ಕಾಶಿ ದೇಗುಲ ಕಾರಿಡಾರ್ಗಾಗಿ 1,000 ಚದರಡಿ ಭೂಮಿ ನೀಡಿದ ಮಸೀದಿ
Team Udayavani, Jul 24, 2021, 9:40 PM IST
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಕಾಶಿಯಲ್ಲಿರುವ ಗ್ಯಾನ್ವಾಪಿ ಮಸೀದಿಗೆ ಸೇರಿದ ಅದೇ ನಗರದ ಬನ್ಸ್ ಪಾಠಕ್ ಪ್ರಾಂತ್ಯದಲ್ಲಿರುವ 1,000 ಚದರಡಿ ಭೂಮಿಯನ್ನು ಮಸೀದಿಯ ಆಡಳಿತ ಮಂಡಳಿ, ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್ ಯೋಜನೆಗಾಗಿ ಬಿಟ್ಟುಕೊಟ್ಟಿದೆ.
ಕಾಶಿ ವಿಶ್ವನಾಥ ದೇಗುಲ ಹಾಗೂ ಅದರ ಬಳಿಯಿರುವ ಗ್ಯಾನ್ವಾಪಿ ಮಸೀದಿಯಿರುವ ಭೂಮಿಯ ಒಡೆತನ ಯಾರಿಗೆ ಸೇರಬೇಕೆಂಬ ವಿಚಾರದಲ್ಲಿ ದೇಗುಲದ ಆಡಳಿತ ಮಂಡಳಿ ಹಾಗೂ ಮಸೀದಿಯ ಒಡೆತನ ಹೊಂದಿರುವ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ನಡುವೆ ಕಾನೂನು ಹೋರಾಟ ನಡೆಯುತ್ತಿದ್ದು, ಇದರ ನಡುವೆಯೇ, ಭೂಮಿಯನ್ನು ವಕ್ಫ್ ಮಂಡಳಿ ಯೋಜನೆಗಾಗಿ ನೀಡಿರುವುದು ವಿಶೇಷವೆನಿಸಿದೆ.
ಇದನ್ನೂ ಓದಿ :72.46 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ : ನಾಲ್ವರು ವಿಮಾನ ಸಿಬ್ಬಂದಿ ಸೇರಿ 7 ಮಂದಿ ಸೆರೆ
2019ರಲ್ಲಿ ಕಾಶಿ ದೇಗುಲವನ್ನು ಸುಂದರವಾಗಿಸುವ ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆದರೆ, ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ಮಸೀದಿಯ ಈ ಭೂಮಿ ಅಗತ್ಯವಾಗಿ ಬೇಕಿತ್ತು. ಇದನ್ನು ಅರ್ಥೈಸಿಕೊಂಡು ವಕ್ಫ್ ಮಂಡಳಿ ಭೂಮಿ ನೀಡಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ