ನಮ್ಮ ಕನಸುಗಳಿಗೆ ಬಣ್ಣ ತುಂಬೋಣ


Team Udayavani, Mar 11, 2021, 6:30 AM IST

colour

ಮುಂದೆ ಗುರಿ, ಹಿಂದೆ ಗುರು, ಸಾಗುತ್ತಿದೆ ರಣಧೀರರ ಸಾಲು
– ರಾಷ್ಟ್ರಕವಿ ಕುವೆಂಪು ಅವರ ಈ ಸಾಲುಗಳು ಜೀವನದಲ್ಲಿ ಗುರಿ ಹಾಗೂ ಮಾರ್ಗದರ್ಶಿಯ ಮಹತ್ವವನ್ನು ಸಾರು ತ್ತದೆ. ಜೀವನದಲ್ಲಿ ನಾವು ಏನಾದರೂ ಉತ್ತಮ ಸಾಧನೆ ಮಾಡಬೇಕಾದರೆ ಕನಸುಗಳನ್ನು ಕಾಣಬೇಕು. ನಾವು ಮುಂದೇನಾಗ
ಬೇಕು, ಮುಂದೆ ಏನು ಮಾಡಬೇಕು, ನಾವು ಯಾವ ದಾರಿಯಲ್ಲಿ ನಡೆಯಬೇಕು, ಏನೇನು ತಯಾರಿ ಮಾಡಿಕೊಳ್ಳಬೇಕು, ಹೀಗೆ ಸಾಗಬೇಕು ನಮ್ಮ ಕನಸುಗಳು.

“ನಾವು ಕಂಡ ಕನಸಿನ ಬೆನ್ನೇರಿ ಸತತ ಪರಿಶ್ರಮದಿಂದ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಬಲು ಎತ್ತರಕ್ಕೆ ಬೆಳೆಯಬೇಕು’ ಎಂದು ಸದಾ ನುಡಿಯುತ್ತಿದ್ದ ಮಾಜಿ ರಾಷ್ಟ್ರಪತಿ ಡಾ|ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಮಾತುಗಳು ಬಹಳ ಪ್ರಸ್ತುತ.
ನಾವು ಕನಸು ಕಾಣಬೇಕು, ಆದರೆ ರಾತ್ರಿ ಕಂಡು ಬೆಳಗ್ಗೆ ಮರೆಯುವು ದಕ್ಕಲ್ಲ. ನಾವು ಕಾಣುವ ಕನಸುಗಳು ಆಲೋಚನೆಗೆ ಗ್ರಾಸವನ್ನು ಒದಗಿಸಬೇಕು.

ನಮ್ಮ ಆಲೋಚನೆಗಳು ಯೋಚನೆ ಹಾಗೂ ಯೋಜನೆಗಳಿಗೆ ಮತ್ತು ಮುಂದಕ್ಕೆ ಪ್ರಗತಿಪರ ಕ್ರಿಯೆಗಳಿಗೆ ನಾಂದಿಯಾಗಬೇಕು. ಕನಸುಗಳು ಬದುಕಿನ ಸಾಧನೆಗಳಿಗೆ ಮಾರ್ಗದರ್ಶಿಯಾಗಬೇಕು. ಕನಸುಗಳನ್ನು ನನಸು ಮಾಡುವುದು ನಮ್ಮ ಗುರಿಯಾಗಬೇಕು.

ಕನಸು-ಗುರಿ ಒಂದೇ ನಾಣ್ಯದ ಎರಡು ಮುಖಗಳು. ಮಹಾಭಾರತದಲ್ಲಿ ಗುರು ದ್ರೋಣಾಚಾರ್ಯರು ಶಿಷ್ಯರಿಗೆ ಬಿಲ್ವಿದ್ಯೆಯನ್ನು ಧಾರೆಯೆರೆದು ಪರೀಕ್ಷೆ ಮಾಡಲು ಮುಂದಾಗುತ್ತಾರೆ. ಮರದ ಮೇಲೆ ಗಿಳಿಯ ಗೊಂಬೆಯನ್ನಿಟ್ಟು, ಅದರ ಕಣ್ಣಿಗೆ ಬಾಣ ಹೂಡಲು ಹೇಳುತ್ತಾರೆ. ನಿಮಗೇನು ಕಾಣುತ್ತದೆ ಎಂಬ ದ್ರೋಣಾಚಾರ್ಯರ ಪ್ರಶ್ನೆಗೆ ಭೀಮನ ಉತ್ತರ ಮರ, ಇನ್ನೊಬ್ಬನ ಉತ್ತರ ಗಿಳಿ ಎಂದು, ಆದರೆ ಅರ್ಜುನನ ಉತ್ತರ ಗಿಳಿಯ ಕಣ್ಣು, ಆದುದರಿಂದ ಸ್ಪಷ್ಟವಾದ ಗುರಿಯಿದ್ದ ಅರ್ಜುನ ಶ್ರೇಷ್ಠ ಬಿಲ್ಗಾರನಾಗುತ್ತಾನೆ.

“ಗುರಿಯನ್ನು ಈಡೇರಿಸಿಕೊಳ್ಳಲು ನಿರಂತರ ಪ್ರಯತ್ನಶೀಲರಾಗಿ. ನಿಮ್ಮ ಯಶಸ್ಸಿನ ಮೂಲಕ ಎಲ್ಲ ತೊಂದರೆಗಳು ಮಾಯವಾಗಲಿದೆ’ ಎನ್ನುತ್ತಾರೆ ಪ್ರಾಜ್ಞರು. ನಮಗೆಲ್ಲರಿಗೂ ಸಮಾನ ಪ್ರತಿಭೆ ಇಲ್ಲದಿರಬಹುದು, ಆದರೆ ಸಮಾನ ಅವಕಾಶ ಇದ್ದೇ ಇದೆ. ನಮ್ಮ ಜೀವನದಲ್ಲಿ ಗುರಿ ಮತ್ತು ಕನಸು ಎರಡೂ ಇವೆಯೇ?, ಹಾಗಾದರೆ ಸಂಪೂರ್ಣ ಜ್ಞಾನವನ್ನು ಸಂಪಾದಿಸಿಕೊಳ್ಳುತ್ತಾ ಮುನ್ನಡೆಯಿರಿ. ನಾವು ಎತ್ತರ ಬೆಳೆಯಲು ನಮ್ಮೊಳಗಿನ ಮನೋಧರ್ಮ ಹಾಗೂ ನಾವು ಹೇಗೆ ನಮಗೆದುರಾದ ಸಮಸ್ಯೆಗಳಲ್ಲಿ ಅವಕಾಶ ವನ್ನು ಕಂಡುಕೊಳ್ಳುತ್ತೇವೆ ಎನ್ನುವುದರಲ್ಲಿ ಅಡಗಿದೆ. ಕನಸು, ಪ್ರಯತ್ನ, ಸಾಧನೆ ಇವು ಮೂರೂ ನಮ್ಮ ಜೀವನದ ಭಾಗವಾಗಬೇಕು. ಇವು ಮೂರನ್ನು ನಾವು ನಿರ್ಲಕ್ಷಿಸುವಂತಿಲ್ಲ. ಕನಸು ಕಂಡಾಗ ಅದನ್ನು ನನಸಾಗಿರುವ ಛಲ ನಮ್ಮಲ್ಲಿ ಮೂಡುತ್ತದೆ. ಇದಕ್ಕೆ ನಿರಂತರ ಪ್ರಯತ್ನ ಅತ್ಯವಶ್ಯ. ಇದರಿಂದ ಸಾಧನೆ ಅಥವಾ ಯಶಸ್ಸು ಸಾಧ್ಯ.

ನಮ್ಮ ಸಂಸ್ಕೃತಿಯಲ್ಲಿ ಮಕ್ಕಳ ಮಾರ್ಗ ದರ್ಶಿಯಾಗಿ ಹೆತ್ತವರು ಹಾಗೂ ಶಿಕ್ಷಕರ ಮಹತ್ತರವಾದ ಪಾತ್ರ ಇದ್ದೇ ಇದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ ಎಂದರೆ ಮಾನವನಲ್ಲಿ ಸಹಜವಾಗಿ ಹುದುಗಿರುವ ಪರಿಪೂರ್ಣತೆಯನ್ನು ಪ್ರಕಾಶಿಸುವಂತೆ ಮಾಡುವ ಮಾಧ್ಯಮ.

ಒಂದರ್ಥದಲ್ಲಿ ಎಲ್ಲರೂ ಶಿಕ್ಷಕರೇ, ಕನಸುಗಳಿಗೆ ಬಣ್ಣ ತುಂಬಿ, ಕನಸುಗಳು ಸಾಕಾರವಾಗಲು ಬೇಕಾದ ಅಗತ್ಯ ವಾತಾವರಣ ಹೊಂದಿಸಿಕೊಂಡು, ಯೋಜನೆ, ಸಾಧನೆಗಳಿಗೆ ಮಾರ್ಗದರ್ಶಿ ಯಾಗುವುದು. ಕನಸುಗಳು, ಗುರಿ ಹಾಗೂ ಪ್ರಯತ್ನಗಳ ಮೂಲಕ ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗೋಣ.

- ಡಾ| ಎ. ಜಯಕುಮಾರ ಶೆಟ್ಟಿ , ಉಜಿರೆ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.