ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸ್ಸು : ಕಟೀಲ್ ಹೇಳಿಕೆ
Team Udayavani, Jan 23, 2021, 2:53 PM IST
ಬೆಂಗಳೂರು : ಯತ್ನಾಳ್ ವಿರುದ್ಧ ಶಿಸ್ತು ಕ್ರಮ ವಹಿಸಲು ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಟೀಲ್, ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ ಅಲ್ಲದೆಡೆ ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಅಸಮಧಾನಿತ ಶಾಸಕರಿಂದ ದೆಹಲಿ ಯಾತ್ರೆ ವಿಚಾರ ವಿಚಾರವಾಗಿ ಮಾತನಾಡಿದ ಅವರು ದೆಹಲಿಗೆ ಅವರಷ್ಟಕ್ಕೇ ಹೋಗ್ತಾರೆ, ಯಾವುದೋ ಕಾರಣಕ್ಕೆ ಹೋಗಿರಬಹುದು, ಸಂಪುಟ ವಿಸ್ತರಣೆ ಆದಾಗ ಸಹಜವಾಗೇ ಅಸಮಧಾನ ಇರುತ್ತೆ, ನೋವು ವ್ಯಕ್ತಪಡಿಸೋಕೆ ಅವರಿಗೆ ಸ್ವಾತಂತ್ರ್ಯವಿದೆ ಎಂದ ಅವರು ಅಸಮಾಧಾನಿತರನ್ನು ಕರೆದು ಮಾತನಾಡುತ್ತೇನೆ, ಅದು ನನ್ನ ಜವಾಬ್ದಾರಿ ಕೂಡಾ ಅವರವರ ಭಾವಕ್ಕೆ ಅವರವರ ಭಕ್ತಿಯನ್ನು ಪಾರ್ಟಿ ಗಮನಿಸುತ್ತಿದೆ, ಒಂದು ವೇಳೆ ಡ್ಯಾಮೇಜ್ ಆಗ್ತಿದ್ರೆ ಸರಿಪಡಿಸುತ್ತೇವೆ ಎಂದರು.
ಇದನ್ನೂ ಓದಿ:ಮನುಷ್ಯತ್ವ ಇದ್ದರೆ ಶಿವಮೊಗ್ಗ ಪ್ರಕರಣದ ಹೊಣೆ ಹೊತ್ತು BSY ಮತ್ತು ಈಶ್ವರಪ್ಪ ರಾಜೀನಾಮೆ ನೀಡಲಿ
ಒಂದೆರಡು ದಿನದಲ್ಲಿ ಎಲ್ಲಾ ಸರಿಯಾಗಲಿದ್ದು ಖಾತೆ ಹಂಚಿಕೆ, ಮಂತ್ರಿ ಮಂಡಲ ರಚನೆ ಸಿಎಂ ವಿವೇಚನೆಗೆ ಬಿಟ್ಟಿದ್ದು, ಅಲ್ಲದೆ ಖಾತೆ ಗೊಂದಲ ನೆನ್ನೆಯೇ ಮುಖ್ಯಮಂತ್ರಿಗಳು ಶಮನ ಮಾಡಿದ್ದಾರೆ, ಪಕ್ಷದಲ್ಲಿ ಏನೇ ಸಮಸ್ಯೆ ಇದ್ರೂ ಸಿಎಂ ಸರಿ ಮಾಡಿಕೊಂಡು ಹೋಗುತ್ತಾರೆ ಎಂದು ಹೇಳಿದರು.