ಕಾವೇರಿಯ ಪ್ರತಿ ಹನಿ ಮೇಲೆ ಕನ್ನಡಿಗರ ಹಕ್ಕಿದೆ: ಮೇಕೆದಾಟು 2.0 ನಲ್ಲಿ ಸುರ್ಜೆವಾಲಾ
Team Udayavani, Feb 27, 2022, 12:08 PM IST
ರಾಮನಗರ: ಕಾವೇರಿಯ ಪ್ರತಿ ಹನಿ ಮೇಲೆ ಕನ್ನಡಿಗರ ಹಕ್ಕಿದೆ, ಮೇಕೆದಾಟು ಅಧಿಕಾರಕ್ಕೆ ಯಾರಾದರು ಅಡ್ಡಗಲಾಗಿದ್ದರೆ ಅದು ಬೆಂಗಳೂರಲ್ಲಿ ಕುಳಿತಿರುವ ಬಿಜೆಪಿ ಸರ್ಕಾರ ಕಾರಣ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಭಾನುವಾರ ಕಿಡಿ ಕಾರಿದ್ದಾರೆ.
ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇದು ಹೊಸ ಇತಿಹಾಸ ಬರೆಯುವ ದಿನ. ಕಾವೇರಿ ನೀರು ನಮ್ಮ ಅಧಿಕಾರ. ರೈತರು, ಯುವಕರು ಸೇರಿದಂತೆ ಪ್ರತಿಯೊಬ್ಬ ನಡಿಗೆಯಲ್ಲಿ ಸಾಗಿದರೆ ಗೆಲುವಿಗಾಗಿ ಕಾವೇರಿ ತಾಯಿಯೇ ದಾರಿ ಮಾಡಿಕೊಡಲಿದ್ದಾಳೆ ಎಂದರು.
ರಾಮನಗರದ ಟಿ.ಆರ್. ಮಿಲ್ ಮೈದಾನನಿಂದ ಪಾದಾಯಾತ್ರೆ ಆರಂಭವಾಗಿದ್ದು, ಹಲವು ಕಾಂಗೇಸ್ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.
ವಿಶೇಷ ಪ್ರಾರ್ಥನೆ
ಪಾದಯಾತ್ರೆ ಆರಂಭವಾಗುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಮನಗರದ ಬಿಜಿಎಸ್ ಮಠದಲ್ಲಿ ಗವಿ ಗಂಗಾಧರೇಶ್ವರನ ದರ್ಶನ ಪಡೆದರು. ನಮ್ಮ ಯಾತ್ರೆ ಯಶಸ್ವಿಯಾಗಲು ಹರಸುವಂತೆ ಪ್ರಾರ್ಥಿಸಿದರು. ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಣೆ
ವಕೀಲರಿಗೂ ತಟ್ಟಿದ ಬೇಸಿಗೆ ಬಿಸಿ: ಕಪ್ಪು ಕೋಟ್ಗೆ ವಿನಾಯಿತಿ
NDA; ಮಂಡ್ಯಕ್ಕೆ ಬಂದಿರುವ ಕುಮಾರಸ್ವಾಮಿಯನ್ನು ಸೋಲಿಸಿ ಮನೆಗೆ ಕಳಿಸಿ: ಸಿದ್ದರಾಮಯ್ಯ
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ