರಿ, ಹಿಂದೆ ಗುರು, ಸಾಗುತ್ತಿದೆ ರಣಧೀರರ ಸಾಲು
– ರಾಷ್ಟ್ರಕವಿ ಕುವೆಂಪು ಅವರ ಈ ಸಾಲುಗಳು ಜೀವನದಲ್ಲಿ ಗುರಿ ಹಾಗೂ ಮಾರ್ಗದರ್ಶಿಯ ಮಹತ್ವವನ್ನು ಸಾರು ತ್ತದೆ. ಜೀವನದಲ್ಲಿ ನಾವು ಏನಾದರೂ ಉತ್ತಮ ಸಾಧನೆ ಮಾಡಬೇಕಾದರೆ ಕನಸುಗಳನ್ನು ಕಾಣಬೇಕು. ನಾವು ಮುಂದೇನಾಗ
ಬೇಕು, ಮುಂದೆ ಏನು ಮಾಡಬೇಕು, ನಾವು ಯಾವ ದಾರಿಯಲ್ಲಿ ನಡೆಯಬೇಕು, ಏನೇನು ತಯಾರಿ ಮಾಡಿಕೊಳ್ಳಬೇಕು, ಹೀಗೆ ಸಾಗಬೇಕು ನಮ್ಮ ಕನಸುಗಳು.

“ನಾವು ಕಂಡ ಕನಸಿನ ಬೆನ್ನೇರಿ ಸತತ ಪರಿಶ್ರಮದಿಂದ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಬಲು ಎತ್ತರಕ್ಕೆ ಬೆಳೆಯಬೇಕು’ ಎಂದು ಸದಾ ನುಡಿಯುತ್ತಿದ್ದ ಮಾಜಿ ರಾಷ್ಟ್ರಪತಿ ಡಾ|ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಮಾತುಗಳು ಬಹಳ ಪ್ರಸ್ತುತ.
ನಾವು ಕನಸು ಕಾಣಬೇಕು, ಆದರೆ ರಾತ್ರಿ ಕಂಡು ಬೆಳಗ್ಗೆ ಮರೆಯುವು ದಕ್ಕಲ್ಲ. ನಾವು ಕಾಣುವ ಕನಸುಗಳು ಆಲೋಚನೆಗೆ ಗ್ರಾಸವನ್ನು ಒದಗಿಸಬೇಕು.

ನಮ್ಮ ಆಲೋಚನೆಗಳು ಯೋಚನೆ ಹಾಗೂ ಯೋಜನೆಗಳಿಗೆ ಮತ್ತು ಮುಂದಕ್ಕೆ ಪ್ರಗತಿಪರ ಕ್ರಿಯೆಗಳಿಗೆ ನಾಂದಿಯಾಗಬೇಕು. ಕನಸುಗಳು ಬದುಕಿನ ಸಾಧನೆಗಳಿಗೆ ಮಾರ್ಗದರ್ಶಿಯಾಗಬೇಕು. ಕನಸುಗಳನ್ನು ನನಸು ಮಾಡುವುದು ನಮ್ಮ ಗುರಿಯಾಗಬೇಕು.

ಕನಸು-ಗುರಿ ಒಂದೇ ನಾಣ್ಯದ ಎರಡು ಮುಖಗಳು. ಮಹಾಭಾರತದಲ್ಲಿ ಗುರು ದ್ರೋಣಾಚಾರ್ಯರು ಶಿಷ್ಯರಿಗೆ ಬಿಲ್ವಿದ್ಯೆಯನ್ನು ಧಾರೆಯೆರೆದು ಪರೀಕ್ಷೆ ಮಾಡಲು ಮುಂದಾಗುತ್ತಾರೆ. ಮರದ ಮೇಲೆ ಗಿಳಿಯ ಗೊಂಬೆಯನ್ನಿಟ್ಟು, ಅದರ ಕಣ್ಣಿಗೆ ಬಾಣ ಹೂಡಲು ಹೇಳುತ್ತಾರೆ. ನಿಮಗೇನು ಕಾಣುತ್ತದೆ ಎಂಬ ದ್ರೋಣಾಚಾರ್ಯರ ಪ್ರಶ್ನೆಗೆ ಭೀಮನ ಉತ್ತರ ಮರ, ಇನ್ನೊಬ್ಬನ ಉತ್ತರ ಗಿಳಿ ಎಂದು, ಆದರೆ ಅರ್ಜುನನ ಉತ್ತರ ಗಿಳಿಯ ಕಣ್ಣು, ಆದುದರಿಂದ ಸ್ಪಷ್ಟವಾದ ಗುರಿಯಿದ್ದ ಅರ್ಜುನ ಶ್ರೇಷ್ಠ ಬಿಲ್ಗಾರನಾಗುತ್ತಾನೆ.

“ಗುರಿಯನ್ನು ಈಡೇರಿಸಿಕೊಳ್ಳಲು ನಿರಂತರ ಪ್ರಯತ್ನಶೀಲರಾಗಿ. ನಿಮ್ಮ ಯಶಸ್ಸಿನ ಮೂಲಕ ಎಲ್ಲ ತೊಂದರೆಗಳು ಮಾಯವಾಗಲಿದೆ’ ಎನ್ನುತ್ತಾರೆ ಪ್ರಾಜ್ಞರು. ನಮಗೆಲ್ಲರಿಗೂ ಸಮಾನ ಪ್ರತಿಭೆ ಇಲ್ಲದಿರಬಹುದು, ಆದರೆ ಸಮಾನ ಅವಕಾಶ ಇದ್ದೇ ಇದೆ. ನಮ್ಮ ಜೀವನದಲ್ಲಿ ಗುರಿ ಮತ್ತು ಕನಸು ಎರಡೂ ಇವೆಯೇ?, ಹಾಗಾದರೆ ಸಂಪೂರ್ಣ ಜ್ಞಾನವನ್ನು ಸಂಪಾದಿಸಿಕೊಳ್ಳುತ್ತಾ ಮುನ್ನಡೆಯಿರಿ. ನಾವು ಎತ್ತರ ಬೆಳೆಯಲು ನಮ್ಮೊಳಗಿನ ಮನೋಧರ್ಮ ಹಾಗೂ ನಾವು ಹೇಗೆ ನಮಗೆದುರಾದ ಸಮಸ್ಯೆಗಳಲ್ಲಿ ಅವಕಾಶ ವನ್ನು ಕಂಡುಕೊಳ್ಳುತ್ತೇವೆ ಎನ್ನುವುದರಲ್ಲಿ ಅಡಗಿದೆ. ಕನಸು, ಪ್ರಯತ್ನ, ಸಾಧನೆ ಇವು ಮೂರೂ ನಮ್ಮ ಜೀವನದ ಭಾಗವಾಗಬೇಕು. ಇವು ಮೂರನ್ನು ನಾವು ನಿರ್ಲಕ್ಷಿಸುವಂತಿಲ್ಲ. ಕನಸು ಕಂಡಾಗ ಅದನ್ನು ನನಸಾಗಿರುವ ಛಲ ನಮ್ಮಲ್ಲಿ ಮೂಡುತ್ತದೆ. ಇದಕ್ಕೆ ನಿರಂತರ ಪ್ರಯತ್ನ ಅತ್ಯವಶ್ಯ. ಇದರಿಂದ ಸಾಧನೆ ಅಥವಾ ಯಶಸ್ಸು ಸಾಧ್ಯ.

ನಮ್ಮ ಸಂಸ್ಕೃತಿಯಲ್ಲಿ ಮಕ್ಕಳ ಮಾರ್ಗ ದರ್ಶಿಯಾಗಿ ಹೆತ್ತವರು ಹಾಗೂ ಶಿಕ್ಷಕರ ಮಹತ್ತರವಾದ ಪಾತ್ರ ಇದ್ದೇ ಇದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ ಎಂದರೆ ಮಾನವನಲ್ಲಿ ಸಹಜವಾಗಿ ಹುದುಗಿರುವ ಪರಿಪೂರ್ಣತೆಯನ್ನು ಪ್ರಕಾಶಿಸುವಂತೆ ಮಾಡುವ ಮಾಧ್ಯಮ.

ಒಂದರ್ಥದಲ್ಲಿ ಎಲ್ಲರೂ ಶಿಕ್ಷಕರೇ, ಕನಸುಗಳಿಗೆ ಬಣ್ಣ ತುಂಬಿ, ಕನಸುಗಳು ಸಾಕಾರವಾಗಲು ಬೇಕಾದ ಅಗತ್ಯ ವಾತಾವರಣ ಹೊಂದಿಸಿಕೊಂಡು, ಯೋಜನೆ, ಸಾಧನೆಗಳಿಗೆ ಮಾರ್ಗದರ್ಶಿ ಯಾಗುವುದು. ಕನಸುಗಳು, ಗುರಿ ಹಾಗೂ ಪ್ರಯತ್ನಗಳ ಮೂಲಕ ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗೋಣ.

- ಡಾ| ಎ. ಜಯಕುಮಾರ ಶೆಟ್ಟಿ , ಉಜಿರೆ

ಟಾಪ್ ನ್ಯೂಸ್

ಬ್ರಿಡ್ಜ್‌ ಗೆ ಢಿಕ್ಕಿ ಹೊಡೆದು ಬಸ್‌ ಪಲ್ಟಿ: 20 ಉಮ್ರಾ ಯಾತ್ರಾರ್ಥಿಗಳು ಮೃತ್ಯು

ಬ್ರಿಡ್ಜ್‌ ಗೆ ಢಿಕ್ಕಿ ಹೊಡೆದು ಬಸ್‌ ಪಲ್ಟಿ: 20 ಉಮ್ರಾ ಯಾತ್ರಾರ್ಥಿಗಳು ಮೃತ್ಯು

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

ಬಿಸಿಲಾಘಾತದಿಂದ ಸಾವು: 115 ಕೋ.ರೂ. ಪರಿಹಾರ !

ಬಿಸಿಲಾಘಾತದಿಂದ ಸಾವು: 115 ಕೋ.ರೂ. ಪರಿಹಾರ !



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಜ್ರ ಮಾರುಕಟ್ಟೆಗೆ ಭಾರತ ದೊಡ್ಡಣ್ಣ! ಕೃತಕ ವಜ್ರ ಉತ್ಪಾದನೆಯಲ್ಲಿ ದಾಪುಗಾಲು

ವಜ್ರ ಮಾರುಕಟ್ಟೆಗೆ ಭಾರತ ದೊಡ್ಡಣ್ಣ! ಕೃತಕ ವಜ್ರ ಉತ್ಪಾದನೆಯಲ್ಲಿ ದಾಪುಗಾಲು

ಬಿಟ್ಟ ಬಾಣ ಹಿಂದಕ್ಕೆ ಸರಿಯದೆ ?

ಬಿಟ್ಟ ಬಾಣ ಹಿಂದಕ್ಕೆ ಸರಿಯದೆ ?

ಹೆಸರು ಹೇಳಿದ್ರೆ ಜನ ಭಯಪಡುತ್ತಿದ್ದ ಈ ರೈಲ್ವೆ ನಿಲ್ದಾಣ 42 ವರ್ಷಗಳ ಕಾಲ ಮುಚ್ಚಲು ಕಾರಣವೇನು?

ಹೆಸರು ಹೇಳಿದ್ರೆ ಜನ ಭಯಪಡುತ್ತಿದ್ದ ಈ ರೈಲ್ವೆ ನಿಲ್ದಾಣ 42 ವರ್ಷಗಳ ಕಾಲ ಮುಚ್ಚಲು ಕಾರಣವೇನು?

tdy-17

ಸಣ್ಣಕಥೆಗಳು: ರೂಪ-ವಿರೂಪ

ಇಂಗ್ಲೆಂಡ್ ನಲ್ಲಿ ಬಾದಾಮಿಯ ಗವಿಗಳ ನೆನಪು; ಕಾಲಗರ್ಭದಲ್ಲಿ ಅಡಗಿದ ಮರಳಿನ ಮಹಲ್

ಇಂಗ್ಲೆಂಡ್ ನಲ್ಲಿ ಬಾದಾಮಿಯ ಗವಿಗಳ ನೆನಪು; ಕಾಲಗರ್ಭದಲ್ಲಿ ಅಡಗಿದ ಮರಳಿನ ಮಹಲ್

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಬ್ರಿಡ್ಜ್‌ ಗೆ ಢಿಕ್ಕಿ ಹೊಡೆದು ಬಸ್‌ ಪಲ್ಟಿ: 20 ಉಮ್ರಾ ಯಾತ್ರಾರ್ಥಿಗಳು ಮೃತ್ಯು

ಬ್ರಿಡ್ಜ್‌ ಗೆ ಢಿಕ್ಕಿ ಹೊಡೆದು ಬಸ್‌ ಪಲ್ಟಿ: 20 ಉಮ್ರಾ ಯಾತ್ರಾರ್ಥಿಗಳು ಮೃತ್ಯು

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ಜಿಮೇಲ್‌ನಿಂದ ಮಾಹಿತಿ ಕದಿಯುತ್ತಾ ಬಾರ್ಡ್‌?

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ವರ್ಷದ ಬಳಿಕ ಚೀನಕ್ಕೆ ಮರಳಿ ಖ್ಯಾತ ಉದ್ಯಮಿ ಜ್ಯಾಕ್‌ ಮಾ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಅವಕಾಶ ನೀಡಿದ್ದಾರೆ, ಉತ್ತಮ ಕೆಲಸ ಮಾಡುವೆ: ಅಣ್ಣಾಮಲೈ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

ಭಾರತೀಯ ಸೇನಾಪಡೆಯಲ್ಲಿ 1.55 ಲಕ್ಷ ಹುದ್ದೆ ಖಾಲಿ: ಕೇಂದ್ರ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.