ಪುನೀತ್ ಸರ್ ಅತ್ಯಂತ ಸುಲಭವಾಗಿ ತಲುಪಬಹುದಾಗಿದ್ದ ಸೂಪರ್ ಸ್ಟಾರ್: ಮಣಿಕಾಂತ್ ಕದ್ರಿ
Team Udayavani, Oct 29, 2021, 6:52 PM IST
ದಿವಂಗತ ಪುನೀತ್ ರಾಜ್ ಕುಮಾರ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ
ಬೆಂಗಳೂರು : ‘ಪುನೀತ್ ರಾಜ್ ಕುಮಾರ್ ಅವರು ಅತ್ಯಂತ ಸುಲಭವಾಗಿ ತಲುಪಬಹುದಾಗಿದ್ದ ಸೂಪರ್ ಸ್ಟಾರ್’ ಆಗಿದ್ದರು’ ಎಂದು ಪ್ರಸಿದ್ಧ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಶುಕ್ರವಾರ ಉದಯವಾಣಿ.ಕಾಮ್ ಜೊತೆ ಮಾತನಾಡುತ್ತ ತೀವ್ರ ಸಂತಾಪ ಸೂಚಿಸಿದ್ದಾರೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಪುನೀತ್ ಅವರೊಂದಿಗಿನ ಒಡನಾಟ ನೆನೆಸಿಕೊಂಡು, ‘ರನ್ ಆಂಟನಿ’ ಚಿತ್ರದಲ್ಲಿ ‘ ಜನಕ್ ಜನಕ್’ ಹಾಡನ್ನು ನಾನೇ ಹಾಡುತ್ತೇನೆಂದು ಮುಂದೆ ಬಂದಿದ್ದರು. ‘ಹೊಸ ಪ್ರಯೋಗಗಳನ್ನು ಯಾವುದೇ ಮುಲಾಜಿಲ್ಲದೆ ಮಾಡಿ ಸಿನಿಮಾ ಗೆಲ್ಲಿಸಿಕೊಡಿ’ ಅಂದಿದ್ದರು ಎಂದರು.
”ಪಿಆರ್ ಕೆ ಪ್ರೊಡಕ್ಷನ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದರು. ಅವರು ಕನ್ನಡ ಚಿತ್ರರಂಗದ ಬಹುದೊಡ್ಡ ಭರವಸೆಯಾಗಿದ್ದರು. ಭರವಸೆ ಅಂದರೆ ಅದು ಪುನೀತ್ ಸರ್.’ನನಗೆ ಅವರಿಲ್ಲ ಎನ್ನುವುದು ದೊಡ್ಡ ಆಘಾತ” ಎಂದರು.
”Dr. Rajkumar’s Learning App ಗೆ ಸಂಗೀತ ಮಾಡಿದ್ದೂ ನಾನೇ. ಬಿಡುಗಡೆಗೆ ಬಂದಿದ್ದಾಗ ಬೇರೆ ಕಡೆ ಕರೆದುಕೊಂಡು ಹೋಗಿ, ಮುಂದಿನ ವಾರ ಸಿಗೋಣ. ಪಿಆರ್ ಕೆ ಪ್ರೊಡಕ್ಷನ್ ಗೆ ಸಿನಿಮೇತರ ಹಾಡುಗಳನ್ನು ನೀವು ಮಾಡಬೇಕು. ಅದರಲ್ಲಿ ನಾನು ಹಾಡುತ್ತೇನೆ, ಅಭಿನಯಿಸುತ್ತೇನೆ ಅಂದಿದ್ದರು” ಎಂದು ಮರೆಯಲಾರದ ನೆನಪುಗಳನ್ನು ಹೊರ ಹಾಕಿದರು.
ಮಂಗಳೂರಿನ ಒಂದು ತಂಡ ಅವರಿಂದ ಒಂದು ಹಾಡು ಬಿಡುಗಡೆ ಮಾಡಿಸಬೇಕೆಂದು ಪ್ರಯತ್ನ ಪಟ್ಟಿತ್ತು. ಅವರನ್ನು ತಲುಪಲು ಸಾಧ್ಯವಾಗದಿದ್ದಾಗ ನನ್ನನ್ನು ಸಂಪರ್ಕಿಸಿದರು. ಒಂದು ಕರೆ ಮಾಡಿದೆ, ಇಂತಿಂತ ಸಮಯಕ್ಕೆ ಬರಲು ಹೇಳಿ ಅಂದರು , ನಂತರ ಬಿಡುಗಡೆ ಗೊಳಿಸಿದ್ದರು ಎಂದು ಒಡನಾಟದ ನೆನಪುಗಳನ್ನು , ಸರಳತೆಯನ್ನು ನೆನಪಿಸಿಕೊಂಡರು.
ಪುನೀತ್ ಅವರ ‘ಪ್ರಥ್ವಿ’ ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರು ಸಂಗೀತ ನೀಡಿದ್ದರು.ಚಿತ್ರದಲ್ಲಿ ಪುನೀತ್ ಅವರು ಯುವ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಸಂದೇಶ ಚಿತ್ರದಲ್ಲಿತ್ತು.
ಸಹಕಾರ : ಅವಿನಾಶ್ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ