ನಾನು ಸತ್ತರೆ ಮಣ್ಣಿಗೆ ಬರಬೇಡ ಎಂದು ಅಣ್ಣನಿಗೆ ಹೇಳಿದ್ದೇನೆ :ಸಂಸದ ಜಿಗಜಿಣಗಿ
Team Udayavani, Dec 6, 2021, 6:45 PM IST
ವಿಜಯಪುರ : ನನ್ನ ಅಣ್ಣ ಸಿದ್ಧರಾಮಪ್ಪನಿಗೂ ನನಗೂ ಕಳೆದ 25 ವರ್ಷಗಳ ಹಿಂದೆಯೇ ಸಂಬಂಧ ಕಡಿದಿದಿದೆ. ನನ್ನ ಸಹೋದರಿಯ ಅಂತ್ಯ ಸಂಸ್ಕಾರಕ್ಕೆ ಹೋಗಲು ನಿರಾಕರಿಸಿದ ಆತನಿಗೆ ನಾನು ಸತ್ತರೆ ನೀನು ನನ್ನ ಮಣ್ಣಿಗೆ ಬರಬೇಡ, ನೀನು ಸತ್ತರೆ ನಾನು ನಿನ್ನ ಮಣ್ಣಿಗೆ ಬರುವುದಿಲ್ಲ ಎಂದು ಅಂದೇ ಹೇಳಿ, ಸಂಬಂಧ ಕಡಿತ ಮಾಡಿಕೊಂಡಿದ್ದೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ತಮ್ಮ ಸಹೋದರನ ವಿರುದ್ಧ ಹರಿಹಾಯ್ದರು.
ತಮ್ಮ ಅಣ್ಣ ಸಿದ್ಧರಾಮಪ್ಪ ಅವರು ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅದರಲ್ಲೂ ಪಕ್ಷೇತರನ ಪರ ಪ್ರಚಾರ ಮಾಡುವಾಗ ಸಂಸದನಾಗಿರುವ ತನ್ನ ತಮ್ಮನ ವಿರುದ್ಧ ಮಾತನಾಡಿದ್ದರು. ಅಲ್ಲದೇ ನನ್ನ ಜೀವಿತಾವಧಿಯಲ್ಲಿ ಎಂದೂ ಬಿಜೆಪಿ ಪಕ್ಷಕ್ಕೆ ಮತ ಹಾಕಿಲ್ಲ ಎಂದಿದ್ದರು.
ಇದಕ್ಕೆ ಸೋಮವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಗೊತ್ತಿಲ್ಲದ ಅವನೊಂದಿಗೆ ಎಂಥ ಮಾತು. ಅವನು ಎನೇನೋ ಮಾತನಾಡುತ್ತಾನೆ. ಆದರೆ ಅವನ ಸೇವೆ ಮಾಡುವ ಅವನದೇ ಮೊಮ್ಮಗ ಗ್ರಾ.ಪಂ. ಸದಸ್ಯನಾಗಿದ್ದು, ಬಿಜೆಪಿ ಪರವಾಗಿ ಮತ ಹಾಕುತ್ತಾನೆ. ಹೀಗಾಗಿ ಅವನ ಮಾತಿಗೆ ಎಷ್ಟು ಬೆಲೆ ಇದೆ ಎಂಬುದನ್ನು ನೀವೇ ತಿಳಿಯಬೇಕು. ಸಂಬಂಧ ಕಡಿದುಕೊಂಡಿರುವ ಅಣ್ಣ ಸಿದ್ಧರಾಮಪ್ಪನ ಕುರಿತು ಮಾತನಾಡುವುದು ಸರಿಯಲ್ಲ ಎಂದು ಹರಿಹಾಯ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಸಮಾಧಾನ; ಶೀಘ್ರದಲ್ಲೇ ಆಂತರಿಕ ಭಾವನೆ ಹಂಚಿಕೊಳ್ಳುತ್ತೇನೆ!: ಸದಾನಂದ ಗೌಡ
Shakti Remark:ಸವಾಲು ಸ್ವೀಕರಿಸಿದ್ದೇನೆ-ರಾಹುಲ್ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು
Poll: ಪಶ್ಚಿಮಬಂಗಾಳ ಡಿಜಿಪಿ, 6 ರಾಜ್ಯಗಳ ಗೃಹ ಕಾರ್ಯದರ್ಶಿಗಳ ವರ್ಗಾವಣೆ; ಚುನಾವಣಾ ಆಯೋಗ
Loksabha; ಹೆಡ್ ಲೈನ್ ಗಾಗಿ ಅಲ್ಲ, ಡೆಡ್ ಲೈನ್ ಗೆ ಕೆಲಸ ಮಾಡುವವ ನಾನು: ಪ್ರಧಾನಿ ಮೋದಿ
Electoral Bonds ಕುರಿತ ಸುಪ್ರೀಂ ತೀರ್ಪನ್ನು ಗೌರವಿಸ್ತೇನೆ…ಆದರೆ… ಶಾ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ