ಕಲಬುರಗಿ: ಮಾನಸಿಕ ಅಸ್ವಸ್ಥನ ಅವಾಂತರ; ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲೇಟು
Team Udayavani, Jan 16, 2022, 12:28 PM IST
ಕಲಬುರಗಿ: ನಗರದಲ್ಲಿ ರವಿವಾರ ಬೆಳಗ್ಗೆ ಮಾನಸಿಕ ಅಸ್ವಸ್ಥನೊಬ್ಬ ಮನಸೋ ಇಚ್ಛೆಯಿಂದ ಕಲ್ಲುಗಳ ತೂರಾಟ ನಡೆಸಿ ಅವಾಂತರ ಸೃಷ್ಟಿಸಿದ್ದಲ್ಲದೇ, ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ ಘಟನೆ ನಡೆದಿದೆ.
ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿರುವ ನೋಬೆಲ್ ಶಾಲೆಯ ಮುಂಭಾಗದಲ್ಲಿ ಏಕಾಏಕಿ ಹುಚ್ಚು ರಸ್ತೆಗೆ ಬಂದವರ ಮೇಲೆ ಕಲ್ಲುಗಳ ತೂರಾಟ ನಡೆಸಿದ್ದಾನೆ. ಬೈಕ್, ಕಾರುಗಳಲ್ಲಿ ಸಂಚರಿಸುತ್ತಿದ್ದವರ ಮೇಲೆ ಕಲ್ಲುಗಳು, ಇಟ್ಟಿಗೆಗಳನ್ನು ಎಸೆದಿದ್ದಾನೆ. ಇದರಿಂದ ಒಂದು ಕಾರು ಮತ್ತು ಆಟೋಗೆ ಕಲ್ಲೇಟು ಬಿದ್ದು ಗಾಜು ಜಖಂಗೊಂಡಿದೆ.
ಸಾರಿಗೆ ಬಸ್ ಗೂ ಕಲ್ಲೇಟು
ಹುಚ್ಚನ ಅವಾಂತರದಿಂದ ಸಾರಿಗೆ ಬಸ್ ಗೂ ಕಲ್ಲೇಟು ಬಿದ್ದು, ಮುಂಭಾಗದ ಗಾಜಿಗೆ ಹಾನಿಯಾಗಿದೆ. ಬಸ್ ನಲ್ಲಿ ಹಲವು ಪ್ರಯಾಣಿಕರು. ಅದೃಷ್ಟವಶಾತ್ ಯಾರಿಗೂ ಕಲ್ಲೇಟು ತಾಗಿಲ್ಲ.
ಅಲ್ಲದೇ, ಕಾರು ಮತ್ತು ಆಟೋದಲ್ಲಿದ್ದವರೂ ಹುಚ್ಚನ ಹುಚ್ಚಾಟದಲ್ಲಿ ಪಾರಾಗಿದ್ದಾರೆ. ನಿರಂತರವಾಗಿ ಕಲ್ಲುಗಳ ತೂರಾಟದಿಂದ ಜನರು ಆತಂಕಗೊಂಡಿದ್ದರು. ಹುಚ್ಚನ ಹತ್ತಿರ ಹೋಗಲೂ ಭಯಗೊಂಡು ಕೆಲ ಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಈ ವೇಳೆ ಕೆಲ ಯುವಕರು ಮುನ್ನುಗ್ಗಿ ಹುಚ್ಚನ ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದೆಡೆ ಕಾಂಗ್ರೆಸ್ ಗೆದ್ದಿದೆ: ಡಾ. ಶರಣಪ್ರಕಾಶ
HKE ಚುನಾವಣೆ: ಅಧ್ಯಕ್ಷರಾಗಿ ಶಶೀಲ್ ಜಿ. ನಮೋಶಿ ಆಯ್ಕೆ
PM ಮೋದಿ ಸಮನಾದ ನಾಯಕ ಕಾಂಗ್ರೆಸ್ನಲ್ಲಿಲ್ಲ: ಬಿಎಸ್ವೈ
Kalaburagi; ಅರ್ಧ ಗಂಟೆ ಭಾಷಣದಲ್ಲಿ ಖರ್ಗೆ ಹೆಸರನ್ನೇ ಉಲ್ಲೇಖಿಸದ ಮೋದಿ
Kalaburagi; ಕರ್ನಾಟಕದ ಜನತೆ ಕೋಪಗೊಂಡಿದ್ದಾರೆ, ಎಚ್ಚೆತ್ತುಕೊಂಡಿದ್ದಾರೆ:ಪ್ರಧಾನಿ ಮೋದಿ