ಭಾರತದಲ್ಲಿ ನೌಕಾಯಾನ ಬೆಳೆದುಬಂದ ಹಾದಿ : ಇಂದು ರಾಷ್ಟ್ರೀಯ ಕಡಲ ದಿನ


Team Udayavani, Apr 5, 2021, 6:20 AM IST

ಭಾರತದಲ್ಲಿ ನೌಕಾಯಾನ ಬೆಳೆದುಬಂದ ಹಾದಿ : ಇಂದು ರಾಷ್ಟ್ರೀಯ ಕಡಲ ದಿನ

ದೇಶದ ಆರ್ಥಿಕ ಅಭಿವೃದ್ಧಿಗೆ ನೌಕಾಯಾನದ ಕೊಡುಗೆ ಅಪಾರ. ವಿವಿಧ ದೇಶಗಳ ಮಾರುಕಟ್ಟೆಗೆ ಸರಕುಗಳನ್ನು ರಫ್ತು ಮಾಡುವುದು, ಬೇರೆ ದೇಶದಿಂದ ಅಗತ್ಯವಿರುವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಮೊದಲಾದ ವಾಣಿಜ್ಯ ಚಟುವಟಿಕೆಗಳಿಗೆ ನೌಕಾಯಾನವೇ ಆಧಾರ. ಭಾರತೀಯ ಹಡಗು 1919ರ ಎಪ್ರಿಲ್‌ 5ರಂದು ತನ್ನ ಮೊದಲ ಸಮುದ್ರಯಾನವನ್ನು ಪ್ರಾರಂಭಿಸಿತು. ಈ ದಿನದ ನೆನಪಿಗೆ ಪ್ರತೀ ವರ್ಷ ಎಪ್ರಿಲ್‌ 5ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ.

ಎಲ್ಲಿಂದ ಎಲ್ಲಿಗೆ: ಸ್ಥಳೀಯ ಭಾರತೀಯ ಉದ್ಯಮಿಗಳ ಒಡೆತನದ ಮೊದಲ ಅತೀ ದೊಡ್ಡ ಹಡಗು ಕಂಪೆನಿಯಾದ ದಿ ಸಿಂಧಿಯಾ ಸ್ಟೀಮ್‌ ನ್ಯಾವಿಗೇಶನ್‌ ಲಿ.ನ ಮೊದಲ ಹಡಗು ಎಸ್‌ಎಸ್‌ ಲಾಯಲ್ಟಿ ಬಾಂಬೆಯಿಂದ (ಮುಂಬಯಿ) ಯುನೈಟೆಡ್‌ ಕಿಂಗ್‌ಡಮ್‌ (ಲಂಡನ್‌)ಗೆ ಪ್ರಯಾಣಿಸಿದ ದಿನವಾಗಿದೆ. ಈ ದಿನವನ್ನು 1964ರಿಂದ ಆಚರಿಸಲಾಗುತ್ತಿದೆ.

ಏನು ಕಳುಹಿಸಲಾಗುತ್ತಿತ್ತು?
ಭಾರತೀಯ ಮಸಾಲೆಗಳು, ಧೂಪದ್ರವ್ಯ ಮತ್ತು ಜವಳಿ ತುಂಬಿದ ದೋಣಿಗಳು ಪಾಶ್ಚಿಮಾತ್ಯ ದೇಶಗಳ‌ತ್ತ ಸಾಗಿದವು.

ಸಮುದ್ರ ಸಾರಿಗೆ ಪ್ರಯೋಜನ: ರಸ್ತೆ ಅಥವಾ ವಾಯು ಸಾರಿಗೆಗೆ ಹೋಲಿಸಿದರೆ ಹಡಗುಗಳ ಮುಖಾಂತರ ಸರುಕುಗಳನ್ನು ಅತೀ ಕಡಿಮೆ ವೆಚ್ಚದಲ್ಲಿ ಸಾಗಿಸಬಹುದು. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬಂದರುಗಳ ಪಾತ್ರ ಮುಖ್ಯ ಎಂಬುದನ್ನು ಮರೆಯುವ ಹಾಗಿಲ್ಲ.

ನೇವಿಗೇಶನ್‌ ಹೇಗೆ?: ಇಂದಿನಂತೆ ಆ ಕಾಲದಲ್ಲಿ ಗೂಗಲ್‌ ಮ್ಯಾಪ್‌ಗ್ಳಿರಲಿಲ್ಲ. ಹೀಗಾಗಿ ನಕ್ಷೆಗಳು, ಧ್ರುವ ನಕ್ಷತ್ರ ಮತ್ತು ನಕ್ಷತ್ರ ಪುಂಜವನ್ನು ಆಧರಿಸಿ ಸಂಚರಿಸಲಾಗುತ್ತಿತ್ತು. ಇದು ನೈಜ ಸವಾಲಾಗಿತ್ತು.

ಸ್ವದೇಶಿ ಕಿಚ್ಚು: ಬ್ರಿಟಿಷ್‌ ಕಂಪೆನಿಗಳು ಹಡಗು ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದವು. ಈ ಸಮಯದಲ್ಲಿ ಗುಜರಾತ್‌ನ ಕೈಗಾರಿಕೋದ್ಯಮಿ ವಾಲ್ಚಂದ್‌ ಹಿರಾಚಂದ್‌ ಅವರು ಬಲಿಷ್ಠ ದೇಶಿಯ, ಹಡಗು ಉದ್ಯಮವನ್ನು ತೆರೆಯಲು ಯೋಚಿಸುತ್ತಾರೆ. ಅವರ ಸ್ನೇಹಿತರಾದ ನರೋತ್ತಮ್‌ ಮೊರಾರ್ಜಿ, ಕಿಲಚಂದ್‌ ದೇವcಂದ್‌ ಮತ್ತು ಲಲ್ಲುಭಾಯ್‌ ಸಮಲ್ದಾಸ್‌ ಅವ ರೊಂದಿಗೆ ಗ್ವಾಲಿಯರ್‌ನ ಸಿಂಧಿಯಾಸ್‌ನಿಂದ ಆರ್‌ಎಂಎಸ್‌ ಎಂಪ್ರಸ್‌ ಎಂಬ ಸ್ಟೀಮರ್‌ ಅನ್ನು ಖರೀದಿಸಿದರು. ಇದನ್ನು ಮೊದಲು 1890ರಲ್ಲಿ ಗ್ವಾಲಿಯರ್‌ನ ರಾಜಮನೆತನ ಕೆನಡಾದ ಪೆಸಿಫಿಕ್‌ ರೈಲ್ವೇಯಿಂದ ಖರೀದಿಸಿತ್ತು. ಬಳಿಕ ಮೊದಲ ವಿಶ್ವಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರಿಗೆ ಆಸ್ಪತ್ರೆಯಾಗಿ ಬಳಸಲಾಯಿತು. ನಾಲ್ಕು ಭಾರತೀಯರು ತಮ್ಮ ಕಂಪೆನಿಗೆ ಸಿಂಧಿಯಾ ಸ್ಟೀಮ್‌ ನ್ಯಾವಿಗೇಶನ್‌ ಕಂಪೆನಿ ಲಿ. ಎಂದು ಹೆಸರಿಟ್ಟರು. ಇದನ್ನು ಮೊದಲ ಸ್ವದೇಶಿ ಹಡಗು ಉದ್ಯಮ ಎಂದು ಕರೆಯಲಾಯಿತು.

ಭಾರತದ ಕಡಲ ಇತಿಹಾಸ
ವರದಿಗಳ ಪ್ರಕಾರ ನೌಕಾಯಾನದ ಇತಿಹಾಸವು ಸಹಸ್ರಮಾನಗಳ ಹಿಂದೆ ಪ್ರಾರಂಭವಾಗಿದೆ. ಕ್ರಿ.ಪೂ. 3ನೇ ಸಹಸ್ರಮಾನದಲ್ಲಿ, ಸಿಂಧೂ ಕಣಿವೆಯ ಜನರು ಮೆಸಪಟೋಮಿಯಾದೊಂದಿಗೆ ತಮ್ಮ ಸಮುದ್ರ ವ್ಯಾಪಾರವನ್ನು ಪ್ರಾರಂಭಿಸಿದ್ದರು. ರೋಮನ್‌ ಸಾಮ್ರಾಜ್ಯದಿಂದ ಈಜಿಪ್ಟ್ ಅನ್ನು ಸ್ವಾಧೀನಪಡಿಸಿಕೊಂಡಾಗ, ವ್ಯಾಪಾರವು ರೋಮನ್ನರರೊಂದಿಗೆ ಪ್ರಾರಂಭವಾಯಿತು.

ಮರುನಾಮಕರಣ!
ಆರ್‌ಎಂಎಸ್‌ ಎಂಪ್ರಸ್‌ ಅನ್ನು ಎಸ್‌ಎಸ್‌ ಲಾಯಲ್ಟಿ ಎಂದು ಮರುನಾಮಕರಣ ಮಾಡಲಾಯಿತು. 1919ರ ಎಪ್ರಿಲ್‌ 5ರಂದು ಲಂಡನ್‌ಗೆ ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಿತು. ಬ್ರಿಟಿಷ್‌ ಕಂಪೆನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಯಿತು. ಶುಲ್ಕಗಳ ವಿಚಾರದಲ್ಲಿಯೂ ಬ್ರಿಟಿಷರು ಅಂದು ತುಂಬಾ ಸಮಸ್ಯೆಕೊಟ್ಟಿದ್ದರು. ಅವೆಲ್ಲವನ್ನು ಮೆಟ್ಟಿನಿಂತು ಸಂಸ್ಥೆ ಬೆಳೆಯಿತು.

ಟಾಪ್ ನ್ಯೂಸ್

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಯ ಸ್ಥಿತಿ ಹೇಗಾಗಿದೆ ನೋಡಿ…

Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.