ನಲಪಾಡ್ ಹಲ್ಲೆ ಮಾಡಿಲ್ಲ,ಯಾರಾದರೂ ದೂರು ಕೊಟ್ಟಿದ್ದಾರಾ : ಈಶ್ವರ್ ಖಂಡ್ರೆ ಪ್ರಶ್ನೆ
Team Udayavani, Jan 20, 2022, 1:45 PM IST
ಬೆಂಗಳೂರು : ಸಿದ್ದು ಹಳ್ಳೇಗೌಡ ಮೇಲೆ ನಲಪಾಡ್ ಹಲ್ಲೆ ಆರೋಪಕ್ಕೆ ಸಂಬಂಧಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದು, ನಲಪಾಡ್ ಯಾರ ಮೇಲೂ ಹಲ್ಲೆ ಮಾಡಿಲ್ಲ, ಹಲ್ಲೆ ಸಂಬಂಧ ಯಾರಾದ್ರೂ ದೂರು ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ನಾನು ಅಲ್ಲಿಗೆ ಹೋಗೇ ಇಲ್ಲ ಅಂತಾ ಸಿದ್ದು ಹೇಳಿದ್ದಾನೆ, ಇದೆಲ್ಲಾ ಕಪೋಲ ಕಲ್ಪಿತ ಸುದ್ದಿ. ಗಲಾಟೆ ನಡೆದಿದೆ ಅಂತಾ ಹೋಮ್ ಮಿನಿಸ್ಟರ್ ಹೇಳಿರೋದು ಸುಳ್ಳು. ಖಚಿತ ಮಾಹಿತಿ ಇದ್ದರೆ ಪ್ರಕರಣ ದಾಖಲು ಮಾಡಿದ್ದಾರಾ..? ಎಂದು ಪ್ರಶ್ನಿಸಿದ್ದಾರೆ.
ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರು ಬಳ್ಳಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ನಡೆಸಿದ್ದಾರೆಂದು ಸುದ್ದಿಯಾಗಿತ್ತು. ಈಗಾಗಲೇ ಸಿದ್ದು ಹಳ್ಳೇಗೌಡ ಅವರು ಇದು ಸುಳ್ಳು ಸುದ್ದಿ, ಕಾಂಗ್ರೆಸ್ ಪಕ್ಷದ ಮೇಲೆ ಮಾಡಿರುವ ಷಡ್ಯಂತ್ರ ಎಂದಿದ್ದಾರೆ.