ಬುಸ್ ನಾಗಪ್ಪ ದೆಹಲಿಗೂ ಹೋಯಿತು: ಕೇಂದ್ರ ಸಚಿವ ನಾರಾಯಣಸ್ವಾಮಿ ಲೇವಡಿ
Team Udayavani, Nov 15, 2021, 5:49 PM IST
ಚಿತ್ರದುರ್ಗ:ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿ, ರಾಜ್ಯದಲ್ಲಿ ಮಾತ್ರ ಬುಸ್ ಬುಸ್ ನಾಗಪ್ಪ ಇದೆ ಅಂದುಕೊಂಡಿದ್ದೆವು. ಅದೇ ಬುಸ್ ಬುಸ್ ನಾಗಪ್ಪ ದೆಹಲಿಗೂ ಹೋಯಿತು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಕಾಂಗ್ರೆಸ್ ನಾಯಕರನ್ನು ಸೋಮವಾರ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎ.ನಾರಾಯಣಸ್ವಾಮಿ ‘ಡಿಕೆಶಿ, ಸಿದ್ದರಾಮಯ್ಯ ಮನೆಗೆ ಬೆಂಕಿ ಬಿದ್ದಿತ್ತು,ಹಾನಗಲ್ ಗೆದ್ದ ನಂತರ ಕಾಂಗ್ರೆಸ್ನಲ್ಲಿ ಬಿಜೆಪಿ ಬಗ್ಗೆ ಮಾತನಾಡುವ ಗೊಂದಲ ಉಂಟಾಗಿದೆ. ಗೊಂದಲದ ನಡುವೆ ಬಿಟ್ ಕಾಯಿನ್ ಬಗ್ಗೆ ಮಾತಾಡ್ತಿದ್ದಾರೆ. ಜೇಬಲ್ಲಿ ನಾಗಪ್ಪ ಇದೆ ಎಂದು ಜನರ ದಿಕ್ಕು ತಪ್ಪಿಸುವ ತಂತ್ರಮಾಡುತ್ತಿದ್ದಾರೆ’ ಎಂದರು.
‘ಚುನಾವಣೆ ವೇಳೆ ಜನರ ಸಮಸ್ಯೆ ಬಗ್ಗೆ ಮುಕ್ತ ಚರ್ಚೆ ಮಾಡಲಿ.ಕೆಲ ದಿನದಿಂದ ದಾಖಲೆಯಿದೆ ಎಂದು ಸಿದ್ಧರಾಮಯ್ಯ ಹೇಳುತ್ತಿಲ್ಲ.ಡಿಕೆಶಿ ಈಗ ಅರ್ಧಂಬರ್ಧ ಹೇಳುತ್ತಿದ್ದು ಅವರಿಗೆ ಕತ್ತು ಹಿಡಿದಿದೆ. ಡಿಕೆಶಿ ಅವರಿಗೆ ಯಾಕೆ ಕತ್ತು ಹಿಡಿತಿದೆ ಎಂದು ವೈದ್ಯರಿಗೆ ಕೇಳಬೇಕು’ ಎಂದರು.
‘ಸಿಎಂ ಬೊಮ್ಮಾಯಿ ಈಗಾಗಲೇ ಬಿಟ್ ಕಾಯಿನ್ ಬಗ್ಗೆ ಉತ್ತರಿಸಿದ್ದಾರೆ. ದಾಖಲೆಯಿದ್ದರೆ ಬಹಿರಂಗ ಪಡಿಸಲಿ, ಯಾರೇ ತಪ್ಪಿತಸ್ಥರಿದ್ದರು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ