ಹೊಸಬರ ಡ್ರಾಮಾ ಶುರು…
Team Udayavani, Nov 21, 2021, 10:28 AM IST
ಕಿರುತೆರೆಯಲ್ಲಿ “ಸೀತಾವಲ್ಲಭ’ ಮತ್ತು “ಸರಸು’ ಮೊದಲಾದ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ನಟಿ ಸುಪ್ರೀತಾ ಸತ್ಯನಾರಾಯಣ್ ಈಗ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡುತ್ತಿದ್ದಾರೆ.
ಸದ್ಯ “ಮೆಲೋಡಿ ಡ್ರಾಮಾ’ ಚಿತ್ರದ ಮೂಲಕ ಸುಪ್ರೀತಾ ಸತ್ಯನಾರಾಯಣ್ ನಾಯಕಿಯಾಗಿ ಬೆಳ್ಳಿತೆರೆಗೆ ಬರುತ್ತಿದ್ದು, ಇತ್ತೀಚೆಗೆ “ಮೆಲೋಡಿ ಡ್ರಾಮಾ’ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು.
ಈ ಹಿಂದೆ “ದ್ವಿಪಾತ್ರ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿರುವ ಸತ್ಯ “ಮೆಲೋಡಿ ಡ್ರಾಮಾ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಪ್ರಶಾಂತ ಸಿದ್ದಿ, ಅನು ಪ್ರಭಾಕರ್, ರಂಗಾಯಣ ರಘು, ಶ್ರೀಧರ್, ಕಿಶೋರ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮಂಜು ಕಾರ್ತಿಕ್ ಜಿ. “ಮೆಲೋಡಿ ಡ್ರಾಮಾ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಮಂಜು ಕಾರ್ತಿಕ್ ಜಿ, “ಹೆಸರೇ ಹೇಳುವಂತೆ ಇದೊಂದು ಮೆಲೋಡಿ ಮ್ಯೂಸಿಕ್ ಇರುವಂಥ ಮೆಲೋಡಿ ಸಬೆjಕ್ಟ್ ಸಿನಿಮಾ. ಜೀವನದಲ್ಲಿ ಪ್ರೀತಿ ಮತ್ತು ನಂಬಿಕೆ ಎರಡೂ ಮುಖ್ಯ ಅದೆರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು. ಹಾಗೆ ಹೋಗದಿದ್ದರೆ, ಏನೇನು ಆಗುತ್ತದೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಕಥೆ ಇದರಲ್ಲಿದೆ’ ಎಂದು ವಿವರಣೆ ಕೊಡುತ್ತಾರೆ.
ಇದನ್ನೂ ಓದಿ:ಯುವ ಮನಸ್ಸುಗಳಿಗೆ ಪ್ರೇಮಪಾಠ : ಮುಗಿಲ್ಪೇಟೆ
ಇನ್ನು ಚಿತ್ರದಲ್ಲಿ ನಾಯಕ ಸತ್ಯ ಲೋನ್ ರೆಕವರಿ ಹುಡುಗನಾಗಿ ಕಾಣಿಸಿಕೊಂಡರೆ, ನಾಯಕಿ ಸುಪ್ರೀತಾ ಬ್ಯಾಂಕ್ ಉದ್ಯೋಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇಬ್ಬರಿಗೂ ಹೊಸಥರದ ಪಾತ್ರವಾಗಿರುವುದರಿಂದ, ಚಿತ್ರದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಾರೆ.
“ಪ್ರೈಮ್ ಸ್ಟಾರ್ ಸ್ಟುಡಿಯೋ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ “ಮೆಲೋಡಿ ಡ್ರಾಮಾ’ ಚಿತ್ರಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ ಎಂ. ನಂಜುಂಡ ರೆಡ್ಡಿ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು