ರಾತ್ರಿ ಕರ್ಫ್ಯೂ ವ್ಯರ್ಥ ಪ್ರಯತ್ನ


Team Udayavani, Dec 24, 2020, 7:10 AM IST

ರಾತ್ರಿ ಕರ್ಫ್ಯೂ ವ್ಯರ್ಥ ಪ್ರಯತ್ನ

ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ವೈರಸ್‌ ಹರಡುವಿಕೆಯನ್ನು ತಡೆಯುವುದಕ್ಕಾಗಿ ರಾಜ್ಯ ಸರಕಾರ ಜನರ ಓಡಾಟ ತೀರಾ ಕಡಿಮೆಯಿರುವ ರಾತ್ರಿಯ ಸಮಯದಲ್ಲಿ “ಕರ್ಫ್ಯೂ’ ಜಾರಿ ಮಾಡಿದೆ. ಡಿಸೆಂಬರ್‌ 24ರಿಂದ ಜನವರಿ 2ರವರೆಗೆ ರಾತ್ರಿ ಗಂಟೆ 11ರಿಂದ ಮುಂಜಾವ 5ರ ವರೆಗೆ ಜಾರಿಯಲ್ಲಿರಲಿರುವ ಈ “ರಾತ್ರಿ ಕರ್ಫ್ಯೂ’ ಕೋವಿಡ್‌ ಸಾಂಕ್ರಾಮಿಕದ ತಡೆಗೆ ತೆಗೆದು ಕೊಳ್ಳಲಾಗುತ್ತಿರುವ ಕ್ರಮ ಎನ್ನಲಾಗಿದೆ. ಈ “ರಾತ್ರಿ ಕರ್ಫ್ಯೂ’ ಕೋವಿಡ್‌ ಅನ್ನು ಹೇಗೆ ತಡೆಯಬಲ್ಲದು ಎನ್ನುವುದಕ್ಕಂತೂ ಉತ್ತರವಿಲ್ಲ.

ದಿನವೆಲ್ಲ ಜನರು, ರೈಲು, ಬಸ್‌, ವಿಮಾನ ನಿಲ್ದಾಣಗಳಲ್ಲಿ, ಮಾರುಕಟ್ಟೆಗಳಲ್ಲಿ, ಮಾಲ್‌ಗಳಲ್ಲಿ, ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಕಿಕ್ಕಿರಿದು ತುಂಬುತ್ತಿದ್ದಾರೆ. ಸಾಮಾಜಿಕ ಅಂತರ ಪಾಲನೆಯಂತೂ ಎಲ್ಲೂ ಕಾಣಿಸುತ್ತಲೇ ಇಲ್ಲ. ನಿಜಕ್ಕೂ ಕೋವಿಡ್‌ ಸಾಂಕ್ರಾಮಿಕ ಹರಡುವ ಸಾಧ್ಯತೆ ಇರುವುದು ಈ ಸಮಯಗಳಲ್ಲೋ ಅಥವಾ ಜನರೆಲ್ಲ ಮನೆಗಳಿಗೆ ಹಿಂದಿರುಗಿ, ಕಚೇರಿಗಳೆಲ್ಲ ಬಾಗಿಲು ಹಾಕಿ ರಸ್ತೆಗಳೆಲ್ಲ ಖಾಲಿ ಹೊಡೆಯುವ ರಾತ್ರಿಯ ವೇಳೆಯಲ್ಲೋ? ಇದು ಸಮಸ್ಯೆ ಎಲ್ಲೋ ಇರುವಾಗ, ಪರಿಹಾರವನ್ನು ಇನ್ನೆಲ್ಲೋ ಹುಡುಕುವ ವ್ಯರ್ಥ ಪ್ರಯತ್ನದಂತೆಯೇ ಕಾಣಿಸುತ್ತಿದೆ. ವೈರಸ್‌ ಹೊಸ ಸ್ವರೂಪದ ಸುದ್ದಿ ಹರಡುತ್ತಿದ್ದಂತೆಯೇ ಮೊದಲು ಮಹಾರಾಷ್ಟ್ರ ಸರಕಾರ ರಾತ್ರಿ ಗಂಟೆ 11ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದೆ. ಬಹುಶಃ ರಾಜ್ಯ ಸರಕಾರದ ಈ ನಿರ್ಣಯಕ್ಕೂ ಮಹಾರಾಷ್ಟ್ರವೇ ಮಾದರಿಯಾಗಿರಬೇಕು. ಆದರೆ ಇದರ ಅಗತ್ಯ ಹಾಗೂ ಫ‌ಲಪ್ರದದ ಕುರಿತು ಮೊದಲು ಚಿಂತಿಸಬೇಕಿತ್ತೆನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ರಾತ್ರಿ ಕರ್ಫ್ಯೂ ಜಾರಿ ಮಾಡುವ ವಿಚಾರದಲ್ಲಿ ಸರಕಾರ ತೋರಿಸಿದ ಅತಿಯಾದ ಗೊಂದಲವೂ ಜನಸಾಮಾನ್ಯರಲ್ಲಿ ಅನಗತ್ಯ ಆತಂಕಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಒಮ್ಮೆ ರಾತ್ರಿ 10ರಿಂದ ಮುಂಜಾವ 6 ಗಂಟೆಯವರೆಗೆ ಕರ್ಫ್ಯೂ ಎಂದು ಆದೇಶ ಜಾರಿ ಮಾಡಲಾಗಿತ್ತು. ಈ ನಿರ್ಣಯಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕರ್ಫ್ಯೂ ಸಮಯವನ್ನು ರಾತ್ರಿ 11 ಗಂಟೆಯಿಂದ 5ರ ವರೆಗೆ ಬದಲಿಸಿ, ರಾತ್ರಿ 11 ಗಂಟೆಗೂ ಮುಂಚೆಯೇ ಸಾರ್ವಜನಿಕರು ಬಸ್‌, ರೈಲು, ಆಟೋ, ಟ್ಯಾಕ್ಸಿಯಲ್ಲಿ ಪಯಣಿಸಬಹುದು ಎನ್ನಲಾಗಿದೆ. ಜನಸಂಚಾರ ತೀರಾ ನಗಣ್ಯವೆನ್ನಿಸುವಂತಿರುವ ರಾತ್ರಿಯ ಹೊತ್ತಲ್ಲಿ ಕರ್ಫ್ಯೂ ಜಾರಿ ಮಾಡಿದ್ದರಿಂದಾಗಿ ಸೋಂಕು ಹರಡುವಿಕೆ ಪ್ರಮಾಣ ತಗ್ಗುತ್ತದೆಯೇ? ಯಾವುದೇ ವ್ಯತ್ಯಾಸ ಉಂಟುಮಾಡದ ಇಂಥ ನಿಯಮದ ಜಾರಿಯ ಅಗತ್ಯವೇನಿತ್ತು ಎಂಬ ಪ್ರಶ್ನೆ ಎದುರಾಗುತ್ತದೆ.

ಒಂದೆಡೆ ಬ್ರಿಟನ್ ನಲ್ಲಿ ಕಾಣಿಸಿಕೊಂಡ ಕೋವಿಡ್‌ ರೂಪಾಂತರ ಭಾರತದಲ್ಲಿ ಎಲ್ಲೂ ಪತ್ತೆಯಾಗಿಲ್ಲ ಎಂದು ರಾಜ್ಯ ಸರಕಾರವೇ ಹೇಳುತ್ತಿದೆ. ಇನ್ನೊಂದೆಡೆ ಖುದ್ದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಸಹ ವೈರಸ್‌ ಬಗ್ಗೆ ಆತಂಕ ಬೇಡ, ಇದೆಲ್ಲ ಕಾಲ್ಪನಿಕ ಪ್ಯಾನಿಕ್‌. ಇದರಲ್ಲಿ ನೀವು ಭಾಗಿಯಾಗಬೇಡಿ ಎಂದು ದೇಶವಾಸಿಗಳಿಗೆ ಸಂದೇಶ ನೀಡುತ್ತಾರೆ. ಹೀಗಿರುವಾಗ ಹಠಾತ್ತನೆ ಕರ್ಫ್ಯೂ ಜಾರಿ ಮಾಡುತ್ತೇವೆ ಎಂದಾಗ ಸಹಜವಾಗಿಯೇ ಜನರಿಗೆ ಆತಂಕ ಆಗಿತ್ತು. ಆದರೆ ನಿಸ್ಸಂಶಯವಾಗಿಯೂ ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು, ವಿಧಾನಸೌಧದಲ್ಲಿ ಬುಧವಾರವಿಡೀ ನಡೆದ ಗೊಂದಲದ ನಡೆಗಳು. ಇದರ ಬೆನ್ನಲ್ಲೇ, ಬ್ರಿಟನ್‌ ಹೊರತುಪಡಿಸಿ ಉಳಿದ ದೇಶಗಳಿಂದ ಬರುವ ಪ್ರಯಾಣಿಕರಿಗೆ ಯಾವ ಕ್ವಾರಂಟೈನ್‌ ಕ್ರಮವೂ ಇಲ್ಲದಿರುವುದು ಸೋಜಿಗ. ಕೋವಿಡ್‌ನಿಂದಾಗಿ ದೇಶದ ಆರ್ಥಿಕತೆ ದುರ್ಬಲವಾಗಿದೆ. ಇದನ್ನು ಗಮನಿಸಿದರೆ ಮತ್ತೆ ಲಾಕ್‌ಡೌನ್‌ನಂಥ ಕ್ರಮಗಳನ್ನು ಜಾರಿ ಮಾಡಿದರೆ ದೇಶವಾಸಿಗಳ ಆರ್ಥಿಕ ಸ್ಥಿತಿಗೆ ದೊಡ್ಡ ಪೆಟ್ಟು ಬೀಳುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಹೀಗಾಗೇ ಸದ್ಯಕ್ಕೆ ಸರಕಾರದ ಮುಂದಿರುವ ಮಾರ್ಗವೆಂದರೆ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲನೆಯಾಗುವುದನ್ನು ಖಾತ್ರಿ ಪಡಿಸುವುದು, ಲಸಿಕೆ ಬರುವವರೆಗೂ ಸುರಕ್ಷತ ಕ್ರಮಗಳ ಪಾಲನೆ ಮುಖ್ಯ ಎಂದು ಜನರಲ್ಲಿ ಜಾಗೃತಿ ಮೂಡಿಸುವುದು.

ಟಾಪ್ ನ್ಯೂಸ್

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.