ಈಶಾದಿಂದ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ
Team Udayavani, Mar 13, 2021, 12:25 AM IST
ಕೊಯಮತ್ತೂರು: ಈಶಾದಿಂದ ಮಹಾ ಶಿವರಾತ್ರಿಯನ್ನು ಸಂಗೀತ ಮತ್ತು ನೃತ್ಯ ಪ್ರದರ್ಶನದ ಮೂಲಕ ಶ್ರದ್ಧಾಭಕ್ತಿಯಿಂದ ಆಚರಿಸ ಲಾಯಿತು. ಆದಿಯೋಗಿಯ ಸಮ್ಮುಖದಲ್ಲಿ ತಲ್ಲೀನಗೊಳಿಸುವ ಧ್ಯಾನದೊಂದಿಗೆ ಜರಗಿದ ಶಿವರಾತ್ರಿ ಯಲ್ಲಿ ಮಾತನಾಡಿದ ಸದ್ಗುರುಗಳು, ಈ ರಾತ್ರಿ ಕೇವಲ ಜಾಗರಣೆಯ ರಾತ್ರಿಯಾಗದೆ, ಜಾಗೃತಿಯ ರಾತ್ರಿ ಯಾಗಲಿ ಎಂದರು.
ಎಲ್ಲ ರೀತಿಯ ಕೊರೊನಾ ಮುಂಜಾ ಗರೂಕತಾ ಕ್ರಮಗಳೊಂದಿಗೆ ಜರಗಿದ ಕಾರ್ಯಕ್ರಮದಲ್ಲಿ ಸದ್ಗುರುಗಳನ್ನು ಅದ್ದೂರಿಯಾಗಿ ಸ್ವಾಗತಿಸಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಮೊದಲು ಈಶಾ ಯೋಗ ಕೇಂದ್ರದಲ್ಲಿ- ಲಿಂಗ ಭೈರವಿ ಮಹಾಯಾತ್ರೆ ಮತ್ತು ಸದ್ಗುರುಗಳು ಪಂಚಭೂತ ಕ್ರಿಯೆಯನ್ನು ನಡೆಸಿಕೊಟ್ಟರು. ಸದ್ಗುರುಗಳು ಒಂದು ಸಸಿಯನ್ನು ನೆಟ್ಟು ಮಹಾಯೋಗ ಜ್ಯೋತಿಯನ್ನು ಬೆಳಗಿದರು. ಲಕ್ಷಾಂತರ ಈಶಾ ಸ್ವಯಂಸೇವಕರು (ಯೋಗ ವೀರರು) ಯೋಗದ ಸರಳ ಸ್ವರೂಪವನ್ನು ಸಾಧ್ಯವಾದಷ್ಟು ಜನರಿಗೆ ಕಲಿಸಲು ಪ್ರತಿಜ್ಞೆ ಕೈಗೊಂಡರು.
ಈಶಾದ ದೇಸೀ ಸಂಗೀತ ವೃಂದ ಸೌಂಡ್ಸ್ ಆಫ್ ಈಶಾ ಮತ್ತು ಈಶಾ ಸಂಸ್ಕೃತಿಯ ವಿದ್ಯಾರ್ಥಿಗಳು ವರ್ಣರಂಜಿತ ಕಾರ್ಯಕ್ರಮ ನೀಡಿದರು. ಸದ್ಗುರು ಜತೆಗಿನ ಮಧ್ಯರಾತ್ರಿ ಧ್ಯಾನ, ಸತ್ಸಂಗ ಹಾಗೂ ಪ್ರಶ್ನೋತ್ತರಗಳು ಪ್ರೇಕ್ಷಕರನ್ನು ಹಿಡಿದಿಟ್ಟಿವೆ. ಅದ್ಭುತ ಧ್ವನಿ ಮತ್ತು ಬೆಳಕಿನ ಪ್ರದರ್ಶನವಾದ ಅದಿಯೋಗಿ ದಿವ್ಯ ದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಕಾರ್ಯಕ್ರಮವನ್ನು ನೂರಾರು ಚಾನೆಲ್ಗಳು ಮತ್ತು ವೆಬ್ಸೈಟ್ ಮೂಲಕ ನೇರ ಪ್ರಸಾರ ಮಾಡಲಾಯಿತು. ಇಂಗ್ಲಿಷ್ ಮತ್ತು 11 ಭಾರತೀಯ ಭಾಷೆಗಳಲ್ಲದೆ, ನೇಪಾಳಿ, ರಷ್ಯನ್, ಫ್ರೆಂಚ್, ಪೋರ್ಚುಗೀಸ್, ಸಾಂಪ್ರದಾಯಿಕ ಚೈನೀಸ್ ಮತ್ತು ಸರಳೀಕೃತ ಚೈನೀಸ್ ಭಾಷೆಗಳಲ್ಲಿಯೂ ಪ್ರಸಾರ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್