ಲಾಕ್ಡೌನ್ ಮದ್ದಲ್ಲ : ಪರೀಕ್ಷೆ, ಲಸಿಕೆ ಹೆಚ್ಚಿಸಿ: ತಜ್ಞರು, ವೈದ್ಯರ ಸಲಹೆ
Team Udayavani, Apr 13, 2021, 7:30 AM IST
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಮದ್ದು ಅಲ್ಲ…
ಇದು ಉದ್ಯಮಿಗಳು, ವೈದ್ಯರ ಅಭಿಮತ. ಕೊರೊನಾ ಹೆಚ್ಚುತ್ತಿದ್ದು, ಲಾಕ್ಡೌನ್ ಸದ್ದು ಕೇಳುತ್ತಿದೆ. ಆದರೆ ಉದ್ಯಮಿಗಳು, ವೈದ್ಯರು ಲಾಕ್ ಪರಿಹಾರವಲ್ಲ ಎಂದಿದ್ದಾರೆ.
ಪರೀಕ್ಷೆ ಹೆಚ್ಚಳವೇ ಮದ್ದು
ಈ ಹಿಂದೆ ಸರಕಾರವು ಪರೀಕ್ಷೆ ಹೆಚ್ಚಿಸಿ ಗೆದ್ದಿದೆ. ಕಳೆದ ಆಗಸ್ಟ್ನಲ್ಲಿ ನಿತ್ಯ 50 ಸಾವಿರ ಇದ್ದ ಪರೀಕ್ಷೆಗಳನ್ನು ಅಕ್ಟೋಬರ್ನಲ್ಲಿ ನಿತ್ಯ ಒಂದು ಲಕ್ಷಕ್ಕೆ ಹೆಚ್ಚಿಸಲಾಯಿತು. ಇದರಿಂದ ಸೋಂಕುಪೀಡಿತರು ಶೀಘ್ರ ಪತ್ತೆಯಾಗಿ ಸೋಂಕು ಹರಡುವಿಕೆ ಕಡಿಮೆಯಾಯಿತು.
ಈ ವರ್ಷ ಮಾರ್ಚ್ ಅಂತ್ಯಕ್ಕೆ ಪರೀಕ್ಷೆ ಗಳನ್ನು 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಪ್ರಕರಣ ಗಳು ಹೆಚ್ಚು ವರದಿಯಾಗುತ್ತಿವೆ. ಗಾಬರಿ ಬೇಡ ಎನ್ನುತ್ತಾರೆ ಅಧಿಕಾರಿಗಳು.
ಮರು ಲಾಕ್ಡೌನ್ ಪ್ರಸ್ತಾವವಿರಲಿಲ್ಲ
ಹಿಂದೆ ಲಾಕ್ಡೌನ್ ಸಂದರ್ಭ ವೈದ್ಯ ಕೀಯ ವ್ಯವಸ್ಥೆ ಬಲಪಡಿಸಲಾಯಿತು. ಜನ ರಿಗೆ ತಿಳಿವಳಿಕೆ ನೀಡಲಾಯಿತು. ಜತೆಗೆ ಜನರ ಕಷ್ಟ ಅರ್ಥವಾಯಿತು. ಹೀಗಾಗಿ ಅನ್ಲಾಕ್ ಬಳಿಕ ಸೋಂಕು 10 ಪಟ್ಟು ಹೆಚ್ಚಿದರೂ ಮತ್ತೆ ಲಾಕ್ಡೌನ್ ಪ್ರಸ್ತಾವ ಬರಲಿಲ್ಲ. ಈಗಲೂ ವೈದ್ಯಕೀಯ ವ್ಯವಸ್ಥೆ ಬಲವರ್ಧನೆ, ಕೊರೊನಾ ನಿಯಮ ಪಾಲನೆಯೇ ಮದ್ದು.
ವಾಣಿಜ್ಯ ವಲಯದ ಅಭಿಮತ
– ಲಾಕ್ ಡೌನ್ನಿಂದ ಸಣ್ಣ, ಬೃಹತ್ ಕೈಗಾ ರಿಕೆ ಭಾರೀ ನಷ್ಟ ಅನು ಭ ವಿ ಸಿತ್ತು. ಮತ್ತೆ ಲಾಕ್ ಮಾಡಿ ದರೆ ಪಾತಾಳಕ್ಕಿಳಿಯಲಿದೆ.
– ಎಚ್ಚರ ವಹಿ ಸಿ ದ್ದೇವೆ. ಮಾರ್ಗ ಸೂ ಚಿ ಪಾಲಿಸುತ್ತಿದ್ದೇವೆ. ಹೊರ ರಾಜ್ಯ ಗ ಳಿಂದ ಬರು ವ ವರ ಮೇಲೆ ನಿಗಾ ಇರಿಸಿ.
– ಜಾತ್ರೆ, ಸಭೆ-ಸಮಾರಂಭ, ರಾಜಕೀಯ ಪ್ರಚಾರ ಸಭೆಗಳಿಗೆ ಬ್ರೇಕ್ ಹಾಕಿ.
ತಜ್ಞ ವೈದ್ಯರ ಮಾತೇನು?
ಕೊರೊನಾ ಮೊದಲ ಅಲೆಯ ಸಂದರ್ಭ ಪ್ರಕರಣಗಳನ್ನು ಹತೋಟಿಗೆ ತಂದದ್ದು ಲಾಕ್ ಡೌನ್ ಅಲ್ಲ; ಪರೀಕ್ಷೆ ಹೆಚ್ಚಳ, ಪೀಡಿತರ ಶೀಘ್ರ ಪತ್ತೆ ಮತ್ತು ಚಿಕಿತ್ಸೆ. ಕೊರೊನಾ ಪ್ರಕರಣಗಳು ಏರಿ ಗರಿಷ್ಠಕ್ಕೆ ತಲುಪಿ ಮತ್ತೆ ಇಳಿಯುತ್ತವೆ. ಲಾಕ್ಡೌನ್ನಿಂದ ಸೋಂಕಿನ ಸ್ಫೋಟವನ್ನು ಮುಂದೂಡಿದಂತಾಗುತ್ತದೆ ಅಷ್ಟೇ.
ಮತ್ತೆ ಲಾಕ್ ಇಲ್ಲ: ಸಿಎಂ
ಮತ್ತೆ ಲಾಕ್ಡೌನ್ ಮಾಡುವುದೇ ಇಲ್ಲ ಎಂದು ಸಿಎಂ ಬಿಎಸ್ವೈ ಸ್ಪಷ್ಟಪಡಿಸಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಈಗಾಗಲೇ ಅವಶ್ಯವಿದ್ದ ಜಿಲ್ಲೆಗಳಲ್ಲಿ ಕ್ರಮ ಕೈಗೊಂಡಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’